Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, December 27, 2015

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 270/2015 ಕಲಂ. 87 Karnataka Police Act.
ದಿನಾಂಕಃ-26-12-2015 ರಂದು ಮದ್ಯಾಹ್ನ 13-45 ಗಂಟೆಗೆ ಪಿ.ಎಸ್.ಐ ಸಾಹೇಬರು ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಇಸ್ಪೀಟ್ ಜೂಜಾಟದ ವರದಿ ಮತ್ತು ಮೂಲ ಪಂಚನಾಮೆ ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶದಲ್ಲಿ ಇಂದು ದಿನಾಂಕಃ-26-12-2015 ರಂದು ಬೆಳಿಗ್ಗೆ 11-45 ಗಂಟೆಗೆ ನಂದಿಹಳ್ಳಿ ಗ್ರಾಮದ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿದ್ದು ಇಸ್ಪೀಟ್ ಜುಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು ಉಳಿದ 10 ಜನರು ಓಡಿ ಹೋಗಿದ್ದು ಸಿಕ್ಕ ಆರೋಪಿತರ ಕಡೆಯಿಂದ ಒಟ್ಟು ನಗದು ಹಣ ರೂ.4630/- ಗಳು ಮತ್ತು ಇಸ್ಪೀಟ್ ಜೂಜಾಟದ ಸಮಾಗ್ರಿಗಳನ್ನ ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 271/2015 ಕಲಂ. 32, 34 Karnataka Excise Act
ದಿನಾಂಕಃ-24-12--2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಹೊಸ ಜೂರಟಗಿ ಗ್ರಾಮದಲ್ಲಿ ಸೋಮಣ್ಣ ತಂದಿ ಹನಮಂತಪ್ಪ ಕಲ್ಮನಿ ಇತನು ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಮಾನ್ಯ ಪಿ.ಎಸ್.ಐ.  ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದ್ದು  ಆರೋಪಿ ಸೋಮಣ್ಣ ಓಡಿ ಹೊಗಿದ್ದು  ಅವನ ಕಪಾಟಿನಲ್ಲಿ ಅಕ್ರಮ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಸೋಮಣ್ಣನ ಕಪಾಟಿನಲ್ಲಿ ಒಟ್ಟು ಅಂ.ಕಿ 2,227=58- ರೂಗಳು ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮತ್ತು ಪಂಚನಾಮೆ ಮಾಡಿಕೊಂಡು ಠಾಣೆಗೆ 8-30 ಬಂದು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ನೀಡಿದ್ದರ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 199/2015 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 26-12-2015 ರಂದು ಮುಂಜಾನೆ 6-15 ಗಂಟೆಗೆ ಫಿರ್ಯಧಿದಾರ ಶ್ರೀ ಸಲಿಂಸಾಬ ತಂದೆ ಸೈಯದಸಾಬ ಗೋಡೆಕಾರ ಸಾ: ಕನಕಗಿರಿ ಇವರು ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 25-12-2015 ರಂದು ಸಂಜೆ 5-00 ಗಂಟೆಯ ಸುಮಾರಿಗೆ ನನ್ನ ಅಪೇ ವಾಹನ ರಿಪೇರಿ ಇದ್ದುದ್ದರಿಂದ ಅದನ್ನು ರಿಪೇರಿ ಮಾಡಿಸಲು ಗಂಗಾವತಿಗೆ ಹೊಗಿ ಅಲ್ಲಿ ನನ್ನ ವಾಹನವನ್ನು ರಿಪೇರಿ ಮಾಡಿಸಿಕೊಂಡು ವಾಪಸ್ ನನ್ನ ಅಪೇ ವಾಹನವನ್ನು ತೆಗೆದುಕೊಂಡು ರಾತ್ರಿ ಸುಮಾರು 11-00 ಗಂಟೆಯ ಸುಮಾರಿಗೆ ಗಂಗಾವತಿ ಬಿಟ್ಟು ಕನಕಗಿರಿ ಕಡೆ ಹೋಗುತ್ತಿದ್ದೇನು. ಇಂದು 26-12-2015 ರಂದು ಮದ್ಯರಾತ್ರಿ 12-30 ಗಂಟೆಯ ಸುಮಾರಿಗೆ ಸುಳೇಕಲ್ ಕ್ರಾಸ್ ದಾಟಿ ಕನಕಗಿರಿ ಕಡೆ ಹೋಗುತ್ತಿದ್ದಾಗ ಇನ್ನೂ ತಿಪ್ಪನಾಳ ಕ್ರಾಸ್ 1 ಕೀ,.ಮೀ ಇರುವಾಗ ತಿರುವಿನಲ್ಲಿ ಒಬ್ಬ ವ್ಯಕ್ತಿಯು ರಸ್ತೆ ಅಪಘಾತದಿಂದ ಭಾರಿ ಗಾಯಗೊಂಡು ರಸ್ತೆಯ ಮೇಲೆ ಬಿದ್ದಿದ್ದು, ಅವನ ಹತ್ತಿರ ರಸ್ತೆಯ ಮೇಲೆ ಟಿ.ವಿ.ಎಸ್. ಎಕ್ಸ್ಎಲ್ ಸುಪರ್ ಮೋ.ಸೈ. ನಂ.ಕೆಎ-37/ವಿ-2575 ಅಂತಾ ಇದ್ದು, ಅವನ ಹತ್ತಿರ ಹೋಗಿ ನೋಡಲಾಗಿ, ಬಲಗಡೆ ತಲೆಗೆ ಭಾರಿ ಪೆಟ್ಟಾಗಿದ್ದು, ಮೂಗು, ಕಿವಿ ಯಿಂದ ರಕ್ತ ಬಂದಿರುವದು ಕಂಡು ಬಂದಿದ್ದು, ಅವನಿಗೆ ಸುಮಾರು 23-25 ವಯಸ್ಸಿನವುಳ್ಳವನಾಗಿರುತ್ತಾನೆ, ಸಾದಾ ಕಪ್ಪು ಬಣ್ಣ ಇದ್ದು, ಉದ್ದವಾದ ಮುಖ ಇದ್ದು, ಮೈ ಮೇಲೆ ಒಂದು ತುಂಬಾ ತೋಳಿನ ಪುಲ್ ಶರ್ಟ, ಕಪ್ಪು ಪ್ಯಾಂಟ್ ಧರಿಸಿರುತ್ತಾನೆ. ಸದ್ಯ ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ನಿನ್ನೆ ದಿನಾಂಕ 25-12-2015 ರಂದು ರಾತ್ರಿ 10-30 ರಿಂದ 11-00 ಗಂಟೆಯ ಅವಧಿಯಲ್ಲಿ ಸುಮಾರು 23-25 ವರ್ಷ ವಯಸ್ಸಿನ ವ್ಯಕ್ತಿಯು ಟಿ.ವಿ.ಎಸ್. ಮೋ.ಸೈ. ನಂ.ಕೆಎ-37/ವಿ-2575 ನೇದ್ದನ್ನು ಗಂಗಾವತಿ ಕಡೆಯಿಂದ ಕನಕಗಿರಿ ಕಡೆ ಹೋಗುತ್ತಿದ್ದಾಗ ತಿಪ್ಪನಾಳ-ಸುಳೇಕಲ್ ರಸ್ತೆಯ ತಿರುವಿನಲ್ಲಿ ಯಾವುದೇ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋ.ಸೈ.ಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೇ ಓಡಿ ಹೋಗಿದ್ದು ಇರುತ್ತದೆ. ಇದರಿಂದ ಮೋ.ಸೈ. ಚಾಲಕನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 257/2015 ಕಲಂ. 420 ಐ.ಪಿ.ಸಿ:.

ದಿನಾಂಕ 23.09.2015 ರಂದು ಫಿರ್ಯಾದಿದಾರರಿಗೆ ಅನಾಮದ್ಯೇಯ ವ್ಯಕ್ತಿಯೊಬ್ಬ ತನ್ನ ಪೋನ್ ನಂ 9709605735 ನೇದ್ದರಿಂದ ಕರೆಮಾಡಿ ತಾನು ಆರ್,ಬಿ.ಐ ಅಧಿಕಾರಿಯಿದ್ದು ತಮ್ಮ ಬಳಿಯಿರುವ ಎ.ಟಿ.ಎಮ್ ಕಾರ್ಡ್ ಗಳ ನಂ ಗಳನ್ನು ಹೇಳಿರಿ ಅಂತಾ ತಿಳಿಸಿದ ಮೇರೆಗೆ ಅದನ್ನು ಪಿರ್ಯಾದಿದಾರರು ನಂಬಿ ತಮ್ಮ ಬಳಿ ಇರುವ ಎಸ.ಬಿ.ಐ. ಎಸ್.ಬಿ.ಎಮ್ ಬ್ಯಾಂಕಿನ ಎ.ಟಿ.ಎಮ್ ನಂಬರಗಳನ್ನು ನೀಡಿದ್ದು ಅದನ್ನು ಅನಾಮದ್ಯೇಯ ವ್ಯಕ್ತಿಯು ಪಡೆದುಕೊಂಡು ಫಿರ್ಯಾದಿದಾರರ ಬ್ಯಾಂಕ ಖಾತೆಯಿಂದ ಕ್ರಮವಾಗಿ 49,894=00, 31,997=00 ಹೀಗೆ ಒಟ್ಟು 81,891=00 ರೂಗಳನ್ನು ತೆಗೆದುಕೊಂಡು ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008