Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 31, 2015

1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 279/2015 ಕಲಂ. 78(3) Karnataka Police Act.
ದಿನಾಂಕ 30-12-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ ಹೊಸ ಲಿಂಗಾಪೂರ  ಗ್ರಾಮದ Pɧ£Á¯ï ©æqïÓ ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಮಟಕಾ  ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ  ಮೇರೆಗೆ ಶೇಷಗಿರಿರಾವ್ ಎ.ಎಸ್.ಐ ರವರು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಹಿಡಿದು ಒಬ್ಬನು ಆರೋಪಿಯು ಸಿಕ್ಕಿದು ಅವರಿಂದ ಜೂಜಾಟದ ಸಾಮಾಗ್ರಿಗಳಾದ ಮಟಕಾ ಪಟ್ಟಿ ,ಒಂದು ಬಾಲ ಪೆನ್ನು ಜೂಜಾಟದ ನಗದು ಹಣ 770-00 ರೂ.ಗಳನ್ನು ಜಪ್ತು ಮಾಡಿ ಮೂಲ ಪಂಚನಮೆ ಹಾಗೂ ಪಿರ್ಯದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 305/2015 ಕಲಂ. 87 Karnataka Police Act.
ದಿನಾಂಕ 30-12-2015 ರಂದು 16-30 ಗಂಟೆಗೆ ಶ್ರೀ ಈ,ಕಾಳಿಕೃಷ್ಣ  ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 05 ಜನರೊಂದಿಗೆ, ಜಪ್ತಿಪಂಚನಾಮೆ ಹಾಗೂ ವರಧಿಯನ್ನು ನೀಡಿ ಸದರಿಯವರ ಮೇಲೆ  ಕ್ರಮ ಜರುಗಿಸಲು ಸೂಚಿಸಿದ್ದು ವರದಿ ಸಾರಾಂಶವೇನೆಂದರೆ,   ಇಂದು ದಿನಾಂಕ 30-12-2015 ರಂದು 15-00 ಗಂಟೆಗೆ ನಮೂದಿತ ಆರೋಪಿತರು ಗಂಗಾವತಿ ನಗರದ ಕೋಟೇ ಆಂಜನೇಯ ದೇವಸ್ತಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 2,600-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಬಗ್ಗೆ ಪಂಚರ ಸಮಕ್ಷಮ 15-00 ಗಂಟೆಯಿಂದ 16-00 ಗಂಟೆಯವರೆಗೆ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಸದರಿ ಪ್ರಕರಣವು ಎನ್.ಸಿ. ಸ್ವರೂಪದ ಪ್ರಕರಣವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 368/2015 ಕಲಂ. 78(3) Karnataka Police Act.

ದಿನಾಂಕ: 30-12-2015 ರಂದು ರಾತ್ರಿ 10:00 ಗಂಟೆಗೆ ಶ್ರೀ ಆಂಜನೇಯ ಡಿ.ಎಸ್. ಪಿ.ಎಸ್.ಐ. ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 30-12-2015 ರಂದು ಸಂಜೆ 7:30 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದ ಗಾಂದಿ ಪ್ರತಿಮೆ ಹತ್ತಿರ ಗುಜರಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಟಾಟ ನೆಡೆಯುತ್ತಿದೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ.ಸಾಹೇಬರು ಮಾರ್ಗದರ್ಶನದಂತೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ 100, 287, ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆಎ-37/ಜಿ-262 ನೇದ್ದರಲ್ಲಿ ಜೀಪ್ ಚಾಲಕ ಎ.ಪಿ.ಸಿ. ಬಾಸ್ಕರ್ ರವರೊಂದಿಗೆ ಗಂಗಾವತಿಯಿಂದ ಹೊರಟು ಬಸಾಪಟ್ಟಣ ಗ್ರಾಮ ಸಮೀಪ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿ ನಡೆದುಕೊಂಡು ರಾತ್ರಿ 8:00 ಗಂಟೆಗೆ ಹೋಗಿ ನೋಡಲಾಗಿ ಗುಜರಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸೇರಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ನಸಿಬದ ಮಟಕಾ ಜೂಜಾಟ ಅಂತಾ ಕೂಗುತ್ತಾ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದು, ಇನ್ನೊಬ್ಬನು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಕೂಡಲೇ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರೆಲ್ಲರೂ ಅಲ್ಲಿಂದ ಓಡಿ ಹೋಗಿದ್ದು, ಸಿಕ್ಕಿಬಿದ್ದವನನ್ನು ವಿಚಾರಿಸಲು ಅವನು ತನ್ನ ಹೆಸರು ಹಸನ್ ತಂದೆ ಮರ್ದಾನಸಾಬ ರಾಡಬೈಂಡಿಂಗ್ ಕೆಲಸ ವಯಸ್ಸು: 29 ವರ್ಷ ಜಾತಿ: ಮುಸ್ಲಿಂ, ಉ: ಡ್ರೈವರ್ ಕೆಲಸ ಸಾ: ವಡ್ಡರಹಟ್ಟಿ ಹಾ:ವ: ಬಸಾಪಟ್ಟಣ 4 ನೇವಾರ್ಡ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 1260-00 ರೂ, 01 ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಅಲ್ಲಿಂದ ಓಡಿ ಹೋಗಿದ್ದ ಅಕ್ಕಪ್ಪ ಸಾ: ಜಯನಗರ-ಗಂಗಾವತಿ ಮೊಬೈಲ್ ನಂ: 9060621099 ಎಂಬುವವನಿಗೆ ಕೊಡುವುದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 8:00 ಗಂಟೆಯಿಂದ 9:00 ಗಂಟೆಯವರಗೆ ಸ್ಥಳದಲ್ಲಿಯೇ ನಿರ್ವಹಿಸಿ ಆರೋಪಿತನೊಂದಿಗೆ ವಾಪಸ್ಸು ಠಾಣೆಗೆ ಬಂದು ಸದರಿ ಆರೋಪಿತರ ವಿರುದ್ದ ಕಲಂ: 78(3) ಕೆಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008