Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, June 30, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 184/2016 ಕಲಂ: 489(ಬಿ)(ಸಿ) ಐ.ಪಿ.ಸಿ:.
ದಿನಾಂಕ:- 29-06-2016 ರಂದು ಮಧ್ಯಾಹ್ನ 1:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದ ಟೈಮ್ ಮ್ಯೂಜಿಕ್ ಸೆಂಟರನ ಮಾಲೀಕರಾದ ವಿಷ್ಣುಕುಮಾರ ಎಂಬುವರು ಕರೆ ಮಾಡಿ ತಮ್ಮ ಅಂಗಡಿಗೆ ಉತ್ತರ ಭಾರತದ ಒಬ್ಬ ವ್ಯಕ್ತಿಯು ಬಂದು ಏರ್ ಫೋನನ್ನು ಖರೀದಿಸಲು ಒಂದು ಸಾವಿರ ರೂಪಾಯಿಯ ನೋಟನ್ನು ಕೊಟ್ಟಿದ್ದು, ಆದರೆ ನೋಟು ಖೋಟಾ ನೋಟು ಇರಬಹುದೆಂದು ಫೋನ್ ಮೂಲಕ ತಿಳಿಸಿದ್ದು  ಕೂಡಲೇ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್..  ಶ್ರೀರಾಮನಗರದ ಟೈಮ್ ಮ್ಯೂಜಿಕ್ ಸೆಂಟರಗೆ ಭೇಟಿ ನೀಡಿ ಸ್ಥಳದಲ್ಲಿ ಕೂಡ್ರಿಸಿದ್ದಂತಹ ವ್ಯಕ್ತಿಯನ್ನು ವಿಚಾರಿಸಲು ಅವನು ತನ್ನ ಹೆಸರು ಮಹ್ಮದ್ ಸೈದುಲ್ ಶೇಖ್ ತಂದೆ ಮಕ್ಬುಲ್ ಶೇಖ್, ವಯಸ್ಸು 24 ವರ್ಷ, ಜಾತಿ: ಮುಸ್ಲೀಂ : ಮಾವಿನ ಹಣ್ಣುಗಳನ್ನು ಪ್ಯಾಕಿಂಗ್ ಮಾಡುವ ಕೆಲಸ ಸಾ: ಬೆಂಗಡುಬ್ಬಿ, ರಾಜಮಲ್ ಪಿ.ಎಸ್. ಜಿಲ್ಲಾ: ಸಾಹೇಬ ಗಂಜ್, ರಾಜ್ಯ: ಝಾರ್ಕಂಡ್ ಅಂತಾ ತಿಳಿಸಿದ್ದು, ಅವನನ್ನು ಪರಿಶೀಲಿಸಲು ಅವನ ಹತ್ತಿರ ಒಂದು ಸಾವಿರ ರೂಪಾಯಿ ಮುಖ ಬೆಲೆಯ 5 ನೋಟುಗಳು ಇದ್ದು, ಅವುಗಳ ನಂಬರ್:  4FH 887680,  4FH 887681, 4FH 890515, 4FH 890516, 4FH 887679 ಅಂತಾ ಇದ್ದು, ನೋಟುಗಳು ಖೋಟಾ ನೋಟು ಹೌದೇ ? ಅಥವಾ ಅಲ್ಲವೇ ? ಎಂಬ ಬಗ್ಗೆ   ಶ್ರೀರಾಮನಗರದ ಸಿಂಡಿಕೇಟ್ ಬ್ಯಾಂಕಿನಲ್ಲಿ ಪರಿಶೀಲನೆ ಮಾಡಿಸಿ ಈ 5 ನೋಟುಗಳೂ ಖೋಟಾ ನೋಟು ಇವೆ ಅಂತಾ ಬ್ಯಾಂಕಿನವರು ದೃಢೀಕರಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 127/2016 ಕಲಂ: 78(3) Karnataka Police Act.
ದಿನಾಂಕ 29-06-2016 ರಂದು 19-15 ಗಂಟೆಯ ಸುಮಾರಿಗೆ ಆರೋಪಿತನಾದ ಸಿದ್ದಪ್ಪ ತಂದೆ ಕುಪ್ಪಣ್ಣ ವಗ್ಗಾ ವಯಸ್ಸು 48 ವರ್ಷ ಜಾ:ಪದ್ಮಸಾಲಿ  ಉ:ಸ್ಕೂಲ್ ಬ್ಯಾಗ್ ವ್ಯಾಪಾರ ಸಾ: ಹುಲಿಗೆಮ್ಮ ದೇವಸ್ಥಾನದ ಹತ್ತಿರ ಲಕ್ಷ್ಮೀಕ್ಯಾಂಪ್,  ಕೃಷ್ಣದೇವರಾಯ ವೃತ್ತದ ಹತ್ತಿರ ರುವ ಪಾರ್ಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಶ್ರೀ ರಾಮಪ್ಪ ನಾಯ್ಕ್ ಪಿ.ಎಸ್.ಐ.  ಪಿ.ಎಸ್.ಐ. (ಅ.ವಿ) ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ನಗದು ಹಣ ರೂ.545-00 [02] ಒಂದು ಸ್ಯಾಮಸಂಗ್ ಕಂಪನಿಯ ಮೊಬೈಲ್ ಅಂ.ಕಿ.ರೂ.100-00. [03] ಒಂದು ಮಟ್ಕಾ ನಂಬರ ಬರೆದ ಪಟ್ಟಿ, (04) ಒಂದು ಬಾಲ್ ಪೆನ್ನು ಜಪ್ತಿ ಪಡಿಸಿದ್ದು ಇರುತ್ತದೆ.  ಆರೋಪಿತನಿಂದ ಜಪ್ತಿ ಪಡಿಸಿದ ಮುದ್ದೆಮಾಲನ್ನು ಪಂಚರ ಸಮಕ್ಷಮ 7-15 ಪಿ.ಎಂ. ದಿಂದ 8-00 ಪಿ.ಎಂ. ದ ವರೆಗೆ ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದು ಕೊಂಡಿರುತ್ತಾರೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 135/2016 ಕಲಂ: 78(3) Karnataka Police Act.

ದಿನಾಂಕ 29-06-2016 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ  ಬಸವಣ್ಣಕ್ಯಾಂಪ್ ಉಣ್ಣಿ ಬಸವೇಶ್ವರ ಗುಡಿ  ಹಿಂದೆ  ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿ ನಂ1) ಲಕ್ಷ್ಮೀ ನಾಯರಾಯಣ ತಂದಿ ಶ್ರೀನಿವಾಸ ರಾವ್ ಸಾ. ಬಸವಣ್ಣಕ್ಯಾಂಪ್ ಈತನ ಮೇಲೆ ಶ್ರೀ. ನಿಂಗಪ್ಪ ಪಿ.ಎಸ್.ಐ ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ  ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು  ಆತನಿಂದ ರೂ. 1385=00 ಗಳನ್ನು ಜಪ್ತ ಮಾಡಿಕೊಂಡು  ಈತನು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಬಸವಂತಪ್ಪ ಕಬ್ಬೆರ ಸಾ. ಜಂಬುನಾಥನ ಹಳ್ಳಿ ತಾ. ಸಿಂಧನೂರು ಈತನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008