Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 30, 2016

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 87/2016 ಕಲಂ: 143, 504, 448, 302, ಸಹಿತ 149 ಐ.ಪಿ.ಸಿ.
ದಿನಾಂಕ: 29-08-2016 ರಂದು ಸಂಜೆ ಹನಕುಂಟಿ ಗ್ರಾಮದಲ್ಲಿ ಮೃತ ವೀರಣ್ಣ ತಂದೆ ದೇವಪ್ಪ ರಕರಡ್ಡಿ ಹಾಗೂ ಹನುಮಂತಪ್ಪ ತಂದೆ ಶಂಕ್ರಪ್ಪ ತಳವಾರ, ಜಯವ್ವ ಗಂಡ ಹನುಮಂತಪ್ಪ ತಳವಾರ, ರೇವಕ್ಕ ಗಂಡ ಶಂಕ್ರಪ್ಪ ತಳವಾರ, ಶಂಕ್ರಪ್ಪ ತಳವಾರ, ಶಿವಮೂರ್ತಿ ತಂದೆ ಶಂಕ್ರಪ್ಪ ತಳವಾರ, ಪವಿತ್ರಾ ತಳವಾರ  ಎಲ್ಲರೂ ಸಾ: ಹನಕುಂಟಿ ಗ್ರಾಮ ಇವರ ನಡುವೆ ಕಿರಾಣಿ ಅಂಗಡಿಯ ಬಾಕಿ ಕೊಡುವ ವಿಷಯಕ್ಕೆ ಜಗಳವಾಗಿ ವೀರಣ್ಣನಿಗೆ ಭಾರಿ ಗಾಯವಾಗಿ ಚಿಕಿತ್ಸೆ ಕುರಿತು ಬೆಟಗೇರಿ ಸರಕಾರಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾನೆ. ಸದರಿ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 250/2016 ಕಲಂ. 110 (ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ:- 29-08-2016 ರಂದು ಮಧ್ಯಾಹ್ನ 12:30 ಗಂಟೆಗೆ ಶ್ರೀ ಶಿವಪುತ್ರಪ್ಪ ಬಿಳೆಗುಡ್ಡ, ಪಿ.ಸಿ. ನಂ: 118 ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಕನರ್ಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ಸ್ವಂತ ಫಿಯರ್ಾದಿ ಸಲ್ಲಿಸಿದ್ದು, ಅದರ ಸಾರಂಶ ಈ ಪ್ರಕಾರ ಇದೆ. ಇಂದು ದಿನಾಂಕ: 29-08-2016 ರಂದು ಮಾನ್ಯ ಪಿ.ಎಸ್.ಐ. ರವರ ಆದೇಶದ ಮೇರೆಗೆ ನಾನು ಮುಂಬರುವ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಮಾಹಿತಿ ಸಂಗ್ರಹಿಸಿಕೊಂಡು ಬರಲು ಠಾಣಾ ವ್ಯಾಪ್ತಿಯ ಆನೆಗುಂದಿ, ವಿರುಪಾಪೂರಗಡ್ಡಿ, ಸಣಾಪೂರ, ಗ್ರಾಮಗಳ ಕಡೆಗೆ ಹೋದಾಗ ವಿರುಪಾಪೂರ ಗಡ್ಡಿ ಗ್ರಾಮಕ್ಕೆ ಹೋದಾಗ ರೌಡಿ ಶೀಟದಾರರಾದ 1] ಪಂಪಾ @ ಪಂಪಾಪತಿ ತಂದೆ ಹಳ್ಳಪ್ಪ, ವಯಸ್ಸು 35 ವರ್ಷ, ಜಾತಿ: ಚಲವಾದಿ ಉ: ಕೂಲಿ ಕೆಲಸ ಸಾ: ವಿರುಪಾಪೂರು ಗಡ್ಡಿ ತಾ: ಗಂಗಾವತಿ 2] ಕೆ.ಪಿ. ನಾಗೇಶ್ವರರಾವ್ @ ಭೀಮುಡು ತಂದೆ ರಾಮಕೋಟಯ್ಯ, 50 ವರ್ಷ, ಸಾ: ವಿರುಪಾಪುರು ಗಡ್ಡಿ ತಾ: ಗಂಗಾವತಿ ಇವರುಗಳ ಬಗ್ಗೆ ಗ್ರಾಮಸ್ಥರಿಂದ ಭಾತ್ಮಿ ಸಂಗ್ರಹಿಸಲಾಗಿ ಅವರು ತಮ್ಮ ಪ್ರವೃತ್ತಿಯನ್ನು ಮುಂದುವರಿಸಿದ್ದು ಅವರ ಮೇಲೆ ಈಗಾಗಲೇ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರ ಹಿನ್ನಲೆಯಲ್ಲಿ ರೌಡಿ ಶೀಟರ ತೆರೆದಿದ್ದು ಇರುತ್ತದೆ. ಕಾರಣ ಸದ್ಯ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಅವರು ಆ ಸಂದರ್ಭದಲ್ಲಿ ಪುನ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ದಾಮರ್ಿಕ ಕಾರ್ಯಕ್ರಮ ನಡೆಯುವ ಕಾಲಕ್ಕೆ ಇತರರೊಂದಿಗೆ ಸೇರಿಕೊಂಡು ತನ್ನ ರೌಡಿ ಚಟುವಟಿಕೆಯನ್ನು ಮುಂದುವರಿಸಿ ಗ್ರಾಮದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕದಡುವ ಸಾಧ್ಯತೆಗಳು ಕಂಡು ಬಂದ ಹಿನ್ನಲೆಯಲ್ಲಿ ಬೆಳಿಗ್ಗೆ 11:30 ಗಂಟೆಗೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದಿದ್ದು, ಸದರಿ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಮತ್ತು ಶಾಂತಿ ಪಾಲನೆಗಾಗಿ ಸದರಿಯವರ ಮೇಲೆ ಮುಂಜಾಗ್ರತೆ ಕುರಿತು ಕಾನೂನು ಕ್ರಮ ಜರುಗಿಸಲು ಈ ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008