Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, December 30, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 230/2016 ಕಲಂ 78(3) Karnataka Police Act.
ದಿನಾಂಕ 29.12.2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ಶ್ರೀ ರವಿ.ಸಿ.ಉಕ್ಕುಂದ  ಪಿ.ಐ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ 29.12.2016 ರಂದು ಸಂಜೆ   7-45 ಗಂಟೆಗೆ ಕೊಪ್ಪಳ ನಗರದ ಆಜಾದ್ ಸರ್ಕಲ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಸಿಬ್ಬಂದಿಗಳನ್ನು ಮತ್ತು ಪಂಚರನ್ನು ಕರೆದುಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ಆಜಾದ್ ಸರ್ಕಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಚೀಟಿಯನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಆಡಲು ಕರೆಯುತ್ತಿದ್ದಾಗ ರಾತ್ರಿ 7-45 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ದಸ್ತಗಿರಿ ಮಾಢಿ ಆತನಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ  670=00 ರೂ, ಮಟಕಾ ಜೂಜಾಟದ ಪಟ್ಟಿ, ಒಂದು ಬಾಲ್ ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 252/2016 ಕಲಂ 78(3) Karnataka Police Act.
ದಿನಾಂಕ: 29-12-2016 ರಂದು ರಾತ್ರಿ 6.45 ಗಂಟೆಗೆ ಶ್ರೀ ಮಹಾಂತೇಶ ಎ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:29-12-2016 ರಂದು ಸಂಜೆ 5.10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಪಂಚಾಯತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂ: 01 ಶ್ರೀಶೈಲ್ ಮಟಕಾ ಬರೆದ ಹಣ ಪಡೆಯುತ್ತಿದ್ದಾಗ, ಆರೋಪಿ ನಂ-2 ಚಿನ್ನಪ್ಪ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ. ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಎ.ಎಸ್.ಐ ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿ ನಂ: 01 ಇತನಿಂದ ನಗದು ಹಣ ರೂ 370=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 253/2016 ಕಲಂ 78(3) Karnataka Police Act.
ದಿನಾಂಕ: 29-12-2016 ರಂದು ರಾತ್ರಿ 8 ಗಂಟೆಗೆ ಶ್ರೀ ಗುರುರಾಜ ಕಟ್ಟಿಮನಿ, ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:29-12-2016 ರಂದು ಸಂಜೆ 6.30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಬಸ್ ನಿಲುಗಡೆ ಸ್ಥಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ಈರಪ್ಪ ತಂದೆ ಈರಪ್ಪ ಜಾಲಿಹಾಳ ಈತನು ರಸ್ತೆಯಲ್ಲಿ ಹೋಗು ಬರುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಜನರಿಂದ ಹಣ ಪಡೆದು ಮಟ್ಕಾ ನಂಬರ್ ಚೀಟಿ ಬರೆದು ಕೊಡುತ್ತಿದ್ದಾಗ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 410=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.   
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 251/2016 ಕಲಂ: 279, 337, 338 ಐ.ಪಿ.ಸಿ:.

ದಿ:29-12-16 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ತಮ್ಮ ಗ್ರಾಮದ ಶಂಕರಪ್ಪ ಇವರ ಮೋಟಾರ ಸೈಕಲ್ ನಂ: ಕೆಎ-36/ಇ.ಹೆಚ್.-0862 ನೇದ್ದರಲ್ಲಿ ತಾನು ಮತ್ತು ಇಮಾಂಬಿ ಮತ್ತು ಇಮಾಂಬಿ ಇವರ ಮಗಳು ಖಾಸಿಂಬಿ ಕುಳಿತುಕೊಂಡು ಹುಲಿಗಿಯಿಂದ ವಾಪಾಸ್ ತಮ್ಮ ಊರಿಗೆ ಅಂತಾ ಹೋಗುವಾಗ ಹೊಸಪೇಟೆ-ಕುಷ್ಟಗಿ ರಸ್ತೆಯ ಒಣಬಳ್ಳಾರಿ ದಾಟಿ ತಮ್ಮ ಮೋಟಾರ ಸೈಕಲ್ ಚಾಲಕ ಶಂಕರಪ್ಪನು ಒನ್ ವೇ ದಾರಿಯನ್ನು ಗಮನಿಸದೇ ತನ್ನ ಬಲಗಡೆ ರಾಂಗ ಸೈಡ ರಸ್ತೆಯಲ್ಲಿ ಮೆತಗಲ್ ಕಡೆಗೆ ಅತೀವೇಗದಲ್ಲಿ ಓಡಿಸಿಕೊಂಡು ಹೋಗುವಾಗ, ಅದೇ ಸಮಯಕ್ಕೆ ಎದುರುಗಡೆ ಕುಷ್ಟಗಿ ಕಡೆಯಿಂದ ಕಾರ್ ನಂ:ಕೆಎ-65/ಎಮ್-1786 ನೇದ್ದರ ಚಾಲಕನು ಸಹ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು ಬಂದಿದ್ದು ಹೀಗೆ ಎರಡೂ ವಾಹನದ ಚಾಲಕರು ತಮ್ಮ ವಾಹನಗಳನ್ನು ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿ ಹಾಗೂ ಇಮಾಂಬಿ, ಖಾಸಿಂಬಿ, ಮೋಟಾರ ಸೈಕಲ್ ಸವಾರ ಶಂಕರಪ್ಪ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 289/2016 ಕಲಂ 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.

ಗಾಯಾಳುಗಳ ಪೈಕಿ  ವೆಂಕಟೇಶ ತಂದಿ ರಾಜಶೇಖರ ಕನಕರಡ್ಡಿ ವಯಾ- 25 ವರ್ಷ ಜಾ- ರಡ್ಡಿ ಉ- ಹೆಚ್.ಡಿ.ಎಪ್.ಸಿ. ಬ್ಯಾಂಕ್ ಸಿಂಧನೂರ್  ಮ್ಯಾನೇಜರ್ ಸಾ- ಎಮ್ಮಿಗನೂರ ಇವರ  ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಕಾರಟಗಿಯಲ್ಲಿ ಕೆಲಸವಿದ್ದರಿಂದ ನಾನು ಮತ್ತು ಮಂಜುನಾಥ ಕೂಡಿಕೊಂಡು ಆತನ ಹಿರೋ ಹೊಂಡಾ ಸ್ಪ್ಲೆಂಡರ್  ಮೊಟಾರ್ ಸೈಕಲ್ ನಂಬರ್- ಕೆ.ಎ- 36 / ಎಕ್ಸ- 9210 ನೇದ್ದರಲ್ಲಿ ಸಿಂಧನೂರ ಬಿಟ್ಟು ಕಾರಟಗಿಗೆ ಬರಲೆಂದು ಸಾಕ್ಷಿ ರೈಸ್ ಮಿಲ್ಲ ಹತ್ತಿರ ನಮ್ಮ ಮೊಟಾರ್ ಸೈಕಲ್  ಚಾಲಕ ಮಂಜುನಾಥ ಈತನು  ಸದರ್ ಮೊಟಾರ್ ಸೈಕಲ್ಲನ್ನು ರಸ್ತೆಯ ಡಬದಿಯಲ್ಲಿ  ನಿಧಾನವಾಗಿ ನಡೆಸಿಕೊಂಡು ಹೊರಟಿದ್ದು ನಾನು  ಹಿಂದೆ ಕುಳಿತು ಹೊರಟಿದ್ದೇವು.  ನಮ್ಮ ಎದುನಿಂದ ಅಂದರೆ ಕಾರಟಗಿ ಕಡೆಯಿಂದ  ಒಬ್ಬ  ಕಾರ್ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ  ರಾಂಗ್ ಸೈಡಿಗೆ  ಬಂದು ನಮ್ಮ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ  ನಾವು ಮೊಟಾರ್ ಸೈಕಲ್  ಸಮೇತ ಕೆಳಗೆ ಬಿದ್ದೇವು. ನನಗೆ ಬಲ ಮೊಣಕಾಲುಗೆಳಗೆ  ಭಾರಿ ಗಾಯ ಹಾಗೂ ಮೂಳೆ ಮುರಿತವಾಗಿದ್ದು ಹಾಗೂ ಇತರ ಕಡೆಗೆ  ಭಾರಿ ಪೆಟ್ಟಾಗಿದ್ದು ಹಾಗೂ ಮೊಟಾರ್ ಸೈಕಲ್ ಚಾಲಕ ಮಂಜುನಾಥನಿಗ ಕೈ ಕಾಲುಗಳಿಗೆ  ಗಂಭೀರ ಘಾಯ ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ. ಅಪಘಾತಪಡಿಸಿದ ಕಾರ್ ನಂಬರ್ ನೋಡಲು ಕೆ.ಎ- 36 / ಎನ್- 1989 ಅಂತಾ ಇದ್ದು ಚಾಲಕನ ಬಗ್ಗೆ  ವಿಚಾರಿಸಲಾಗಿ ಅಗರೇಪ್ಪ ಕಂಬಳಿ ಸಾ- ಸಿಂಧನೂರ  ಅಂತಾ ಗೊತ್ತಾಯಿತು. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008