Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, January 12, 2017

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ : 279, 338 ಐ.ಪಿ.ಸಿ:.
ದಿನಾಂಕ 11-01-2017 ರಂದು ಮದ್ಯಾಹ್ನ 2-45 ಫಿಯರ್ಾದಿದಾರರಾದ ಶ್ರೀ ರಾಮಾಂಜನೇಯರೆಡ್ಡಿ ತಂದೆ ಹನುಮಂತರೆಡ್ಡಿ ಚಿತ್ತರಕಿ ವಯ. 33 ಜಾ.ಹಿಂದೂ ರೆಡ್ಡಿ ಉ.ಒಕ್ಕಲುತನ ಸಾ. 11 ನೇ ವಾರ್ಡ ಕನಕಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿಯರ್ಾದಿಯನ್ನು ನೀಡಿದ್ದು ಅದರ ಸಾರಾಂಶವೇನೇಂದರೇ ನಿನ್ನೆ ದಿನಾಂಕ 10-01-2017 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಶಂಕ್ರಪ್ಪ ತಂದೆ ನಿಂಗಪ್ಪ ನವಲಹಳ್ಳಿ ಈತನು ಶಶಿಧರ ತಂದೆ ಮಲ್ಲಪ್ಪ ಸಮಗಂಡಿ ಈತನನ್ನು ಹೊಂಡಾ ಶೈನ ಮೋ/ಸೂ ಸಂ. ಕೆ.ಎ-37  ಎಕ್ಸ-6637 ನೇದ್ದರಲ್ಲಿ ಕೂಡ್ರಿಸಿಕೊಂಡು ನವಲಿ ಕಡೆಯಿಂದ ಕನಕಗಿರಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಡಕಿ ಸೀಮಾದ ಶ್ರೀ ಬೀರಲಿಂಗೇಶ್ವರ ಗುಡಿಯ ಹತ್ತಿರ ತಿರುವಿನಲ್ಲಿ ಮೋ ಸೈ ನ್ನು ನಿಯಂತ್ರಿಸಲಾಗದೇ ರಸ್ತೆಯ ಎಡ ಪಕ್ಕದಲ್ಲಿ ಕೆಡವಿ ಅಪಘಾತವನ್ನು ಮಾಡಿದ್ದು ಇದರಿಂದ ಶಶಿಧರ ಸಮಗಂಡಿ ಈತನಿಗೆ ಎಡಗಾಲು ಮೊಣಕಾಲಿಗೆ ಭಾರಿ ಒಳಪೆಟ್ಟು ಉಂಟಾಗಿ ಮುರಿದಿರುತ್ತದೆ ಎಡಗೈ ಮುಂಗೈಗೆ ಮುರಿದು ರಕ್ತ್ತ ಬಂದಿರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 013/2017 ಕಲಂ : 279, 338 ಐ.ಪಿ.ಸಿ:.
ದಿನಾಂಕ:- 11-01-2017 ರಂದು ರಾತ್ರಿ 07:00 ಗಂಟೆಗೆ ಫಿರ್ಯಾದಿದಾರರಾದ ಕೃಷ್ಣ ತಂ/ ಆಶಣ್ಣ ಕಂಪಾಟಿ ವಯಾ 32 ವರ್ಷ, ಸಾ. ತಿರುಮಲಾಪುರ ತಾ: ಗಂಗಾವತಿ ಇವರು ಫಿರ್ಯಾದಿಯನ್ನು ನೀಡಿದ್ದು, ದಿನಾಂಕ:- 10-01-2017 ರಂದು ರಾತ್ರಿ 07-00 ಗಂಟೆಯ ಸುಮಾರಿಗೆ ಗಂಗಾವತಿ-ಹುಲಗಿ ರಸ್ತೆಯ ಮೇಲೆ ತಿರುಮಲಾಪುರ ಗ್ರಾಮದ ಹತ್ತಿರ ಆನೆಗುಂದಿಯಿಂದ ಬಸಾಪುರಕ್ಕೆ ಹೋಗಲು ರಂಗಪ್ಪ ಈತನು ಮೋ.ಸೈ. ನಂ. ಕೆ.ಎ.35/ಕ್ಯೂ.8932 ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಬಸಾಪುರದಿಂದ ಸಾಣಾಪುರಕ್ಕೆ ಹೋಗಲು ರಾಜಾಬಕ್ಷಿ ಈತನು ನಂಬರ ಇರದ ಆಟೋವನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಇಬ್ಬರು ಎದರು ಬದುರಾಗಿ ಡಿಕ್ಕಿ ಅಪಘಾತ ಮಾಡಿಕೊಂಡಿದ್ದು ಇರುತ್ತದೆ. ಈ ಅಪಘಾದಲ್ಲಿ ರಂಗಪ್ಪ ಇವರಿಗೆ ಎಡಗಾಲ ಎಲಬು ಮುರಿದು ಗಾಯವಾಗಿದ್ದು ಮುಖಕ್ಕೆ, ಮೂಗಿಗೆ, ಎಡಗೈ ಮುಂಗೈಗೆ ಗಾಯವಾಗಿರುತ್ತದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 03/2017 ಕಲಂ 379 ಐ.ಪಿ.ಸಿ:.
ದಿನಾಂಕ 11-01-2017 ರಂದು ಬೆಳಿಗ್ಗೆ 8-00 ಎ.ಎಂ ಗಂಟೆಗೆ ಜೀಲಾನಿ ಪಾಷ ತಂದೆ ಮೊಹ್ಮದ ಸಾಬ, ವಯಾ 50 ವರ್ಷ, ಜಾತಿ: ಮುಸ್ಲಿಂ, ಉ: ಲಾರಿ ನಂಬರು ಕೆಎ-37-3870 ನೇದ್ದರ ಮಾಲಿಕರು, ಸಾ: ಗುಂಡಮ್ಮ ಕ್ಯಾಂಪ 22 ನೇ ವಾರ್ಡ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಪಿರ್ಯಾಧಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 09-01-2016 ರಂದು 10-00 ಪಿ ಎಮ್ ದಿಂದ ದಿನಾಂಕ: 10-01-2017 ರಂದು ಬೆಳಗಿನ 5-00 ಎ,ಎಂ ನಡುವಿನ ಅವಧಿಯಲ್ಲಿ   ಯಾರೋ ಕಳ್ಳರು ಗಂಗಾವತಿ ನಗರದಲ್ಲಿನ ತುಂಗಭದ್ರ ಟ್ರಾನ್ಸಪೋರ್ಟ ಹತ್ತಿರ ನಿಲ್ಲಿಸಿದ್ದ ಪಿರ್ಯಾಧಿದಾರರ ಲಾರಿ ನಂ ಕೆ,ಎ 37 – 3870 ನೇದ್ದನ್ನು   ಕಳ್ಳತನ ಮಾಡಿಕೊಂಡು ಹೋಗಿ ಅದನ್ನು ಗೂಗಿ ಬಂಡಿ- ಸಿಂಗನಗುಂಡ ಮಧ್ಯದ ರಸ್ತೆಯಲ್ಲಿ ಬಿಟ್ಟು , ಸದರಿ ಲಾರಿಯಲ್ಲಿಂದ (01] ಅಪೋಲೋ—04 ಟೈರು.— ಅಂ.ಕಿ 90,000-00 ರೂಪಾಯಿ.02] ಎಂ.ಅರ್.ಎಫ್.- 02 ಟೈರು.ಅಂ.ಕಿ 45,000-00 ರೂಪಾಯಿ.03] ಜೆ.ಕೆ. ಟೈರು. :- 01, ಅಂ.ಕಿ 23,000-00 ರೂಪಾಯಿ.04] 1 ಟೇಪ ರಿಕಾರ್ಡ, ಅ.ಕಿ. 1500-00. ಹಾಗೂ ಜಾಕ ಮತ್ತು ಜಾಕರಾಡ- ಅಂ.ಕಿ 4000-00 ರೂಪಾಯಿ  ಒಟ್ಟು 1,63,500-00.  ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ಪಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ 379 ಐ.ಪಿ.ಸಿ:.

ದಿನಾಂಕ: 11-01-2017 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿದಾರರಾದ ಗವಿಸಿದ್ದಪ್ಪ ತಂದೆ ಅಮರಪ್ಪ ಗೊಂಡಬಾಳ ವಯಾ: 38 ವರ್ಷ  ಸಾ: ಕುಂಬಾರ ಓಣಿ ಕೊಪ್ಪಳ.  ಫಿರ್ಯಾದಿದಾರರು ದಿನಾಂಕ: 03-01-2017 ರಂದು ಸಂಜೆ 6-00 ಗಂಟೆ ಸುಮಾರಿಗೆ ತನ್ನ ಮಾಲಿಕತ್ವದ ಲಾರಿ ನಂ ಕೆ.ಎ 52 0700 ನೇದ್ದನ್ನು ನಗರದ ಎ.ಪಿ.ಎಮ್.ಸಿ ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದು, ಅಂದು ರಾತ್ರಿ 10-30 ಗಂಟೆಯವರೆಗೆ ತಾನು ಲಾರಿಯಲ್ಲಿ ಇದ್ದು, ನಂತರ ತಾನು ಊಟಕ್ಕೆ ಮನೆಗೆ ಹೋಗಿ ವಾಪಸು ಮುಂಜಾನೆ ದಿನಾಂಕ: 04-01-2017 ರಂದು ಬೆಳಿಗ್ಗೆ 5-00 ಗಂಟೆಯ ಸುಮಾರಿಗೆ ತಾನು ಲಾರಿ ಹತ್ತಿರ ಬಂದು ನೋಡಿದಾಗ ತಾನು ನಿಲ್ಲಿಸಿದ್ದ ತನ್ನ ಲಾರಿ ಕಾಣಲಿಲ್ಲಾ, ನಂತರ ತಾನು ಮತ್ತು ತನ್ನ ಗೆಳೆಯರೊಂದಿಗೆ ಸುತ್ತಾಮುತ್ತಾ ಹುಡುಕಿದಾಗ ತನ್ನ ಲಾರಿಯನ್ನು ಕಾಸನಕಂಡಿ ಹತ್ತಿರ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ಅದರ ಎಲ್ಲಾ ಹತ್ತು ಗಾಲಿಗಳು, ಒಂದು ಸ್ಟೇಪನಿ, ಹಾಗೂ ತಾಡಪಾಲು, ಜಾಕ್, ಬ್ಯಾಟರಿ ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 1,64,400=00 ಬೆಲೆಬಾಳುವುಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ತಾನು ಎಲ್ಲಾ ಹುಡುಕಾಡಿ ಸಿಗದೇ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008