Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, January 19, 2017

1] ಮುನಿರಾಬಾದ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 07/2017 ಕಲಂ : 279, 304(ಎ) ಐ.ಪಿ.ಸಿ:.  
ದಿನಾಂಕ 19-01-2017 ರಂದು 02-30 ಎ.ಎಂ.ಕ್ಕೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿ ಸಾರಾಂಶವೇನೆಂದರೆ , ದಿನಾಂಕ 12-01-2017 ರಂದು ಆರೋಪಿತನು ತನ್ನ ಮೋ.ಸೈ.ನಂ.ಕೆ.ಎ.26 / ಹೆಚ್.8816 ನೇದ್ದರಲ್ಲಿ ತನ್ನ ಹೆಂಡತಿ ಗಿರಿಜಮ್ಮಳನ್ನು ತಂಬ್ರಳ್ಳಿಯಿಂದ ಹುಣ್ಣಿಮೆ ಇದ್ದುದರಿಂದ ಹುಲಗಿಯ ಹುಲಿಗೆಮ್ಮ ದೇವಸ್ಥನಕ್ಕೆ ಮೋ.ಸೈ.ನಲ್ಲಿ ಹೋಗುತ್ತಿರುವಾಗ 09-30 ಎ.ಎಂ.ಸುಮಾರಿಗೆ ಹುಲಗಿ -ನಿಂಗಾಪುರ ರಸ್ತೆಯ ಮೇಲೆ ಹುಲಗಿ ರೈಲ್ವೆ ಗೇಟ ಹತ್ತಿರ ಇರುವ ರೋಡ್ ಬ್ರೇಕರನ್ನು ಗಮನಿಸದೆ ಮೋ.ಸೈ.ನ್ನು ಅತೀ ವೇಗ ಮತ್ತು ಅಲಕ್ಷತನದಿಂದ  ಚಲಾಯಿಕೊಂಡು ಹೋಗಿದ್ದರಿಂದ ಮೋ.ಸೈ.ಮೇಲೆ ಹಿಂದೆ ಕುಳಿತ ಗಿರಿಜಮ್ಮಳು ಪುಟಿದು ಕೆಳಗೆ ರಸ್ತೆಯ ಮೇಲೆ ಬಿದ್ದುದರಿಂದ ಆಕೆಯ ತಲೆಗೆ .ಮುಖಕ್ಕೆ ,ಎಡಗೈಗೆ ರಕ್ತಗಾಯವಾಗಿ ಒಳಪೆಟ್ಟಿಗಿದ್ದು ಚಿಕಿತ್ಸೆ ಕುರಿತು ಹೊಸಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡುಹೋಗಿ ಚಿಕಿತ್ಸೆ ಕೊಡಿಸಿದ್ದು ಅಲ್ಲಿ ವೈದ್ಯಾಧಿಕಾರಿಗಳು ಶಿಪಾರಸ್ಸು ಮಾಡಿದ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಿನಾಂಕ 18-01-2017 ರಂದು ಹೆಚ್ಚಿನ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಿಸದೆ ದಿನಾಂಕ 18-01-2017 ರಂದು 08-00 ಪಿ.ಎಂ.ಸುಮಾರಿಗೆ ಮೃತಪಟ್ಟಿರುತ್ತಾಳೆ, ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 04/2017 ಕಲಂ : 279, 337, 338 ಐ.ಪಿ.ಸಿ:. 
ದಿನಾಂಕ: 18-01-2017 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಪಿರ್ಯಾದಿ ಮತ್ತು ಗಾಯಾಳು ಕಾರ ಚಾಲಕ ಗುಲಾಮ ಮಹ್ಮದ ಹುನಗುಂದ ಇಬ್ಬರೂ ಕೂಡಿಕೊಂಡು ಕಾರ ನಂ ಕೆಎ-25/ಪಿ-4743 ನೇದ್ದರಲ್ಲಿ ಗಂಗಾವತಿ ಪಟ್ಟಣದಲ್ಲಿ ಪಿರ್ಯಾದಿಯ ಸಂಬಂದಿಕರ ಈಳೆ ಕಾರ್ಯಾಕ್ರಮಕ್ಕೆ ರಾಂಪೂರ ಹೊಸಳ್ಳಿ , ಯಲಬುರ್ಗಾ ಮುಖಾಂತರ ಗಂಗಾವತಿಗೆ ಯಲಬುರ್ಗಾ ತಾಲೂಕಾ ಪೈಕಿ ಮಲಕಸಮುದ್ರ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಯಲಬುರ್ಗಾ- ಮಲಕಸಮುದ್ರ ರಸ್ತೆ ಮೇಲೆ ಬೇವೂರು ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಬೇವೂರು ಕಡೆಯಿಂದ ಯಲಬುರ್ಗಾ ಕಡೆಗೆ ಆರೋಪಿತನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ ಇಂಜೀನ್ ನಂ ಕೆಎ-37/ಟಿ.ಎ- 7977 ಮತ್ತು ಅದರ ಟ್ರೇಲರ ನಂ ಕೆಎ-37/ಟಿ.ಎ-7978 ನೇದ್ದನ್ನು ಅದರಲ್ಲಿ ಹಳ್ಳದ ಆಪು ಹುಲ್ಲು ತುಂಬಿ ಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಟ್ರ್ಯಾಕ್ಟರದ ಮುಂದಿನ ಹೆಡ್ಡ ಲೈಟ್ ಡಿಂಪ್ ಡಿಮ್ಮು ಮಾಡದೇ ಆಗೇಯೇ ಚಲಾಯಿಸಿಕೊಂಡು ಬಂದು ಕಾರಿನ ಬಲಬಾಗಕ್ಕೆ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿಗೆ ಮತ್ತು ಗಾಯಾಳು ಕಾರ ಚಾಲಕನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ : 363, 143, 147, 148, 324, 307, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ: 17-10-2017 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿ ಸಲೀಂ ಸೈದಾ ಸಾ: ಕೊಪ್ಪಳ ಮತ್ತು ಕರ್ನಾಟಕ ಸಂಗ್ರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾದ ಅನ್ಸಾರಶೇಖ ಮತ್ತು ಪ್ರವೀಣ, ವಿಶ್ವನಾಥ, ಗುರುರಾಜ ಎಲ್ಲರೂ ರೈಲ್ವೆ ನಿಲ್ದಾಣದ ಹತ್ತಿರ ನಿಂತುಕೊಂಡಿದ್ದೆವು. ಆಗ ಅನ್ಸಾರಶೇಖಗೆ 8123094572 ದಿಂದ ಪೋನ್ ಬಂದಿತು. ಅಷ್ಟರಲ್ಲಿಯೇ ಒಬ್ಬ ವ್ಯಕ್ತಿ ಬಂದು ತನ್ನ ಹೆಸರು ಜಿಲಾನ್ ಅಂತಾ ಹೇಳಿ ನನ್ನ ಮೊಟಾರ್ ಸೈಕಲ್ ಎಕ್ಸಿಡೆಂಟ್ ಆಗಿದ್ದಕ್ಕೆ ಎಕ್ಸಿಡೆಂಟ್ ಮಾಡಿದವರು ಹಣ ಕೇಳುತ್ತಿದ್ದಾರೆ, ನೀವು ಅಧ್ಯಕ್ಷರಿದ್ದೀರಿ ಅದನ್ನು ಬಗೆಹರಿಸಿ ಕೊಡಿರಿ  ಅಂತಾ ಅನ್ಸಾರಶೇಖ ಗೆ ಕೇಳಿದನು. ಆಗ ಅನ್ಸಾರಶೇಖ ನನಗೆ ಮತ್ತು ಪ್ರವೀಣ, ವಿಶ್ವನಾಥ ಮತ್ತು ಗುರುರಾಜನಿಗೆ ಜಿಲಾನ ಎಂಬ ವ್ಯಕ್ತಿಯ ಸಂಗಡ ಕಳಿಸುತ್ತಾನೆ. ನಾನು ಜೀಲಾನ್ ಈತನ ಮೊಟಾರ್ ಸೈಕಲ್ ಮೇಲೆ ಕುಳಿತುಕೊಂಡಿದ್ದು, ವಿಶ್ವನಾಥ, ಗುರುರಾಜ ಮತ್ತು ಪ್ರವೀಣ ಇವರು ತಮ್ಮ ಒಂದು ಮೋಟಾರ್ ಸೈಕಲ್ ಮೇಲೆ ಬಂದರು. ಜೀಲಾನ ಈತನು ನನಗೆ ಕೂಡಿಸಿಕೊಂಡು ಜೋರಾಗಿ ಓಡಿಸಿಕೊಂಡು ಬೂದುಗುಂಪ ಕ್ರಾಸ್ ವರೆಗೆ ಹೋಗಿದ್ದು , ಅಲ್ಲಿಗೆ ಉಳಿದ 04 ಮೋಟಾರ್ ಸೈಕಲ್ಗಳಲ್ಲಿ ಒಟ್ಟು 12 ಜನರು ನನಗೆ ಕರೆದುಕೊಂಡು ಹೋಗಿ ಲೇ ಸೂಳೆ ಮಗನೆ ಆ ಅನ್ಸಾರಶೇಖ ಸೂಳಿ ಮಗನಿಗೆ ಹೇಳು  ಅವನ ಮನಿಗೆ ಬಂದು ಮರ್ಡರ್ ಮಾಡಿ ಬರುತ್ತೇವೆ ಅಂತಾ ನನಗೆ ಕಟ್ಟಿಗೆ ಕಲ್ಲಿನಿಂದ ನನಗೆ ಬೂದುಗುಂಪಾ ಕ್ರಾಸ್ ಹತ್ತಿರ ಬಿಟ್ಟು ಹೊರಟು ಹೋದರು. ಆಗ ನನ್ನ ಸ್ನೇಹಿತನಾದ ಆತೀಫ್ ತನ್ನ ಮೊಬೈಲ್ ನಂ: 8050366829 ನೇದ್ದರಿಂದ ಪೋನ್ ಮಾಡಿದ್ದು ಅವನು ಬಂದು ನನಗೆ ಕರೆದುಕೊಂಡು ಬಂದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾನೆ. ಆಸ್ಪತ್ರೆಯಲ್ಲಿ ಗುರುರಾಜ, ವಿಶ್ವನಾಥ ಮತ್ತು ಪ್ರವೀಣ ಮೂವರು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ತಲೆಗೆ ಬೆನ್ನಿಗೆ ಕೈಗೆ ಕಣ್ಣಿಗೆ ರಕ್ತ ಗಾಯವಾಗಿದ್ದು ಕಂಡುಬಂದಿತು. 04 ಬೈಕಗಳಲ್ಲಿ ಬಂದು ನನಗೆ ಹೊಡಿಬಡಿ ಮಾಡಿದವರೇ ಅವರಿಗೂ ಸಹ ಕಲ್ಲು ಕಟ್ಟಿಗೆ ಗಳಿಂದ ಹೊಡೆದು ರಕ್ತ ಗಾಯಗೊಳಿಸಿದ ಬಗ್ಗೆ ತಿಳಿಯಿತು. ನಂತರ ನನ್ನ ಮೊಬೈಲ್ ಗೆ ಪೋನ್ ಮಾಡಿದವರ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1] ಜಿಲಾನ್ 2] ರವಿ ಭಾದಶ್ಯಾ, 3] ಅಂಜಿ @ ಅಂಜಿನ್ ಅಂತಾ ತಿಳಿದು ಬಂದಿತು. ಕಾರಣ ನನಗೆ ಬಲವಂತವಾಗಿ ಕರೆದುಕೊಂಡು ಹೋಗಿ ಹೊಡೆದಿದ್ದು ಅಲ್ಲದೆ ಮತ್ತು ವಿಶ್ವನಾಥ, ಪ್ರವೀಣ ಇವರಿಗೆ ಕೊಪ್ಪಳ ನಗರದ ಮಾತಾ ಹೊಟೇಲ್ ಹತ್ತಿರ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಜನರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008