1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ : 279, 338, 304(ಎ) ಐ.ಪಿ.ಸಿ
ಮತ್ತು 187 ಐ.ಎಂ.ವಿ. ಕಾಯ್ದೆ:
ದಿ:16-01-2017 ರಂದು ಮದ್ಯಾನ್ಹ 1-15 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ
ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ
ಗಾಯಾಳು ಆರೈಕೆಯಲ್ಲಿದ್ದ ಹಾಗೂ ಪ್ರತ್ಯಕ್ಷ ಸಾಕ್ಷಿದಾರರಾದ ಕುಬೇರಪ್ಪ ಬಡಿಗೇರ. ಸಾ:
ಹನಮನಹಳ್ಳಿ. ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಇಂದು ದಿ:16-01-17 ರಂದು ಮದ್ಯಾನ್ಹ 12-10 ಗಂಟೆಗೆ ಫಿರ್ಯಾದಿದಾರರು ತಮ್ಮ ಮೋಟಾರ ಸೈಕಲ್ ದಲ್ಲಿ ಇರಕಲಗಡಾ ದಿಂದಾ ಕೊಪ್ಪಳಕ್ಕೆ
ಬರುತ್ತಿದ್ದಾಗ, ಲೇಬಗೇರಿ ಕ್ರಾಸ್ ಹತ್ತಿರ
ತನ್ನ ಮುಂದೆ ಕುಷ್ಟಗಿ ಕಡೆಯಿಂದ ಕೊಪ್ಪಳದ ಕಡೆಗೆ ಹೊರಟಿದ್ದ ಬಸ್ ನಂ: ಕೆಎ-37/ಎಫ್-0543 ನೇದ್ದರ ಚಾಲಕನು ತನ್ನ ಬಸ್ ನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಕ್ರಾಸ್ ರಸ್ತೆಯನ್ನು ಗಮನಿಸದೇ ತನ್ನ ಎದುರುಗಡೆ ಕೊಪ್ಪಳದ
ಕಡೆಯಿಂದ ಬಂದ ಮೋಟಾರ ಸೈಕಲ್ ನಂ: ಕೆಎ-35/ಎಸ್-6230 ನೇದ್ದಕ್ಕೆ ಟಕ್ಕರ ಕೊಟ್ಟು
ಅಪಘಾತ ಮಾಡಿದ್ದರಿಂದ, ಮೋಟಾರ ಸೈಕಲ್ ಸವಾರ
ಮಾರ್ಕಂಡೆಪ್ಪ ಇತನಿಗೆ ತಲೆಗೆ, ಎಡತೊಡೆಗೆ, ಎಡಕಾಲ ಪಾದಕ್ಕೆ ಭಾರಿ
ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಬಸ್ ಚಾಲಕನು ತನ್ನ ಬಸ್ ನ್ನು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೋಗಿದ್ದು ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ಸದರಿ ಪ್ರಕರಣದಲ್ಲಿಯ ಗಾಯಾಳು ಮಾರ್ಕಂಡೆಪ್ಪ ಸಾ: ಲೇಬಗೇರಿ.
ಇತನನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಯ ಕಿಮ್ಸ
ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದ ಗದಗ ಹತ್ತಿರ ಮದ್ಯಾನ್ಹ 3-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment