Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 16, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ : 498(ಎ), 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:15-01-2017 ರಂದು ರಾತ್ರಿ 9-50 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸಲ್ಮಾ ಗಂಡ ಶಬ್ಬೀರಸಾಬ ವಯಾ-24 ವರ್ಷ ಸಾ. ಬೂದಗುಂಪಾ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಈಗ್ಗೆ ದಿನಾಂಕ:-24-05-2014 ರಂದು ಬೂದಗುಂಪಾ ಗ್ರಾಮದ ಶಬ್ಬೀರ ತಂದಿ ರಾಜಾಹುಸೇನ್ ಸಾಬ ಇತನೊಂದಿಗೆ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿದ್ದು ಇವರಿಗೆ ಒಂದು ಹೆಣ್ಣು ಮಗು 2 ವರ್ಷದ್ದು ಇದ್ದು ಸದ್ರಿ ಪಿರ್ಯಾದಿದಾರರಿಗೆ ಹೆಣ್ಣು ಮಗುವಾದ ನಂತರ ಪಿರ್ಯಾದಿದಾರರ ಗಂಡ ಶಬ್ಬೀರಸಾಬ ಮತ್ತು ಅತ್ತೆ ಬೀಬಿ ಮಾವ ರಾಜಾಹುಸೇನ್ ಮೈದೂನರಾದ ಹಸನ್ ಸಾಬ ರವರು ಪಿರ್ಯಾದಿದಾರರಿಗೆ ಹೆಣ್ಣು ಮಗುವಾಗಿದೆ ಅಂತಾ ದೈಹೀಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಅಸ್ಲೀಲವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿ ದಿನಾಂಕ:-16-05-2016 ರಂದು ಮನೆಯಿಂದ ಹೊರಗಡೆ ಹಾಕಿದ್ದು ಇಷ್ಟು ದಿವಸ ಗಂಡನ ಮನೆಯವರು ಕರೆದುಕೊಂಡು ಹೋಗುತ್ತಾರೆ ಅಂತಾ ಸುಮ್ಮನಿದ್ದು ಇಲ್ಲಿವರೆಗೂ ಕರೆದುಕೊಂಡು ಹೋಗದ ಕಾರಣಕ್ಕೆ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ : 279, 337, 304(ಎ) ಐ.ಪಿ.ಸಿ ಮತ್ತು  187 ಐ.ಎಂ.ವಿ. ಕಾಯ್ದೆ:

ದಿ:15-01-2017 ರಂದು ರಾತ್ರಿ 8-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಗ್ರಾಮದ ವಿರುಪಣ್ಣ ಇವರ ಮೋಟಾರ ಸೈಕಲ್ ನಂ: ಕೆಎ-37/ವಾಯ್-8215 ನೇದ್ದರ ಹಿಂದೆ ಕುಳಿತುಕೊಂಡು ಇಬ್ಬರೂ ತಮ್ಮ ಗ್ರಾಮದಿಂದಾ ಕೊಪ್ಪಳದ ಶ್ರೀ ಗವಿಮಠದ ಜಾತ್ರೆಗೆ ಅಂತಾ ಚಿಲವಾಡಗಿ ಕ್ರಾಸ್ ದಾಟಿ ಎ.ಆರ್. ಢಾಬಾ ಸಮೀಪದಲ್ಲಿ ಕೊಪ್ಪಳದ ಕಡೆಗೆ ಬರುತ್ತಿದ್ದಾಗ, ಅದೇ ಸಮಯಕ್ಕೆ ಎದುರುಗಡೆ ಕೊಪ್ಪಳದ ಕಡೆಯಿಂದ ಆಟೋ ನಂ: ಕೆಎ-36/ಬಿ-1419 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ವಾಹನವನ್ನು ಬಿಟ್ಟು ಅದರ ಚಾಲಕ ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ವಿರುಪಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿದಾರರಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಕಾರಣ ಆಟೋ ನಂ: ಕೆಎ-36/ಬಿ-1419 ನೇದ್ದರ ಚಾಲಕನು ಅಪಘಾತ ಮಾಡಿದ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008