1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ : 279, 337 ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ:.
ದಿನಾಂಕ: 14-01-2017 ರಂದು ಸಂಜೆ 6:45 ಗಂಟೆಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ.
ಬಂದ ಮೇರಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳುವಿನ ಜೊತೆಗೆ ಇದ್ದ ಶ್ರೀ ವಿರುಪಾಕ್ಷಿ ತಂದೆ ಸುಂಕಪ್ಪ
ಮಲಪನಗುಡಿ, ವಯಸ್ಸು: 22 ವರ್ಷ ಜಾತಿ: ಭೋವಿ. ಉ: ವ್ಯವಸಾಯ ಸಾ: ಬುಕ್ಕಸಾಗರ ತಾ: ಹೊಸಪೇಟೆ,ಇವರ ನುಡಿ
ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:
14-01-2017 ರಂದು ಸಂಜೆ 6:30 ಗಂಟೆಯ ಸುಮಾರಿಗೆ ಫಿರ್ಯಾದಿ ತಂದೆಯಾದ ಸುಂಕಪ್ಪ ಈತನು ತನ್ನ ಟಿ.ವಿ.ಎಸ್.
ಎಕ್ಸಲ್ ಹೆವ್ಹಿ ಡ್ಯೂಟಿ ಮೋಟಾರ ಸೈಕಲ ನಂ: ಕೆ.ಎ-01/ಇ.ಬಿ-2811 ನೇದ್ದರಲ್ಲಿ ಆನೆಗುಂದಿಯಿಂದ ತಳವಾರಘಟ್ಟ
ಬ್ರಡ್ಜ ರಸ್ತೆಯ ಕಡೆಗೆ ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ನಂಬರ್ ಇರಲಾರದ ಹಿರೋ ಪ್ಯಾಶನ್
ಪ್ರೋ ಮೋಟಾರ ಸೈಕಲನ್ನು ಅದರ ಚಾಲಕನು ಅತೀವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರು
ಕೊಟ್ಟು ಅಪಘಾತ ಪಡಿಸಿ ಸ್ಥಳದಲ್ಲಿಯೇ ಮೋಟಾರ ಸೈಕಲ ಬಿಟ್ಟು ಹೋಗಿದ್ದರಿಂದ ಫಿರ್ಯಾದಿ ತಂದೆಯ ತಲೆಗೆ
ಗಾಯವಾಗಿ ಮೂಗಿನಿಂದ ರಕ್ತ ಬಂದು ಕೈಕಾಲುಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 04/2017
ಕಲಂ : 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ.
ಕಾಯ್ದೆ:
ದಿನಾಂಕ : 14-01-2017 ರಂದು ಬೆಳಿಗ್ಗೆ ನಾನು ನಮ್ಮೂರಾದ ಹಿರೇಅರಳಿಹಳ್ಳಿ ಗ್ರಾಮದಿಂದ
ಹೊಲದಲ್ಲಿ ಕೆಲಸ ಮಾಡುವ ಸಲುವಾಗಿ ಬಂದು ಸಂಜೆ 7-00 ಗಂಟೆ ಸುಮಾರಿಗೆ ವಾಪಾಸ್ ಹಿರೇಅರಳಿಹಳ್ಳಿಗೆ
ಹೋಗುವ ಸಲುವಾಗಿ ನಮ್ಮ ಹೊಲದಿಂದ ಕೃಷ್ಣಗಿರಿ ಕಾಲೋನಿ ಮೂಲಕ ಕುಷ್ಟಗಿಯ ಎನ್.ಹೆಚ್.50 ರಸ್ತೆಯ ಅಂಡರ್
ಗ್ರೌಂಡ ಬ್ರಿಡ್ಜ ಮೇಲೆ ಕುಷ್ಟಗಿಯ ಬಸ್ ನಿಲ್ದಾಣದ ಕಡೆಗೆ ಹೋಗುವ ಸಲುವಾಗಿ ಎನ್.ಹೆಚ್. 50 ರಸ್ತೆಯನ್ನು
ದಾಟುತ್ತಿದ್ದಾಗ ಹೊಸಪೇಟೆ ಕಡೆಯಿಂದ ಯಾವುದೋ ಒಂದು ಮೋ.ಸೈ ಸವಾರನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ
ವಾಹನವನ್ನು ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಟಕ್ಕರ ಕೊಟ್ಟು ಮೋ.ಸೈ ನ್ನು ನಿಲ್ಲಿಸದೇ
ಹೋಗಿದ್ದು, ನನಗೆ ಬಲಗಡೆ ಹಣೆಗೆ ಎಡಗೈ ಮುಂಗೈಗೆ ತೆರಚಿದ ಗಾಯವಾಗಿ ಎಡಗಾಲು ಮೊಣಕಾಲು ಕೆಳಗೆ ಭಾರಿ
ಒಳಪೆಟ್ಟಾಗಿದ್ದು ಕೂಡಲೇ ಅಲ್ಲಿಯೇ ಇದ್ದ ಹನಮಂತಪ್ಪ ಗುತ್ತೂರು ಹಾಗೂ ಮಲ್ಲೇಶ ತಂದೆ ವಿರುಪಾಕ್ಷಪ್ಪ
ಇವರು ಬಂದು ಒಂದು ಖಾಸಗಿ ವಾಹನದಲ್ಲಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು,
ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡೆನು.
0 comments:
Post a Comment