Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, March 20, 2017

1]  ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 25/2017 ಕಲಂ: 279, 337, 338 .ಪಿ.ಸಿ.:.
ದಿನಾಂ: 19-03-2017 ರಂದು ಫಿರ್ಯಾದಿಯ ದೊಡ್ಡಪ್ಪ ಭೀಮಣ್ಣ ಈತನು ತನ್ನ ಮೋಟಾರ ಸೈಕಲ ನಂ: ಕೆ.-37 ಯು-2303 ನೇದ್ದರ ಮೇಲೆ ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಪಟ್ಟಲಚಿಂತಿ ಮಾಲಗಿತ್ತಿ ರೋಡಿನ ಕಡಿವಾಲ ಸೀಮೇದಾರಿಯ ಹತ್ತಿರ ರೋಡಿನಲ್ಲಿ ಮಾಲಗಿತ್ತಿ ಕಡೆಗೆ ಹೊರಟಾಗ ಮಾಲಗಿತ್ತಿ ಕಡೆಯಿಂದ ಮೋಟಾರ ಸೈಕಲ ನಂ: ಕೆ.-24 ಜೆ-1167 ನೇದ್ದರ ಚಾಲಕ ಶರಣಪ್ಪ ತಂದೆ ಭೀಮಪ್ಪ ಹಗೇದಾಳ ಸಾ: ದೊಣ್ಣೆಗುಡ್ಡ ತಾ: ಕುಷ್ಟಗಿ. ಈತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಎದರುಗಡೆಯಿಂದ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಯ ದೊಡ್ಡಪ್ಪ ಭೀಮಣ್ಣ ರವರಿಗೆ ಬಲಗಡೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಕಣ್ಣಿನ ಹುಬ್ಬಿನ ಹತ್ತಿರ ರಕ್ತ ಗಾಯ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು, ಬಲಗಡೆ ಮೊಣಕಾಲ ಹತ್ತಿರ ತೆರಚಿದ ಗಾಯವಾಗಿದ್ದು, ಹಾಗೂ ಅಪಘಾತ ಪಡಿಸಿದ ಶರಣಪ್ಪ ತಂದೆ ಭೀಮಪ್ಪ ಹಗೆದಾಳ ಈತನಿಗೆ ಗದ್ದಕ್ಕೆ ರಕ್ತಗಾಯ ಹಾಗೂ ತಲೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಯಿತು.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ. ನಂ: 15/2017 ಕಲಂ. 143, 147, 323, 354, 504, 506 ಸಹಿತ 149  ಐ.ಪಿ.ಸಿ:
ದಿನಾಂಕ: 19-03-2017 ರಂದು ರಾತ್ರಿ 10-30 ಗಂಟೆಗೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಫಿಯರ್ಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ಫಿಯರ್ಾದಿದಾರರಿಗೂ ಹಾಗೂ ಆರೋಪಿತರಿಗೂ ಪಿತ್ರಾಜರ್ಿತವಾದ ಆಸ್ತಿಯ ಹಂಚಿಕೆಯ ವಿಷಯವಾಗಿ ಜಗಳ ಇರುತ್ತದೆ. ಇದೇ ವಿಷಯವಾಗಿ ಇಂದು ದಿನಾಂಕ: 19-03-2017 ರಂದು ಮಧ್ಯಾಹ್ನ 2-00 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಕಾರ್ ನಲ್ಲಿ ನೀರಲಗಿ ಗ್ರಾಮದ ಫಿಯರ್ಾದಿದಾರರ ವಾಸದ ಮನೆಗೆ ಬಂದು ಫಿಯರ್ಾದಿದಾರರಿಗೆ ಹಾಗೂ ಅವರ ಮಗಳಾದ ವಿಧ್ಯಾ, ಸೊಸೆಯಾದ ತೃಪ್ತಿ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ, ಕೂದಲು ಹಿಡಿದಯ ಎಳೆದಾಡಿ, ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಬೇವೂರ ಪೊಲೀಸ್ ಠಾಣೆ ಗುನ್ನೆ. ನಂ: 14/2017 ಕಲ0: 279, 337 ಐ.ಪಿ.ಸಿ:.

ದಿನಾಂಕ: 19-03-2017 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ಇಂಜನ್ ನಂಬರ್ 39.1354 SUK09765 ಚೆಸ್ಸಿ ನಂಬರ್ WVTK31419113672  ಇದರ ಟ್ರಾಲಿ ಚೆಸ್ಸಿ ನಂಬರ್ 0184 ಇದ್ದ ಟ್ರ್ಯಾಕ್ಟರ್ನ್ನು ಬೈರನಾಯಕನಳ್ಳಿ ಕಡೆಯಿಂದ ಕುದರಿಮೋತಿ ಕಡೆಗೆ ಅತೀವಾಗವಾಗಿ ಹಾಗೂ ಆಲಕ್ಷತನದಿಂದ ನೆಡೆಸಿಕೊಂಡು ಹೋಗಿ ಬೈರನಾಯಕನಹಳ್ಳಿ ಸೀಮಾದಲ್ಲಿರುವ ಕ್ರಾಸ್ ಹತ್ತಿರ ಕುದರಿಮೋತಿ ರಸ್ತೆ ಕಡೆಗೆ ಹೋಗಲು ಎಲ್ ಟನರ್್ ಮಾಡುವಾಗ ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಸಾದಿಸದೆ ಸದರಿ ಕ್ರಾಸ್ ಹತ್ತಿರ ಒಮ್ಮಿಂದೊಮ್ಮೆಲೆ ರಸ್ತೆಯ ಬಲಕ್ಕೆ ತೆಗೆದುಕೊಂಡು ಹೋಗಿ ಟ್ರ್ಯಾಕ್ಟರ್ನ್ನು ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇರುತ್ತದೆ, ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾ ಸ್ವರೂಪದ ಗಾಯವಾಗಿವೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008