Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 22, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 44/2017 ಕಲಂ: 87 Karnataka Police Act.
ದಿನಾಂಕ:-21-03-2017 ರಂದು ರಾತ್ರಿ 08-45 ಗಂಟೆಗೆ ಮಾನ್ಯ ಎ.ಎಎಸ್.ಐ ಮಲ್ಲಪ್ಪ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 21-03-2017 ರಂದು ಸಾಯಂಕಾಲ 6-30  ಗಂಟೆಯ ಸುಮಾರಿಗೆ ಬೇವಿನಾಳ ಗ್ರಾಮದ ಲಕ್ಷ್ಮಿ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ .ಎಸ್.ಐ ಮಲ್ಲಪ್ಪ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು ತಮ್ಮ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿದ್ದು ಇಬ್ಬರು ಸಿಕ್ಕಿಬಿದ್ದಿದ್ದು,. ಸಿಕ್ಕಿ ಬಿದ್ದ ಆರೋಪಿತಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 4150=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಮತ್ತು ಆರೋಪಿತರು  ಇಸ್ಪೀಟ್ ಜೂಜಾಟಕ್ಕೆ ತಂದಿದ್ದ 8 ಮೋಟಾರ್ ಸೈಕಲ್ ಗಳನ್ನು  ಜಪ್ತ ಮಾಡಿಕೊಂಡಿದ್ದು ಅಂತಾ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ. 457, 380 ಐ.ಪಿ.ಸಿ:.

ದಿನಾಂಕ: 21-03-2017 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಶಾಂತಾರಾಮ್ ತಂದೆ ಡಾ: ಲಕ್ಷ್ಮಣರಾವ್ ಕಲಾಲ್ ವಯಾ: 52 ವರ್ಷ ಜಾ: ಕಾಟೀಕ್ ಉ: ಮೆಡಿಕಲ್ ಶಾಪ್ ಸಾ: ರಾಘವೇಂದ್ರ ಮಠದ ಹತ್ತಿರ ಕೊಪ್ಪಳ ರವರು ಫಿರ್ಯಾದಿಯನ್ನು ಹಾಜರಪಡಿಸಿದ್ದು, ಫಿರ್ಯಾದಿದಾರರು ತಮ್ಮ ಮನೆಯ ರಿಪೇರಿ ಕೆಲಸದ ನಿಮಿತ್ತ ಪಕ್ಕದಲ್ಲಿರುವ ತಮ್ಮ ತಮ್ಮನ ಮನೆಯಲ್ಲಿ 15 ದಿನಗಳಿಂದ ಇರುತ್ತಿದ್ದರು.  ಫಿರ್ಯಾದಿದಾರರು ತಮ್ಮ ಬಂಗಾರದ ಸಾಮಾನುಗಳನ್ನ ಮತ್ತು ತನ್ನ ತಂಗಿಯರಾದ ರೇಷ್ಮಾ, ಕೃಷ್ಣಾಬಾಯಿ ಮತ್ತು ತಮ್ಮನ ಹೆಂಡತಿಯಾದ ಸುಹಾಸೀನಿ ಹಾಗೂ ತನ್ನ ಮಗಳಾದ ಅಶ್ವೀನಿಯ ಇವರೇಲ್ಲರ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳನ್ನ ತಮ್ಮ ಮನೆಯಲ್ಲಿ ಇಡಲು ಕೋಟ್ಟಿದ್ದರು, ಅವುಗಳನ್ನ ತನ್ನ ಹೆಂಡತಿ ಲಕ್ಷ್ಮೀ ಇವರು ತಮ್ಮ ಅಲಮಾರದಲ್ಲಿಟ್ಟಿದ್ದರು. ತಾವು ಮನೆಯನ್ನು ರಿಪೇರಿ ಮಾಡುತ್ತಿದ್ದರಿಂದ ತಮ್ಮ ಅಲ್ಮಾರಗಳನ್ನು ಮನೆಯ ಹಾಲ್ನಲ್ಲಿ ಇಟ್ಟಿದ್ದರು. ನಿನ್ನೆ ದಿನಾಂಕ: 20-03-2017 ರಂದು ರಾತ್ರಿ 8-30 ಗಂಟೆಗೆ ತಾನು ಮತ್ತು ತನ್ನ ಹೆಂಡತಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಪಕ್ಕದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿ ಮಲಗಿದ್ದರು ನಂತರ ಮಧ್ಯರಾತ್ರಿ 2-00 ಗಂಟೆಯ ಸುಮಾರಿಗೆ ತನ್ನ ತಮ್ಮನಾದ ಅಶೋಕ ಕಾಲಾಲ್ ಇತನು ತನ್ನ ಮೋಬೈಲ್ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮನೆಯಲ್ಲಿ ಏನೋ ಶಬ್ಧವಾಗುತ್ತಿದೆ ನೋಡಿ ಅಂತಾ ಹೇಳಿದ್ದು, ಆಗ ತಾನು ತನ್ನ ಹೆಂಡತಿ ಮನೆಯಿಂದ ಹೊರಗಡೆ ಬಂದು ತಮ್ಮ ಮನೆಯನ್ನು ನೋಡಿದಾಗ ತಮ್ಮ ಮನೆಯ ಬಾಗಿಲು ಸ್ವಲ್ಪ ತೆಗೆದಿದ್ದು ಕಂಡಿತು ಕೂಡಲೇ ನಾವು ಒಳಗಡೆ ಹೋಗಿ ನೋಡಿದಾಗ ನಮ್ಮ ಅಲ್ಮಾರವು ಕೆಳಗಿ ಬಿದ್ದಿದ್ದು ಅದರಲ್ಲಿಯ ಬಟ್ಟೆಬರೆಗಳನ್ನ ಕಿತ್ತು ಬಿಸಾಕಿದ್ದರು, ಮತ್ತು ಅದರ ಸೇಫ್ ಲಾಕರ್ ಕೂಡಾ ಮೀಟಿ ತೆರೆದು ಕಿತ್ತಿದ್ದು ಕಂಡು ಬಂದಿತು, ತಕ್ಷಣ ನಾನು ಸೇಫ್ ಲಾಕರ್ನಲ್ಲಿಟ್ಟಿದ್ದ ತಮ್ಮೇಲ್ಲರ ಒಟ್ಟು 670 ಗ್ರಾಂ ಬಂಗಾರದ ಆಭರಣಗಳು ಮತ್ತು 350 ಗ್ರಾಂ ಬೆಳ್ಳಿಯ ಸಾಮಾನುಗಳು ಮತ್ತು ಇನ್ನೊಂದು ಅಲ್ಮಾರದಲ್ಲಿದ್ದ ನಗದು ಹಣ ರೂ 50,000=00 ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ 11,00,000=00 ಬೆಲೆಬಾಳುವುಗಳು ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ.  

1 comments:

Unknown said...

Respected sir,

I am Kiran Kumar brother of Mr. Shantaram Kalal hereby requesting you to look into the FIR no 0032/2017 dated 21-03-2017. I am fortunate to get this opportunity for sharing my problem.
My house near Raghavendra Swamy Math robbed on 21. 03. 17 at around Midnight 2:00 am. Please look into the case as we lost all our savings of 40 years of continuous work and also gold ornaments of my sisters as they kept in my house as it is our ancestors house. We are in deep tragedy and seems it is almost impossible to manage the situation . I and my family members sincerely requesting you to expedite the enquiry and provide us some relief,Please do the needful.

Thanks & Regards
Kiran Kumar

 
Will Smith Visitors
Since 01/02/2008