Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, March 17, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 66/2017 ಕಲಂ. 87 Karnataka Police Act.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸರಹಟ್ಟಿ ಗ್ರಾಮದಲ್ಲಿ ತಾಯಮ್ಮ ಗುಡಿಯ ಹಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಹಾಗೂ ಸಿಬ್ಬಂದಿ ಮತ್ತು ಪಂಚರು ಸಮೇತ ದಾಳಿ ಮಾಡಲು ತಾಯಮ್ಮ ಗುಡಿ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ ಜನರು ಓಡಿ ಹೋಗಿದ್ದು ಮೂರು ಜನರು ಸಿಕ್ಕಿಬಿದ್ದಿದ್ದು ಇರುತ್ತದೆ. ಅವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ವಿಶ್ವನಾಥ ತಂ/ ದೇವೆಂದ್ರಗೌಡ ಪಾಟೀಲ ವಯಾ 39, ಜಾ. ಲಿಂಗಾಯತ ಸಾ. ಕೆಸರಹಟ್ಟಿ,  (2) ಹನಮಂತಪ್ಪ ತಂ/ ವೆಂಕಾರೆಡ್ಡೆಪ್ಪ ಚಿಕ್ಕೋಟಿ ವಯಾ 41, ಜಾ. ರೆಡ್ಡಿ ಲಿಂಗಾಯತ ಸಾ. ಕೆಸರಹಟ್ಟಿ, (3) ವೀರನಗೌಡ ತಂ/ ಶೇಖರಗೌಡ ಮಾಲಿಪಾಟೀಲ ವಯಾ 35, ಜಾ. ಲಿಂಗಾಯತ ಸಾ. ಕೆಸರಹಟ್ಟಿ, ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1600/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟಾವೆಲ್ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ: 52/2017 ಕಲ0: 279,304(A) IPC
ದಿನಾಂಕ :- 16-03-2017 ರಂದು ರಾತ್ರಿ 10-30 ಗಂಟೆಗೆ ಮನೋಜ ತಂದೆ ಪರಶುರಾಮ ಶೆಟ್ಟರ ವಯಾ 19 ವರ್ಷ ಜಾ:ಹಿಂದೂ ಶೆಟ್ಟರ ಉ : ವಿದ್ಯಾರ್ಥಿ/ವ್ಯಾಪಾರ ಸಾ : ಕಂದಕೂರ ರವರು ಠಾಣೆಗೆ ಬಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ಪ್ರತಿದಿನದಂತೆ ದಿನಾಂಕ :16-03-2017 ರಂದು ಬೆಳಗಿನ ಜಾವ 05-30 ಗಂಟೆಯ ಸುಮಾರಿಗೆ ಮನೆಯಿಂದ ನಮ್ಮ ತಂದೆಯು ಮೋಟಾರ ಸೈಕಲ್ ನಂ. ಕೆ.-37-ಎಕ್ಷ-7208 ನೇದ್ದನ್ನು ತೆಗೆದುಕೊಂಡು ಕುಷ್ಟಗಿ ಹೋಗಿ ಹಾಲಿನ ಪಾಕೇಟಗಳನ್ನು ತರುತ್ತೇನೆ ಅಂತಾ ಹೇಳಿ ಹೋದನು. ನಂತರ ನನಗೆ ಮುಂಜಾನೆ 06-00 ಗಂಟೆಯ ಸುಮಾರಿಗೆ ಕಂದಕೂರ-ಕುಷ್ಟಗಿ ರೋಡ ಮೇಲೆ ಸಾವಜಿ ಡಾಬಾದ ಹತ್ತಿರ ನಿಮ್ಮ ತಂದೆಯು ಸ್ಕೀಡ್ ಮಾಡಿಕೊಂಡು ಬಿದ್ದಿರುತ್ತಾರೆ. ಅಂತಾ ಸುದ್ದಿ ಕೇಳಿ ಕೂಡಲೇ ನಾನು ಮತ್ತು ನಮ್ಮ ಕಾಕನಾದ ಕನಕರಾಯ ಇಬ್ಬರೂ ಬಂದು ನೋಡಲು ನಮ್ಮ ತಂದೆಯು ನಮ್ಮ ಟಿ.ವ್ಹಿ.ಎಸ್. ಸುಪರ್ ಎಕ್ಷ. ಎಲ್ ಮೋಟಾರ ಸೈಕಲ್  ನಂ : ಕೆ.-37-ಎಕ್ಷ್-7208 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಒಮ್ಮಿಂದೊಮ್ಮಲೇ ಬ್ರೇಕ್ ಮಾಡಿ ನಿಯಂತ್ರಣ ತಪ್ಪಿ ಸ್ಕೀಡ್ ಮಾಡಿಕೊಂಡು ಬಿದ್ದಿದ್ದು, ಸದರಿ ಅಪಘಾತದಿಂದ ತಲೆಯ ಹಿಂದುಗಡೆ  ಭಾರಿ ರಕ್ತಗಾಯವಾಗಿ, ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಹೊರಬಂದಂತೆ ಕಂಡು ಬಂದಿದ್ದು ಇರುತ್ತದೆ. ನಂತರ ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು, ವೈದ್ಯಾಧೀಕಾರಿಗಳು ಪ್ರಥಮ  ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಮ್ಮ ತಂದೆಯನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಇಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
3]  ಹನುಮಸಾಗರ ಪೊಲೀಸ್ ಠಾಣೆ ಎಫ್.ಎ. ನಂ: 02/2017 ಕಲ0: ಆಕಸ್ಮಿಕ ಬೆಂಕಿ ಅಪಘಾತ.
ದಿನಾಂಕ: 16-03-2017 ರಂದು gÁwæ 19-33 ಗಂಟೆಗೆ ಫಿರ್ಯಾದಿದಾರರಾದ ಹನಮಂತಪ್ಪ ತಂದೆ ಪಕೀರಪ್ಪ ಭಜೆಂತ್ರಿ ಸಾ: ಯರಗೇರಾ ರವರು ಠಾಣೆಗೆ ಹಾಜರಾಗಿ ಬೆರಳಚ್ಚು ಮಾಡಿದ ಅರ್ಜಿಯನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರ ಸಾರಾಂಶವೆನೆಂದರೆ. ಅರ್ಜಿದಾರರು ಮುಂಜಾನೆ 11-00 ಗಂಟೆಗೆಯ ಸುಮಾರಿಗೆ ತಾವುಮಾಡುವ ಮಾವಿನ ಇಟಗಿ ಸರ್ವೆ ನಂ: 4/2 ರಲ್ಲಿ ಗುಡಿಸಲು ಹಾಕಿ ಕೊಂಡಿದ್ದು ಅಲ್ಲಿಂದ ಹೊಲದಲ್ಲಿ ಕೆಲಸಮಾಡಲು ಹೋದಾಗ ಆಕಸ್ಮೀಕವಾಗಿ ಗುಡಿಸಲಿಗೆ ಬೆಂಕಿ ಹತ್ತಿ ಅದರಲ್ಲಿದ್ದ ದವಸದಾನ್ಯ ಹಾಗೂ ಪಾತ್ರೆ. ಪಗಡುಗಳು ಹಾಗೂ ಇತರ ಸಾಮಾನುಗಳು ಮತ್ತು 5 ಕೋಳಿಗಳು ಗುಡಿಸಲು ಸಮೇತ ಸುಟ್ಟು ಒಟ್ಟು 87,000=00 ರೂಪಾಯಿಗಳಷ್ಟು ಲುಕ್ಸಾನಾಗಿದ್ದು ಇರುತ್ತದೆ. ಕಾರಣ ಸರ್ಕಾರದಿಂದ ಸಿಗುವಂತ ಸೌಲತ್ ಬರುವಂತೆ ಮಾಡಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಎಫ್.ಎ ನಂ: 2/2017 ಕಲಂ ಆಕಸ್ಮೀಕ ಬೆಂಕಿ ಅಪಘಾತದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008