Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 18, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 67/2017 ಕಲ0: 87 Karnataka Police Act
ದಿನಾಂಕ:- 17-03-2017 ರಂದು ಮಧ್ಯಾಹ್ನ 12-45 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗ ಗಿಡದ ನೆರಳಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಹಾಗೂ ಸಿಬ್ಬಂದಿಯವರು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ ಜನರು ಓಡಿ ಹೋಗಿದ್ದು ಐದು ಜನರು ಸಿಕ್ಕಿಬಿದ್ದಿದ್ದು ಇರುತ್ತದೆ. ಅವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಗಣೇಶ ತಂದೆ ಹನುಮಂತಪ್ಪ ವಾಲಿಕಾರ, ವಯಸ್ಸು: 36 ವರ್ಷ ಜಾತಿ: ಗಂಗಾಮತ, ಉ: ಒಕ್ಕಲತನ ಸಾ: ಮುಷ್ಟೂರ (2) ಆಂಜನೇಯ ತಂದೆ ಹನುಮಂತಪ್ಪ ಕಬ್ಬೇರ, ವಯಸ್ಸು: 34 ವರ್ಷ ಜಾತಿ: ಗಂಗಾಮತ, ಉ: ಒಕ್ಕಲತನ ಸಾ: ಮುಷ್ಟೂರ (3) ಕೊಮಾರೆಪ್ಪ ತಂದೆ ಕಂಟೆಪ್ಪ ತಿರುಕಣ್ಣವರ, ವಯಸ್ಸು: 25 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಮುಷ್ಟೂರ, (4) ಪೋತರಾಜ ತಂಧೆ ಈರಪ್ಪ ಮಡಿವಾಳರ, ವಯಸ್ಸು: 35 ವರ್ಷ ಜಾತಿ: ಮಡಿವಾಳರ, ಉ: ಕುಲಕಸಬು, ಸಾ: ಮುಷ್ಟೂರ, (5) ಬಸಪ್ಪ ತಂದೆ ಬಸಪ್ಪ ವಡ್ಡರಹಟ್ಟಿ, ವಯಸ್ಸು: 50 ವರ್ಷ ಜಾತಿ: ಕುರುಬರ, ಸಾ: ಮುಷ್ಟೂರ ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 11900/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಟಾವೆಲ್ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ: 53/2017 ಕಲಂ. 143,137,323,324,504,506 IPC And 3(1) (10) SC/St Act 1989.
ದಿನಾಂಕ. 17-03-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರರಾದ ಬಸಪ್ಪ ತಂದೆ ಮರಿಯಪ್ಪ ಮಾದರ ವಯಾ 39 ವರ್ಷ ಜಾ.ಮಾದರ ಉ.ಒಕ್ಕಲುತನ ಸಾ.ಹಿರೇಬನ್ನಿಗೋಳ  ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ. 17-03-2017 ರಂದು ಸಂಜೆ 7-00 ಗಂಟೆ ಸುಮಾರಿಗೆ ನಮ್ಮೂರಿನ ಶರಣಬಸವೇಶ್ವರ ದೇವರ ಉತ್ಸವ ನಡೆಯುತ್ತಿದ್ದಾಗ ನಾವು ಅಂದರೆ ನಮ್ಮ ಕೇರಿಯ ದಲಿತ ಯುವಕರಾದ 1) ನಾನು ಬಸಪ್ಪ ತಂದೆ ಮರಿಯಪ್ಪ ಮಾದರ 2) ಮಂಜುನಾಥ ತಂದೆ ಸಣ್ಣದುರಗಪ್ಪ ಹರಿಜನ ವಯಾ 21 ವರ್ಷ 3) ಶಿವರಾಜ ತಂದೆ ಶಿವಪ್ಪ ಹರಿಜನ ವಯಾ 14 ವರ್ಷ 3) ಕುಬೇರಪ್ಪ ತಂದೆ ಸಿದಪ್ಪ ಹರಿಜನ ವಯಾ 25 ವರ್ಷ 4) ಪರಸಪ್ಪ ತಂದೆ ಹಿರೇಬಸಪ್ಪ ಹರಿಜನ ವಯಾ 36 ವರ್ಷ 5) ರಂಗಪ್ಪ ತಂದೆ ಕನಕಪ್ಪ ಹರಿಜನ ವಯಾ 21 ವರ್ಷ 6) ಯಮನಪ್ಪ ತಾಯಿ ಈರವ್ವ ಹರಿಜನ ವಯಾ 23 ವರ್ಷ 7) ಮಾನಪ್ಪ ತಂದೆ ಹನಮಪ್ಪ ಹರಿಜನ ವಯಾ 22 ವರ್ಷ 8) ದೇವಪ್ಪ ತಂದೆ ಈರಪ್ಪ ಹರಿಜನ ವಯಾ 27 ವರ್ಷ 9) ಯಮನಪ್ಪ ತಂದೆ ಮಹಾದೇವಪ್ಪ ಹರಿಜನ ವಯಾ 40 ವರ್ಷ ನಾವೆಲ್ಲರೂ ಜಾತ್ರೆಯ ಉತ್ಸವ ನೋಡುತ್ತಿದ್ದಾಗ ನಮ್ಮೂರಿನ 1) ಮಾತಿಂಗಪ್ಪ ಬಳಿಗಾರ 2) ಸಂಗಪ್ಪ ತಂದೆ ಬಸಪ್ಪ ಮೇಟಿ 3) ಶಿವಪುತ್ರಪ್ಪ ತಂದೆ ಗುರಪ್ಪ ಅರಳಿಕಟ್ಟಿ 4) ಶಂಕ್ರಪ್ಪ ತಂದೆ ದೇವಪ್ಪ ಕಲ್ಗೋಡಿ 5) ಅಯ್ಯಪ್ಪ ತಂದೆ ಶರಣಪ್ಪ ರ್ಯಾವವಣಿಕಿ 6) ಬಸವರಾಜ ತಂದೆ ಚನ್ನಪ್ಪ ಮೇಟಿ 7) ಸಂಗಪ್ಪ ತಂದೆ ಕುಂಟಪ್ಪ ವಣಕಿ 8) ಗುರುಬಸಪ್ಪ ತಂದೆ ವೀರಭದ್ರಪ್ಪ ಹಡಪದ ರವರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಲೇ ಮಾದಿಗ ಸೂಳೇ ಮಕ್ಕಳೇ ಈ ಜಾತ್ರೆಯಲ್ಲಿ ಬರಬೇಡ ಅಂದರೂ ನೀವು ಯಾಕೆ ಬರುತ್ತೀರಿ ನೀವು ನಮ್ಮ ಸಮಾಜದ ಜಾತ್ರೆಯಲ್ಲಿ ಭಾಗವಹಿಸಿದರೆ ನಿಮ್ಮನ್ನು ಏನು ಮಾಡಬೇಕು ಅಂತಾ ನಮಗೆ ಗೊತ್ತಿದೆ ಅಂತಾ ಜಗಳ ತೆಗೆದು ಹೊಡೆ-ಬಡಿ ಮಾಡಿ ಹ್ಯಾಂಗ ಬಾಳ್ವೆ ಮಾಡ್ತೀರಿ ನೋಡಿಕೊಳ್ಳುತ್ತೇವೆ ಅಂತಾ ನಮಗೆ ಬೆದರಿಕೆ ಹಾಕಿ ಇರುತ್ತದೆ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ: 43/2017 ಕಲ0: 78(3), 78(ಸಿ) Karnataka Police Act
ದಿನಾಂಕ 17-03-2017 ರಂದು 9-15 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತರಾದ 1]   ಬಾಬುಸಾಬ ತಂದೆ ಖಾಜಾಹುಸೇನ ಮುಂಡಾಸದ ವಯಾ: 60 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: 05 ನೇ ಲೈನ ಲಿಂಗರಾಜ ಕ್ಯಾಂಪ, ಗಂಗಾವತಿ,2] ಶಂಕ್ರಪ್ಪ ತಂದೆ ಹನುಮಂತಪ್ಪ ವಂಕಲಕುಂಟಿ ವಯಾ: 35 ವರ್ಷ ಜಾ: ಮಡಿವಾಳ  ಉ: ಮೇಷನ್ ಕೆಲಸ ಸಾ: ಮಹೆಬೂಬ ನಗರ ಗಂಗಾವತಿ ಇವರು ಗಂಗಾವತಿ ನಗರದಲ್ಲಿನ ಪ್ರಶಾಂತ ನಗರದ ಮಸೀಧಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ  ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವರ ಮೇಲೆ ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 1330-00. 02] ಮಟಕಾ ನಂಬರ ಬರೆದ 08 ಮಟ್ಕಾ ಪಟ್ಟಿಗಳು ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು.  ಸದರಿ ಆರೋಪಿತರ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಮಟಕಾ ಪಟ್ಟಿ ತೆಗೆದುಕೊಳ್ಳುವ 1] ಆಟೋ ಶಂಕರ @ ಶಂಕರ ರಾಠೋಡ ,2]  ಬಾಲು ರಾಠೋಡ ಸಾ: ಮಹೆಬೂಬ ನಗರ ಮತ್ತು ಮಟಕಾ ಜೂಜಾಟದ ಮಟಕಾ ಪಟ್ಟಿಗಳನ್ನು ಬುಕ್ಕಿಗಳ ಕೈಗೆ ಕೊಡುವ ಹಮೀದ್ ಸಾ: ಮಹೆಬೂಬ ನಗರ ರವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 49/2017 ಕಲ0: 448, 354, 342, 506 ಸಹಿತ 34 ಐ.ಪಿ.ಸಿ.
ದಿನಾಂಕ: 17.03.2017 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿ ಕು: ಅನಸೂಯಾ ತಂದೆ ತೇಜಪ್ಪ ಲಿಂಗನಬಂಡಿ ಸಾ: ಹಾಲವರ್ತಿ ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 17.03.2017 ರಂದು ಮದ್ಯಾನ 2:30 ಗಂಟೆಯ ಸುಮಾರಿಗೆ ತಾನು ಮನೆಯಲ್ಲಿದ್ದಾಗ ತನಗೆ ಪರಿಚಯದ ತಿಪ್ಪಣ್ಣ ಗುರಾಣಿ ವಯಾ: 55 ವರ್ಷ ಸಾ: ಸಂಗನಾಳ ಹಾಗೂ ಇತರೆ ಒಬ್ಬ ಅಪರಿಚಿತ ವ್ಯಕ್ತಿ ವಯಾ: 25 ವರ್ಷ ಇಬ್ಬರೂ ಕೂಡಿಕೊಂಡು ತನ್ನ ಮನೆಯೊಳಗೆ ಪ್ರವೇಶ ಮಾಡಿ ನಿನ್ನ ತಮ್ಮ ಎಲ್ಲಿದ್ದಾನೆ ಹೇಳು ಅಂತಾ ಬೆದರಿಸಿ ಮನೆಯಲ್ಲಿ ಬಲವಂತವಾಗಿ ಕೂಡಿಹಾಕಿ ಒಂದು ಕುರ್ಚಿಗೆ ಕೈಗಳನ್ನು ಕಟ್ಟಿ ನಿನ್ನ ತಮ್ಮ ಎಲ್ಲಿದ್ದಾನೆ ಹೇಳು ಅಂತಾ ಬೆದರಿಕೆಯೊಡ್ಡಿದ್ದು ಜೋರಾಗಿ ಅಳುತ್ತಿದ್ದಾಗ ತಾವು ತಂದಿದ್ದ ಕತ್ತರಿಯಿಂದ ತಮ್ಮ ತಲೆಯ ಜಡೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008