Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, May 18, 2017

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 53/2017 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 16-05-2017 ರಂದು ಫೀರ್ಯಾಧಿದಾರಳು ತನ್ನ ಗಂಡ 1] ಖಾಸಿಂ ಅಲಿ ಮತ್ತು ಮಕ್ಕಳಾದ 2] ಸಮೀರ, 3] ತನ್ವೀರ್ ಹಾಗೂ ತನ್ನ ತಾಯಿ 4] ಗೌಸಿಯಾ &  ತನ್ನ ಅಕ್ಕ 5] ಜರಿನಾ, ಅಕ್ಕನ ಮಕ್ಕಳಾದ 6] ಶಕೀಯಾ, 7] ನಾಜು @ ನಾಜ್ಮೀನ್, 8] ನಿಜಾಮ ಇವರೊಂದಿಗೆ ಮುನಿರಾಬಾದದಿಂದ ಲಕ್ಷ್ಮೇಶ್ವರದ ದೂದನಾನ ದರ್ಗಾಕ್ಕೆ ಆಟೋ ನಂ ಕೆ.ಎ 37 ಎ 4175 ನೇದ್ದರಲ್ಲಿ ಹೋಗಿ ದಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ ಲಕ್ಷ್ಮೇಶ್ವರದಿಂದ ದಿನಾಂಕ:17-05-2017 ರಂದು ಸಾಯಂಕಾಲ 07-00 ಘಂಟೆ ಸುಮಾರಿಗೆ ಬಿಟ್ಟು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ತಳಕಲ್ಲ ಸೀಮಾದ ಮುರಾರ್ಜಿ ಶಾಲೆಯ ಹತ್ತಿರ ನಮ್ಮ ಆಟೋದ ಹಿಂದನ ಎಡಗಡೆ ಗಾಲಿ ಪಂಕ್ಚರ ಆಗಾದ ರಸ್ತೆ ಎಡ ಮಗ್ಗಲು ನಿಲ್ಲಿಸಿ ಸಿಗ್ನಲ್ ಲೈಟ್ ಹಾಕಿ, ಸದರ ಆಟೋದ ಬಲಗಡೆಯಿಂದ ಹಿಂದಿನ ಗಾಲಿ ಹತ್ತಿರ ಇರುವ ಟೊಲಬಾಕ್ಸದಿಂದ ಗಾಲಿ ಬಿಚ್ಚಲು ಸಾಮಾನು ತೆಗೆದುಕೊಳ್ಳುತ್ತಿರುವಾಗ  ಫಿರ್ಯಾಧಿದಾರಳ ಗಂಡ ಖಾಸಿಂ ಅಲಿ & ಮಗ ಸಮೀರ ಇವರಿಗೆ ಕೊಪ್ಪಳ ಕಡೆಯಿಂದ ಗದಗ ಕಡೆಗೆ ಹೋರಟ ಲಾರಿ ನಂಬರ್ ಕೆ.ಎ-22 ಸಿ-2370 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷ್ಯತನದಿಂದ ನೆಡಸಿ ಟಕ್ಕರ ಕೊಟ್ಟು ನನ್ನ ಗಂಡ ಖಾಸಿಂ ಅಲಿ & ಮಗ ಸಮೀರ ಇವರಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಸಾಯುವಂತೆ ಮಾಡಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ: 87 Karnataka Police Act.
ದಿ : 17.05.2017 ರಂದು 03.30 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಪಾಂಡುರಂಗ ಗುಡಿಯ ಹಿಂದೆ ಹಳ್ಳದ ಪಕ್ಕ ಸಾರ್ವಜನಿಕ ಸ್ಥಳದಲ್ಲಿ 09 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿ.ಪಿಐ ಸಾಹೇಬರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 08 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 2200=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ: 87 Karnataka Police Act.
ದಿ : 17.05.2017 ರಂದು 05.40 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಂಗಳಾಪುರ ಗ್ರಾಮದ ಖಾಸಿಂಅಲಿ ಕೋಳಿ ಫಾರಂ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 06 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಡಿ.ಎಸ್.ಪಿ  ಸಾಹೇಬರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, 2 ಜನ ಓಡಿ ಹೋಗಿದ್ದು  ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 2820=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ: 279, 337, 338 ಐ.ಪಿ.ಸಿ..

ದಿನಾಂಕ:17-05-2017 ರಂದು ಸಾಯಂಕಾಲ 5-45 ಗಂಟೆಯ ಸುಮಾರಿಗೆ ಆರೋಪಿ ಶರಣಪ್ಪ ತಂದೆ ಗುರುಪಾದಪ್ಪ ಗುರಿಕಾರ  ಟಾಟಾ ಎ.ಸಿ.ಇ ವಾಹನ ನಂ; ಕೆ.ಎ-37/ಎ-7239 ನೇದ್ದರ ಚಾಲಕ ಸಾ|| ಹಿರೇಮ್ಯಾಗೇರಿ ಇತನು ತನ್ನ ಟಾಟಾ ಎ.ಸಿ.ಇ ವಾಹನ ಕೆ.ಎ-37/ಎ-7239 ನೇದ್ದನ್ನು ಸಂಕನೂರು-ಸೂಡಿ ರಸ್ತೆಯ ಮುಕ್ತುಂಸಾಬ ಇಟಗಿ ರವರ ಹೋಲದ ಹತ್ತಿರ ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೊರಟಿದ್ದ ಫಿರ್ಯಾದಿ ಹನಮಂತಪ್ಪ ತಂದೆ ಪರಸಪ್ಪ ಪೂಜಾರ ವ;28 ವರ್ಷ ಜಾ;ವಾಲ್ಮೀಕಿ ಉ;ಕೆ.ಎ.-26/ಎ-6169 ನೇದ್ದರ ಚಾಲಕ ಸಾ|| ಸೂಡಿ ಇತಅಪೇ ಪ್ಯಾಸೇಂಜರ ವಾಹನ ನಂ; ಕೆ.ಎ.-26/ಎ-6169 ನೇದ್ದಕ್ಕೆ ಟಕ್ಕರಕೊಟ್ಟಿದ್ದರಿಂದ ಫಿರ್ಯಾದಿದಾರನ ವಾಹನದಲ್ಲಿದ್ದ 7 ಜನರಿಗೆ ಹಾಗೂ ಪಿರ್ಯಾದಿದಾರನಿಗೆ ಭಾರಿ ಮತ್ತು ಸಾದ ಸ್ವರೂಪದ ರಕ್ತಗಾಯಗಳಾಗಿದ್ದು  ಇರುತ್ತದೆ. ಕಾರಣ ಸದರ ಟಾಟಾ ಎ.ಸಿ.ಇ ವಾಹನ ಕೆ.ಎ-37/ಎ-7239 ನೇದ್ದರ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008