Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 28, 2017

1] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 197/2017 ಕಲಂ: 87 Karnataka Police Act :.
ದಿ: 27-08-2017 ರಂದು 04-40 ಎ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹೊಸಗೊಂಡಬಾಳ ಗ್ರಾಮದ ಅನ್ನದಾನೇಶ್ವರ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 4800=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ.
2] ಯಲಬರ್ಗಾ ಪೊಲೀಸ್  ಠಾಣೆ ಗುನ್ನೆ ನಂ. 110/2017 ಕಲಂ: 32, 34 Karnataka Excise Act.
ದಿನಾಂಕ:27-08-2017 ರಂದು ಸಂಜೆ 5-20 ಗಂಟೆ ಸುಮಾರಿಗೆ ಆರೋಪಿತನು ಯಲಬುರ್ಗಾ ಪಟ್ಟಣದ  ಬಸ್ಸನಿಲ್ದಾಣದ ಹತ್ತಿರ ಇರುವ ಪ್ರಶಾಂತ ಖಾನಾವಳಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಧ್ಯಸಾರ ಟೆಟ್ರಾ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ, ಸದರಿ ಆರೋಪಿತನಿಂದ 90 ML ನ HAYWARDS CHEERS WHISKY- ಒಟ್ಟು 170 (ಒಂದು ನೂರಾ ಎಪ್ಪತ್ತು] ಟೇಟ್ರಾ ಪಾಕೀಟಗಳು ಇದ್ದು. ಪ್ರತಿಯೊಂದಕ್ಕೆ 28.13 ರೂಗಳಂತೆ ಒಟ್ಟು 4,782.1 ರೂ. ಬೆಲೆವುಳ್ಳಗಳನ್ನು ಹಾಗೂ ಮದ್ಯ ಮಾರಾಟದ ನಗದು ಹಣ 540/- ರೂಗಳನ್ನು ಜಪ್ತಪಡಿಸಿ ಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್  ಠಾಣೆ ಗುನ್ನೆ ನಂ. 116/2017 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 27-08-2017 ರಂದು ಮುಂಜಾನೆ 09 ಗಂಟೆ ಸುಮಾರಿಗೆ ಯಲಬುರ್ಗಾ ಕುಕನೂರು ರಸ್ತೆಯ ಮೇಲೆ ಕುಕನೂರು ಪಟ್ಟಣದ ಐ.ಬಿ ಮುಂದುಗಡೆ ಆರೋಪಿತರನು ತಾನು ನಡೆಸುತ್ತಿದ್ದ ಅಪೆ ವಾಹನದ ಇಂಜನ್ ನಂ: S6H8599359 ಹಾಗೂ ಚಾಸ್ಸಿ ನಂ ; MBX0000ZFUH335351 ನೇದ್ದನ್ನು ಸಂಗನಾಳ ಕಡೆಯಿಂದ ಕುಕನೂರು ಕಡೆಗೆ ಅತೀ ಜೋರಾಗಿ ಹಾಗೂ ಅಲ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಅಪೆ ವಾಹನದ ಮೇಲೆ ಹತೋಟಿ ಸಾದಿಸದೆ ರಸ್ತೆಯ ಮೇಲೆ ಬಲಮಗ್ಗಲಾಗಿ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಅಪೆ ವಾಹನದಲ್ಲಿದ್ದ ಸುಮಾರು 6 ಜನರಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಾಳಾಗಿರುತ್ತವೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್  ಠಾಣೆ ಗುನ್ನೆ ನಂ. 238/2017 ಕಲಂ: 20 [B], [ii], [A], NDPS Act 1985

ದಿನಾಂಕ :- 27-08-2017 ರಂದು ಮದ್ಯಾಹ್ನ  3-00  ಗಂಟೆಗೆ ಶ್ರೀ ವಿಶ್ವನಾಥ ಹಿರೇಗೌಡ್ರ ಪಿ.ಎಸ್.ಐ. ಕುಷ್ಟಗಿ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ: 27-08-2017 ರಂದು ಬೆಳಿಗ್ಗೆ 10-30 ಗಂಟೆಗೆ  ವಣಗೇರಿ ರಸ್ತೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದಿದ್ದು ಮಾಹಿತಿಯನ್ನು ಮೇಲಾಧಿಕಾರಿಗಳಿ ತಿಳಿಸಿ ದಾಳಿ ಕುರಿತು ಪರವಾನಿಗೆ ಪಡೆದು ಸಂಗಡ ಸರ್ಕಾರಿ ವೈದ್ಯಾಧಿಕಾರಿಗಳನ್ನು ಹಾಗೂ ಪಂಚರನ್ನು ಕರೆದುಕೊಮಡು ಹೋಗಿ ದಾಳಿ ಮಾಡಿಕೊಂಡು ಮೂಲ ಪಂಚನಾಮೆಯೊಂದಿಗೆ ಇಬ್ಬರೂ ಆರೋಪಿತರನ್ನು 20,000=00 ರೂ ಬೆಲೆ ಬಾಳುವ ಗಾಂಜಾವನ್ನು ತಂದು ಹಾಜರುಪಡಿಸಿ ಆರೋಪಿತ ವಿರುದ್ದ ಕ್ರಮ ಕೈಕೊಳ್ಳುವಂತೆ ನೀಡಿರುವ ವರದಿಯ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008