Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 31, 2017

1] ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ. 121/2017 ಕಲಂ: 87 Karnataka Police Act :.
ದಿನಾಂಕ:30-08-2017 ರಂದು ಬೆಳಗಿನ ಜಾವ 3-00 ಗಂಟೆ ಸುಮಾರಿಗೆ ಆರೋಪಿತರು ಬಿನ್ನಾಳ ಗ್ರಾಮದ ಮಸೂತಿ ಸಮೀಪ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಅವರ ಮೇಲೆ ಶ್ರೀ. ಚಂದ್ರಹಾಸ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರಕಾ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 27480=00 ರೂ.ಗಳನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್  ಠಾಣೆ ಗುನ್ನೆ ನಂ. 152/2017 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 30-08-2017 ರಂದು ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ದೊಡ್ಡಪ್ಪನಾದ ಮಳ್ಳಪ್ಪ ತಾಯಿ ಮರಿಯಮ್ಮ 70 ವರ್ಷ ಇವರು ವೈಯಕ್ತಿಕ ಕೆಲಸದ ನಿಮಿತ್ಯ ಮುಂಡರಗಿ-ಹಿರೇಸಿಂಧೋಗಿ ಮುಖ್ಯ ರಸ್ತೆಯಲ್ಲಿ ಕಾತರಕಿ ಕ್ರಾಸದಿಂದ ಬಸ್ ನಿಲ್ದಾಣದ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮುಂಡರಗಿ ಕಡೆಯಿಂದ ಕ್ರೂಷರ್ ವಾಹನ ನಂ: ಕೆ.ಎ-22/ಎನ್-7435 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ದೊಡ್ಡಪ್ಪನಿಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿ ತೀವ್ರವಾಗಿ ಗಾಯಗೊಳಿಸಿದ ನಂತರ ಅಲ್ಲಿಂದ ಹೊರಟು ಹೋಗಿದ್ದು ಅಪಘಾತದ ನಂತರ ಗಾಯಾಳನ್ನು ಹಿರೇಸಿಂಧೋಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್  ಠಾಣೆ ಗುನ್ನೆ ನಂ. 242/2017 ಕಲಂ: 279, 337, 338 ಐ.ಪಿ.ಸಿ:
ಪಿರ್ಯಾದಿದಾರನು  ತಮ್ಮೂರಿನಿಂದ ಕುಷ್ಟಗಿಯಲ್ಲಿ ತಾನು ಮಾಡುವ ಎಲೆಕ್ಟ್ರಿಕಲ್ ಅಂಗಡಿಗೆ ಕೆಲಸಕ್ಕಾಗಿ ಬರುತ್ತಿರುವಾಗ ತಮ್ಮೂರ ಬಸ್ ನಿಲ್ದಾಣದಲ್ಲಿದ್ದಾಗ ಗಂಗಾವತಿ ಕಡೆಯಿಂದ ಗಂಗಾವತಿ ಬಾಗಲಕೋಟ ಬಸ್ ನಂ : ಕೆ.-28/ಎಫ್-1795 ನೇದ್ದು ಬಂದಿದ್ದು ಸದರಿ ಬಸ್ಸಿನಲ್ಲಿ ತಾನು ಮತ್ತು ತಮ್ಮೂರಿನ ಬಾಬು ಮಾದರ ಹಾಗೂ ಮುತ್ತಮ್ಮ ಭಜೇಂತ್ರಿ ಮೂರು ಜನರು ಬಸ್ ನಲ್ಲಿ ಕುಳಿತುಕೊಂಡು ಕುಷ್ಟಗಿ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನಾವು ಬರುತ್ತಿರುವ ಬಸ್ ಕುಷ್ಟಗಿಯ ಎನ್.ಹೆಚ್. ಕ್ರಾಸ್ ನಲ್ಲಿ ತಾನು ಹೋಗುತ್ತಿರುವ ರಸ್ತೆಗೆ ಸಿಗ್ನಲ್ ಬಿದ್ದಿದ್ದರೂ ಸಹ ತಾನು ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹೊಸಪೇಟೆ ಕಡೆಯಿಂದ ಬರುತ್ತಿರುವ ಲಾರಿ ನಂ : ಎಂ.ಹೆಚ್-46/ಎಆರ್-5945 ನೇದ್ದಕ್ಕೆ ಟಕ್ಕರ ಮಾಡಿದ್ದರಿಂದ ಸದರಿ ಬಸ್ಸಿನಲ್ಲಿದ್ದ ನನಗೆ ಹಾಗೂ ನಮ್ಮೂರಿನ ಬಾಬು ಮಾದರ ಹಾಗೂ ಮುತ್ತಮ್ಮ ಭಜೇಂತ್ರಿ ಹಾಗೂ ಬಸ್ಸಿನಲ್ಲಿದ್ದ ಇತರರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್  ಠಾಣೆ ಗುನ್ನೆ ನಂ. 192/2017 ಕಲಂ: 343, 323, 353, 332, 504, 506 ಐ.ಪಿ.ಸಿ:

ದಿನಾಂಕ:-30-08-2017 ರಂದು ಸಾಯಂಕಾಲ 5-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕಾರಟಗಿರವರು ನನಗೆ ಮತ್ತು ರಮೇಶ ಹೋಮ್ ಗಾರ್ಡ್ ನಂ 708 ಇಬ್ಬರಿಗೂ ನನ್ನ ಬೀಟ್ ಗ್ರಾಮವಾದ ಸೋಮನಾಳ ಗ್ರಾಮಕ್ಕೆ ಗೌರಿ ಗಣೇಶ ವಿಸರ್ಜನೆಯ ಬಂದೋ ಬಸ್ತ ಕರ್ತವ್ಯಕ್ಕೆ ನೇಮಕ ಮಾಡಿದ ಪ್ರಕಾರ ಸೋಮನಾಳ ಗ್ರಾಮಕ್ಕೆ ಹೋಗಿ, ಸೋಮನಾಳ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಶ್ರೀ ವಿಧ್ಯಾವಿನಾಯಕ ಸಂಘದವರು ಆಯೋಜನೆ ಮಾಡಿದ್ದ ಗಣೇಶ ಮೂರ್ತಿ ವಿಸರ್ಜನೆಯ ಬಂದೋ ಬಸ್ತ ಕರ್ತವ್ಯದ ಮೇಲಿದ್ದಾಗ್ಗೆ ರಾತ್ರಿ 8-00 ಗಂಟೆಯ ಸೋಮನಾಳ ಗ್ರಾಮದ ಶರಣಯ್ಯ ತಂದೆ ಚಂದ್ರಶೇಖರಯ್ಯ ಜಾ. ಜಂಗಮ ಎಂಬುವವನು ಗಣೇಶ ವಿಸರ್ಜನೆಯ ಸಮಯದಲ್ಲಿ ಸೋಮನಾಳ ಗ್ರಾಮದ ನವಲಿ-ಕಾರಟಗಿ ಮುಖ್ಯ ರಸ್ತೆಯ ಮೇಲೆ ಸಾರ್ವಜನಿಕರಿಗೆ ಅಸಹ್ಯಕರವಾಗುವಂತೆ ಡ್ಯಾನ್ಸ್ ಮಾಡುತ್ತಾ, ಅಶ್ಲೀಲ ಪದಗಳಿಂದ ಮಾತನಾಡುತ್ತಾ ಹೋಗಿ ಬರುವ ಸಾರ್ವಜನಿಕರ ವಾಹನಗಳಿಗೆ ಅಡ್ಡಗಟ್ಟಿ ನಿಲ್ಲಿಸಿ ಅವರಿಗೆ ಹೆದರಿಸುವುದು ಬೆದರಿಸುವುದು ಮಾಡುತ್ತಾ ತೊಂದರೆ ಮಾಡುತ್ತಿದ್ದಾಗ್ಗೆ ಸದ್ರಿಯವನಿಗೆ ನಾನು ಹೋಗಿ ಈ ರೀತಿ ಮಾಡುವುದು ತಪ್ಪು ಸಾರ್ವಜನಿಕರಿಗೆ ತೊಂದರೆಕೊಡಬೇಡ ರಸ್ತೆ ಬಿಟ್ಟು ಸರಿದು ನಿಲ್ಲು ಅಂದಿದ್ದಕ್ಕೆ ಆ ವ್ಯಕ್ತಿ  ನನಗೆ ಏ ಪೊಲೀಸ ನಾನು ಯಾರೂ ಅಂತಾ ನನ್ನ ಬಗ್ಗೆ ಕೇಳಿಲ್ಲವೇನು ನಿನ್ನ ಕೆಲಸ ನೀನು ಮಾಡು ನನಗೆನು ಸೆಂಟಾ ಹೇಳಾಕ ಬರುತ್ತಿ ಅಂತಾ ಅಂದನು ಆಗ ಅಲ್ಲಿ ಇದ್ದ ಸೋಮನಾಳ ಗ್ರಾಮದ ಬಸವರಾಜ ತಂದೆ ಶರಣಪ್ಪ, ಬಸವರಾಜ ತಂದೆ ಮೇಲಗಿರಿಯಪ್ಪ, ಹನುಮನಗೌಡ ಮತ್ತು ಗಣೇಶ ಆಯೋಜಕರಾದ ಸಂಜೀವ್ ತಂದೆ ಶರಣಪ್ಪ, ಸುರೇಶ ತಂದೆ ಬಾಲಪ್ಪ ಹುಗಾರ ಇವರುಗಳು ಬಂದು ಆತನಿಗೆ ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದರು ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ಸದ್ರಿ ವ್ಯಕ್ತಿ ಮತ್ತೆ ಗಣೇಶ ವಿಸರ್ಜನೆಯ ಬಂದೂ ಬಸ್ತ ಕರ್ತವ್ಯದ ಮೇಲಿದ್ದ ನನ್ನ ಹತ್ತಿರ ಬಂದು ನನಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ, ಲೇ ಸೂಳೆ ಮಕ್ಕಳೆ ಪೊಲೀಸರೇ ನಿಮ್ಮದು ಬಾಹಳಾ ಆಗೈತಿ ನಿನ್ನ ತಿಂಡಿ ಏನ್ಲೇ ಬೋಸುಡಿ ಮಗನೆ ಅಂತಾ ಅಂದು ನಾನು ಸರಕಾರಿ ಕರ್ತವ್ಯದ ಮೇಲೆ ಇರುವುದು ಗೊತ್ತಿದ್ದು ನಾನು ಮಾಡುತ್ತಿದ್ದ ಬಂದೋ ಬಸ್ತ ಕರ್ತವ್ಯಕ್ಕೆ ಅಡೆತಡೆ ಮಾಡಿ ನನ್ನ ಮೇಲೆ ಎರಗಿ ಹೊಡೆಯಲು ಬಂದಾಗ ನಾನು ನನ್ನ ಕೈಯಿಂದ ಆತನಿಗೆ ಹಿಂದಕ್ಕೆ ದೂಡುತ್ತಿದ್ದಂತೆ ಆತನು ನನ್ನ ಎಡಗೈಯನ್ನು ಹಿಡಿದುಕೊಂಡು ತನ್ನ ಬಾಯಿಯಿಂದ ಕಚ್ಚಿ ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು ಅಷ್ಟರಲ್ಲಿ ನನ್ನೊಂದಿಗೆ ಕರ್ತವ್ಯದ ಮೇಲಿದ್ದ ರಮೇಶ ಹೋಮ್ ಗಾರ್ಡ ಮತ್ತು ಅಲ್ಲಿದ್ದ ಸೋಮನಾಳ ಗ್ರಾಮದ ಬಸವರಾಜ ತಂದೆ ಶರಣಪ್ಪ, ಬಸವರಾಜ ತಂದೆ ಮೇಲಗಿರಿಯಪ್ಪ, ಹನುಮನಗೌಡ ಮತ್ತು ಗಣೇಶ ಆಯೋಜಕರಾದ ಸಂಜೀವ್ ತಂದೆ ಶರಣಪ್ಪ, ಸುರೇಶ ತಂದೆ ಬಾಲಪ್ಪ ಹುಗಾರ ಮತ್ತು ಗಣೇಶ ವಿಸರ್ಜನೆ ನೋಡಲು ಬಂದ ಇತರೆ ಸಾರ್ವಜನಿಕರು ಬಂದು ನನಗೆ ಬಿಡಿಸಿಕೊಂಡರು. ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008