Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 8, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 109/2017 ಕಲಂ. 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರ ಮಗ ಮೃತ ಭೀರಲಿಂಗ ಮತ್ತು ಅವರ ಸಹೋದರನ ಮಗ ಭೀಮಣ್ಣ ಇಬ್ಬರೂ ಕೂಡಿ ತಮ್ಮ ತಮ್ಮ ಸೈಕಲ್ಗಳನ್ನು ತೆಗೆದುಕೊಂಡು ಕೆಲಸದ ಸಲುವಾಗಿ ಉ.ರಾಂಪುರಕ್ಕೆ ಹೋಗುತ್ತಿರುವಾಗ ಸಂಜೆ 3-40 ಗಂಟೆಗೆ ಹಾಗಲ್ದಾಳ ಇನ್ನೂ ಸ್ವಲ್ಪ ದೂರ ಇದ್ದಾಗ ಸರಕಾರಿ ಬಸ್ ನಂ : ಕೆ.ಎ-37/ಎಫ್-490 ನೇದ್ದರ ಚಾಲಕ ಹನುಮಪ್ಪ ತಂದೆ ಶರಣಪ್ಪ ಚೌರಿ ಈತನು ತಾನು ನಡೆಸುತ್ತಿದ್ದ ಬಸ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರಸ್ತೆಯಲ್ಲಿ ಸೈಕಲ್ ತೆಗೆದುಕೊಂಡು ಮುಂದೆ ಹೋಗುತ್ತಿದ್ದ ಫಿರ್ಯಾದಿದಾರರ ಮಗ ಭೀರಲಿಂಗನ ಮೇಲೆ ಹಿಂದಿನಿಂದ ಬಸ್ ಹಾಯಿಸಿದ್ದು ಇದರಿಂದ ಭೀರಲಿಂಗನ ತಲೆ ಪೂರ್ತಿ ಜಜ್ಜಿ ಹೋಗಿ ಮೇದುಳು ಹೊರ ಚೆಲ್ಲಿ, ಬಲಗೈ ರಟ್ಟೆಗೆ ತೀವ್ರಗಾಯವಾಗಿ ಎಲುಬು ಕಿತ್ತಿದಂತೆ ಕಾಣುತ್ತಿದ್ದು, ಎಡತೊಡೆ ಸೊಂಟದಿಂದ ಮೊಣಕಾಲ ತನಕ ತೀವ್ರಗಾಯವಾಗಿ ಮಾಂಸಖಂಡ ಕಿತ್ತಿದೆ. ಬಲಗಡೆಯ ತೊಡೆಯ ಒಳಭಾಗ ತೀವ್ರಗಾಯವಾಗಿ ಚರ್ಮ ಕಿತ್ತಿದೆ. ಶಿಶ್ನ ಭಾಗ ಪೂತರ್ಿ ಜಜ್ಜಿ ಹೋಗಿ ತೀವ್ರಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 195/2017 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್/ಟಿ. ಕಾಯ್ದೆ
ದಿನಾಂಕ 08-08-2017 ರಂದು 00-15 ಗಂಟೆಗೆ ಫಿರ್ಯಾದಿ ರಮೇಶ ತಂದೆ ಎ. ಪಾಮಣ್ಣ, ವಯಾ: 19 ವರ್ಷ, ಸಾ: ಅಂಬೇಡ್ಕರ್ ನಗರ ಗಂಗಾವತಿ. ಇವರು ಫಿರ್ಯಾದಿಯನ್ನು ಹಾಜರುಪಡಿಸಿದ್ದು, ದಿನಾಂಕ: 07-08-2017 ರಂದು ರಾತ್ರಿ 10-15 ಗಂಟೆ ಸುಮಾರಿಗೆ ಫಿರ್ಯಾದಿಯು ಊಟ ಮಾಡಿ ನಮ್ಮ ಓಣಿಲ್ಲಿ ನಿಂತುಕೊಂಡಿದ್ದಾಗ ಆರೋಪಿತರು ಬಂದಿದ್ದು ಸದರಿ ಆರೋಪಿತರಿಗೆ ಫಿರ್ಯಾದಿಯು ನೋಡಿದ್ದರಿಂದ ಯಾಕಲೇ ನಮಗೆ ಗುರಾಯಿಸ್ತಿಯಾ, ಮಾದಿಗ ಸೂಲೇಮಕ್ಕಳ ತಿಂಡಿ ಬಾಳಾ ಆಗಿದೆ ಈ ಮಾದಿಗ ಸೂಳೇಮಗನ್ನ ಬಿಡಬಾಡ್ರಿ ಅಂತಾ ಫಿರ್ಯಾದಿಗೆ ಆರೋಪಿ ರಾಘವೇಂದ್ರನು ತಲೆಯಿಂದ ಮೂಗಿಗೆ ಗುದ್ದಿ ರಕ್ತಗಾಯ ಮಾಡಿದ್ದು ಹಾಗೂ ಆರೋಪಿ ಶಿವು ಬಲೀಸ್ ನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೆ ಉಳಿದ ಆರೋಪಿತರು ಸಹ ಹೊಡೆ-ಬಡೆ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ. 32, 34  Karnataka Excise Act.

ದಿನಾಂಕ: 07-08-2017 ರಂದು ಮದ್ಯಾಹ್ನ 12-15 ಗಂಟೆಗೆ ಕೊಪ್ಪಳದ, ಸಿಂದೋಗಿ ರಸ್ತೆಯ, ಆದರ್ಶ ಲಾಡ್ಜ್ ಹತ್ತಿರ, ಸಾರ್ವಜನಿಕ ರಸ್ತೆಯಲ್ಲಿ ಆರೋಪಿತಳು ಅನಧೀಕೃತವಾಗಿ ಯಾವುದೇ ಲೈಸನ್ಸ ವಗೈರೆ ಇಲ್ಲದೇ ಅಕ್ರಮವಾಗಿ ಸುಮಾರು 1012.68=00 ರೂ. ಬೆಲೆಬಾಳುವ ಹೈವಾರ್ಡ್ಸ್ ಕಂಪನಿಯ ಮಧ್ಯದ 36 ಟೆಟ್ರಾ ಪಾಕೇಟಗಳ ಮಧ್ಯವನ್ನು ರೇಣುಕಾ ಬಾರ್ ಕೊಪ್ಪಳದಿಂದ ತೆಗೆದುಕೊಂಡು ಸಾಗಾಟ ಮಾಡುತ್ತಿದ್ಧಾಗ ಶ್ರೀ ರವಿ.ಸಿ.ಉಕ್ಕುಂದ ಪಿ.ಐ. ನಗರ ಠಾಣೆ ರವರು ದಾಳಿ ಮಾಡಿದ್ದು ಸದರಿ ಮದ್ಯವನ್ನು ಆರೋಪಿತಳಿಂದ ಜಪ್ತ ಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008