Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 7, 2017

ದಿನಾಂಕ. 06-08-2017 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಫಿರ್ಯಾದಿದಾರರು ಠಾನೆಗೆ ಹಾಜರಾಗಿ ಹೇಳಿಕೆಯನ್ನು ನೀಡಿದ್ದು ಅವರ ಹೇಳಿಕೆಯನ್ನು ಗಣಕೀಕರಣಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 06-08-2017 ರಂದು ಫಿರ್ಯಾದಿದಾರರು ವಾಸಮಾಡು ಸದಾಶಿವ ನಗರದ ಚಂದಾಲಿಂಗಪ್ಪ ಯಲಿಗಾರ ಇವರ ಮಗಳ ಮನೆಯ ಪೂಜೆ ನಿಡಗುಂದಿ ಗ್ರಾಮದಲ್ಲಿ ಇರುವ ಕಾರಣ ಅವರು ಮನೆ ಪೂಜೆಗೆ ಹೋಗಲು ತಮ್ಮ ಸಂಭಂದಿಕರಿಗೆ ಮತ್ತು ನಗರದ ಪರಿಚಯದವರನ್ನು ಕರೆದುಕೊಂಡು 407 ಟೆಂಪೋ ವಾಹನ ನಂಬರ. KA-26/5551  ನೆದ್ದರಲ್ಲಿ ಸುಮಾರು 25 ರಿಂದ 30 ಜನರು ಕುಳಿತುಕೊಂಡರು. ಚಾಲಕನು ವಾಹನವನ್ನು ಚಲಾಯಿಸಿಕೊಂಡು ಕೊಪ್ಪಳ ನಗರದ ಗದಗ-ಹೋಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಶರ್ಮಾ ಪೆಟ್ರೋಲ್ ಬಂಕ್ ಸಮೀಪ ಗದಗ ಕಡೆಗೆ ಹೋಗುತ್ತಿರುವಾಗ ಗದಗ ಕಡೆಯಿಂದ ಟಿಪ್ಪರ ನಂಬರ. KA-22/C-3957 ನೆದ್ದರ ಚಾಲಕನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದಲ್ಲಿರುವ ರೋಡ ಡಿವೈಡರ ಮೇಲೆ ಹತ್ತಿಸಿ ಪೀರ್ಯಾದಿದಾರರು ಕುಳಿತುಕೊಂಡು ಹೋರಟಿದ್ದ 407 ವಾಹನಕ್ಕೆ ಟಕ್ಕರ್ ಮಾಡಿ ಅಪಘಾತಮಾಡಿದ್ದರಿಂದ 407 ವಾಹನದ ಚಾಲಕ ಮಾಲತೇಶ ತಳವಗೇರಿ ಇತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 24 ರಿಂದ 26 ಜನರಿಗೆ ಸಾದಾ ಮತ್ತು ಗಂಬೀರ ಸ್ವರೂಪದ ಗಾಯಗಳು ಆಗಿರುತ್ತವೆ. ಗಂಬೀರವಾಗಿ ಗಾಯಗೊಂಡ ಮೀನಾಕ್ಷಿ ಗಂಡ ಮಂಜುನಾಥ ಅಬ್ಬಿಗೇರಿ ವಯ. 45 ವರ್ಷ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿರುತ್ತಾರೆ ಅಪಘಾತಮಾಡಿದ ಟಿಪ್ಪರ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2017 ಕಲಂ. 279, 337, 338, 304 (ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008