Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, September 30, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 212/2017 ಕಲಂ: 279, 338  .ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿ:29-09-2017 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಪ್ರಶಾಂತ ಹೈದ್ರಾಬಾದ. ಸಾ: ಅಲ್ಲಾನಗರ, ತಾ: ಕೊಪ್ಪಳ.  ಕಿನ್ನಾಳದಲ್ಲಿ ತಮ್ಮ ವೈಯಕ್ತಿಕ ಕೆಲಸ ಮುಗಿಸಿಕೊಂಡು ವಾಪಾಸ್ ಕೊಪ್ಪಳಕ್ಕೆ ಅಂತಾ ಆರೋಪಿ ನಂ: 01 ನೇದ್ದವರ ಆಟೋದಲ್ಲಿ ಕುಳಿತುಕೊಂಡು ಮಾರ್ಗದ ಚಿಲವಾಡಗಿ ದಾಟಿ ಟೈಲ್ಸ ಫ್ಯಾಕ್ಟರಿ ಸಮೀಪ ಬರುವಾಗ ಸದರಿ ಆಟೋ ಚಾಲಕ ಮತ್ತು ಎದುರುಗಡೆ ಬಂದ ಆರೋಪಿ ನಂ: 02 ಟಿ.ವಿ.ಎಸ್ ಮೋಟಾರ ಸೈಕಲ್ ನಂ:ಕೆಎ-37/ಇಸಿ-3053 ನೇದ್ದರ ಚಾಲಕ ಹೀಗೆ ಇಬ್ಬರೂ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅಪಘಾತ ಮಾಡಿದ್ದರಿಂದ, ಆಟೋದಲ್ಲಿದ್ದ ಫಿರ್ಯಾದಿದಾರರಿಗೆ ಹಾಗೂ ಆರೋಪಿ ನಂ: 02 ನೇದ್ದವರಿಗೆ ಭಾರಿಗಾಯಗಳಾಗಿದ್ದು ಇರುತ್ತದೆ. ಅಪಘಾತ ಮಾಡಿದ ಆಟೋ ಚಾಲಕನು ತನ್ನ ವಾಹನ ಸಮೇತ ಹೋಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 225/2017 ಕಲಂ. 32, 34 Karnataka Excise Act.
ದಿನಾಂಕ : 29-09-2017 ರಂದು ರಾತ್ರಿ 9-30 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ. ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ, ದಿನಾಂಕ 29-09-2017 ರಂದು ರಾತ್ರಿ 8-10  ಗಂಟೆಗೆ ಕಾರಟಗಿ ನಗರದ ಕಾರಟಗಿ-ನವಲಿ ರಸ್ತೆಯ  ಪಕ್ಕದಲ್ಲಿ ಇರುವ ವೈಟ್ ಹಾರ್ಸ್ ಡಾಬಾದಲ್ಲಿ  ಮೇಲ್ಕಂಡ ಆರೋಪಿತನು  ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು  ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಆ ಕಾಲಕ್ಕೆ ಆರೋಪಿತನು ಪೊಲೀಸ್ ರನ್ನು ನೋಡಿ ಓಡಿ ಹೋಗಿರುತ್ತಾನೆ. ಸದ್ರಿ ಆರೋಪಿತನ ಡಾಬಾದಿಂದ ಒಟ್ಟು 21 ಮದ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು ರೂ. 2595=00 ಬೆಲೆ ಬಾಳುವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ. ನಂ. 148/2017 ಕಲಂ. 143, 147 ,148, 341, 354, 355, 324, 323, 448, 404, 506 ಸಹಿತ 149  ಐ.ಪಿ.ಸಿ:.
ದಿನಾಂಕ: 29-09-2017 ರಂದು 7-00 ಗಂಟೆಗೆ ಫಿರ್ಯಾದಿ ಮಂಜುಳಾ ಮುದೋಳ ಸಾ: ಬೆಂಕಿನಗರ ಕೊಪ್ಪಳ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಅಕ್ಕನಾದ ಶಿಲ್ಪಾ ಇವಳಿಗೆ ಬೆಂಕಿನಗರದ ನಿವಾಸಿಯಾದ ಬಸವರಾಜ ವಣಗೇರಿ ಈತನ ಅಳಯನಾದ ಮಂಜುನಾಥ ಈತನು 03 ದಿನಗಳ ಹಿಂದೆ ಅಪಹರಣ ಮಾಡಿಕೊಂಡು ಹೋಗಿದ್ದಾನೆಂದು ತಿಳಿದು ಆತನ ಮೇಲೆ ದೂರು ನೀಡಲು ಅನವಟ್ಟಿಗೆ ಹೋಗಿದ್ದು, ಅದನ್ನೆ ನಮ್ಮ ಮೇಲೆ ಸಿಟ್ಟು ಮಾಡಿಕೊಂಡು ಮುಂಜಾನೆ 06-30 ಗಂಟೆಗೆ ಆರೋಪಿತರೆಲ್ಲರೂ ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ನನ್ನ ತಾಯಿಗೆ ಮನೆಯ ಹೊರಗಡೆ ಎಳೆದುಕೊಂಡು ಬಂದು ಅವಳಿಗೆ ಕಟ್ಟಿಗೆಯಿಂದ ಕೈಯಿಂದ ಹೊಡಿಬಡಿ ಮಾಡಿ ಸಾರ್ವಜನಿಕರ ಮುಂದೆ ಅವಮಾನ ಮಾಡಿದ್ದು ಅಲ್ಲದೆ ಬಿಡಿಸಲು ಹೋದ ನನಗೆ ಮತ್ತು ನನ್ನ ಅಜ್ಜಿಗೆ ಚೆಪ್ಪಲಿಯಿಂದ ಹೊಡೆದು ದುಖಾಪತ್ ಗೊಳಿಸಿದ್ದು ಅಲ್ಲದೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ  ಹಾಕಿದ್ದಾರೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ. ನಂ. 149/2017 ಕಲಂ. 341, 324, 323, 504, 506  ಸಹಿತ 34  ಐ.ಪಿ.ಸಿ ಮತ್ತು 3[1][10][11] ಎಸ್.ಸಿ/ಎಸ್.ಟಿ. ಕಾಯ್ದೆ:.

ದಿನಾಂಕ: 29-09-2017 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಫಿರ್ಯಾದಿ ವಿಜಯಶ್ರೀ ಸಾ: ವಣಗೇರಿ ಹಾಲಿ: ಬೆಂಕಿನಗರ ಕೊಪ್ಪಳ ನಮ್ಮ ದೊಡ್ಡಪ್ಪನ ಮನೆಯ ಹತ್ತಿರ ಇರುವ ಶಿಲ್ಪಾ ಇವರ ತಾಯಿ ಮತ್ತು ಅವಳ ತಂಗಿ, ಮತ್ತು ಅಜ್ಜಿ ಹಾಗೂ ಶಿಲ್ಪಾಳ ಮಾವ ಪರಶುರಾಮ ಇವರು ಇದ್ದಾಗ ನಾನು ಅವರಿಗೆ ನನ್ನ ಸಂಸಾರ ಹಾಳು ಮಾಡಿದಿರಿ ನಾನು ಏನು ಅನ್ಯಾಯ ಮಾಡಿದ್ದೆನು. ಅಂತಾ ಕೇಳಿದ್ದರಿಂದ ಶಿಲ್ಪಾಳ ತಾಯಿ ಮತ್ತು ತಂಗಿ ನನ್ನ ಮೇಲೆ ಏರಿ ಬಂದು ಬೋಸೂಡಿ ವಡ್ಡರ ಸೂಳೆಯರ ನಮಗೇನು ಗೊತ್ತು ನೀನು ಏನ ಮಾಡತೀಯಾ ಮಾಡಿಕೋ ನಿಮ್ಮ ಮನೆಯವರನ್ನು ನೋಡಿಕೊಳ್ಳುತ್ತೇನೆ, ಮಂಜುಳಾ ನನ್ನ ಬಲತೊಡೆಯನ್ನು ಕಚ್ಚಿದ್ದಾಳೆ. ಅವರ ಅಜ್ಜಿ ಮತ್ತು ತಾಯಿ ಇಬ್ಬರು ನಮ್ಮ ತಾಯಿಯನ್ನು ಗಟ್ಟಿಯಾಗಿ ಹಿಡಿದಿದ್ದು, ಪರಶುರಾಮ ಈತನು ಕುಂಡಲವನ್ನು ತೆಗೆದುಕೊಂಡು ನನ್ನ ತಾಯಿ ಮೇಲೆ ಎತ್ತಿ ಹಾಕಿದನು. ಅವರ ತಾಯಿ ಮತ್ತು ಅಜ್ಜಿ ಸೇರಿ ನನ್ನ ಬಟ್ಟೆಗಳನ್ನು ಹರಿದು ತಾಳಿ ಹರಿದರು ನಮ್ಮ ಹುಡುಗಿಗೆ ನಾವೇ ಮದುವೆ ಮಾಢಿದ್ದೀವಿ ನೀವು ಏನ್ ಮಾಡಿಕೊಳ್ಳುತ್ತೀರಿ ಅಂತಾ ಕುದಲು ಹಿಡಿದು ಬಡಿದರು. ಕಾರಣ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಮಾನ ಅಪಮಾನ ಮಾಡಿ ಗಾಯಗೊಳಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಕೆ ಕೈ ಗೊಂಡಿರುತ್ತಾರೆ.

Friday, September 29, 2017

1]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 222/2017 ಕಲಂ: 379,  .ಪಿ.ಸಿ ಮತ್ತು ಕೆ.ಎಂ.ಎಂ.ಸಿ. ರೂಲ್ಸ್ 3, 36 ಮತ್ತು 42 44 ಹಾಗೂ ಎಂ.ಎಂ.ಆರ್.ಡಿ ಕಾಯ್ದೆ 1957 ರೂಲ್ 4, 4(1), 4(a)ಸಹಿತ 21(4), 21.
ದಿನಾಂಕ 28-09-2017 ರಂದು ಬೆಳಗಿನ 10-30 ಗಂಟೆಗೆ ಟಿಪ್ಪರ್ ನಂ ಕೆಎ-51/ಎಎ-4277 ನೇದ್ದರ  ಚಾಲಕ ಮರಳನ್ನು ತನ್ನ ಟಿಪ್ಪರ್ ದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ ಸದರ್ ಟಿಪ್ಪರ್ ನ್ನು ಪಂಚರ ಸಮಕ್ಷಮದಲ್ಲಿ ಟಿಪ್ಪರ್ ಮತ್ತು ಅದರಲ್ಲಿ ಒಟ್ಟು 6,500=00 ಬೆಲೆಬಾಳವು ಮರಳನ್ನು ಶ್ರೀ ಎಂ. ಶಿವಕುಮಾರ ಜಪ್ತುಪಡಿಸಿಕೊಂಡು ಠಾಣೆಗೆ ತಂದು ಹಾಜರುಪಡಿಸಿ ಸದರಿ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ ಮೇಲಿನ ಟಿಪ್ಪರ್ ಮಾಲೀಕ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 223/2017 ಕಲಂ. ಕಲಂ: 379,  .ಪಿ.ಸಿ ಮತ್ತು ಕೆ.ಎಂ.ಎಂ.ಸಿ. ರೂಲ್ಸ್ 3, 36 ಮತ್ತು 42, 44 ಹಾಗೂ ಎಂ.ಎಂ.ಆರ್.ಡಿ ಕಾಯ್ದೆ 1957 ರೂಲ್ 4, 4(1), 4(a)ಸಹಿತ 21(4), 21.
ದಿನಾಂಕ 28-09-2017 ರಂದು ಸಂಜೆ 5-00 ಗಂಟೆಗೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ್, ಮೂಲ ವರದಿ ಹಾಗೂ ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 28-09-2017 ರಂದು ಸಂಜೆ 4-00 ಗಂಟೆಗೆ ಟಿಪ್ಪರ್ ನಂ GA-09/U-2911  ನೇದ್ದರ  ಚಾಲಕ ಮರಳನ್ನು ತನ್ನ ಟಿಪ್ಪರ್ ದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ ಸದರ್ ಟಿಪ್ಪರ್ ನ್ನು ಪಂಚರ ಸಮಕ್ಷಮದಲ್ಲಿ ಟಿಪ್ಪರ್ ಮತ್ತು ಅದರಲ್ಲಿ ಒಟ್ಟು 6,500=00 ಬೆಲೆ ಬಾಳವು ಮರಳನ್ನು ಜಪ್ತುಪಡಿಸಿಕೊಂಡು ಠಾಣೆಗೆ ತಂದು ಹಾಜರುಪಡಿಸಿ ಸದರಿ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ ಮೇಲಿನ ಟಿಪ್ಪರ್ ಮಾಲೀಕ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
3] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ. ನಂ. 125/2017 ಕಲಂ. 205, 419, 420, 465, 468, 504, 506 ಸಹಿತ 149 ಐ.ಪಿ.ಸಿ:.

ಸನ್-2007 ರಲ್ಲಿ ಫಿರ್ಯಾದಿದಾರಳ ಗಂಡ ಮೃತ ಪಟ್ಟಿದ್ದು, ಆತನು ಮೃತ ಪಟ್ಟ ನಂತರ ಆತನ ಹೆಸರಿನಲ್ಲಿರುವ ಲಿಂಗನಬಂಡಿ ಸೀಮಾದ ಜಮೀನು ಸರ್ವೇ ನಂ: 84/ಆ ನೇದ್ದನ್ನು ತಾನೇ ಸಾಗುವಳಿ ಮಾಡಿಕೊಂಡು ವಾಸವಾಗಿರುತ್ತಾಳೆ. ಸನ್-2010-11 ನೇ ಸಾಲಿನಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿದಾರಳ ಹೆಸರಿನಲ್ಲಿರುವ ಜಮೀನನ್ನು ಫಿರ್ಯಾದಿದಾರನ ಗಂಡನ ಹೆಸರನ್ನು ಖೊಟ್ಟಿ ಸಹಿ ಮಾಡಿ, ನಕಲಿ ಪೋಟೋ ತೆಗೆದು, ಯಲಬುರ್ಗಾ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಫಿರ್ಯಾದಿದಾರರ ಹೆಸರಿನಲ್ಲಿರುವ ಜಮೀನುನ್ನು ಖರೀದಿ ನೊಂದಣಿ ಮಾಡಿಕೊಂಡು, ಫಿರ್ಯಾದಿದಾರರಿಗೆ ಮೋಸ ವಂಚನೆ, ಆಸ್ತಿ ಕಬಳಿಸುವ ಹುನ್ನಾರ ಮಾಡಿರುತ್ತಾರೆ. ಮತ್ತು ಮಾರಾಟ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಲಿಂಗನಬಂಡಿ ಗ್ರಾಮದಲ್ಲಿ ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, September 28, 2017

1]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 141/2017 ಕಲಂ: 279, 337, 338 .ಪಿ.ಸಿ..
ದಿನಾಂಕ: 27-09-2017 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಫಿರ್ಯಾದಿ ಲಕ್ಷ್ಮಣ ತಂದೆ ಶಂಕರ ಕುಲಕರ್ಣಿ ವಯಾ: 70 ವರ್ಷ ಜಾ: ಬ್ರಾಹ್ಮಣ : ಒಕ್ಕಲುತನ ಸಾ: ಕಾಕನೂರ ತಾ: ಬದಾಮಿ ಜಿ: ಬಾಗಲಕೋಟ ಹಾಗೂ ಅವರ ಹೆಂಡತಿ ಲತಾ ಮತ್ತು ಅವರ ಸಂಬಂದಿಕರಾದ ಶ್ರೀದೇವಿ ರವರು ಹನಮಸಾಗರದ ಭಿನವ ತಿರುಪತಿ ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಟೋ ನಂ: ಕೆ.-37 -7390  ನೇದ್ದರಲ್ಲಿ ಹನಮಸಾಗರ ಕಡೆಗೆ ಬರುವಾಗ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಹಾಗೂ ಅಲಕ್ಷತನಿಂದ ನಡೆಸಿಕೊಂಡು ರಸ್ತೆಯ ಸ್ಥಿತಿಗತಿಯನ್ನು ಲೆಕ್ಕಸದೆ ವೆಂಕಟೇಶ್ವರ ದೇವಸ್ಥಾನದ ಕ್ರಾಸ್ ಹತ್ತಿರ ಆಟೋವನ್ನು ತಿರಿವಿದಾಗ ಹನಮಸಾಗರ ಕಡೆಯಿಂದ ಹುಲಗೇರಿ ಕಡೆಗೆ ಹೊರಟ ಮೋಟಾರ ಸೈಕಲ ನಂ: ಕೆ.-29 ಯುವ್-7880 ನೇದ್ದರ ಸವಾರನಿಗೆ ಹಾಯಿಸಿ ಅಪಘಾತ ಪಡಿಸಿ ಆಟೋವನ್ನು ರಸ್ಥೆಯ ಕೆಳಗೆ ಕೆಡವಿ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಸಾದಾ ಹಾಗೂ ಬಾರಿ ಸ್ವರೂಪದ ಗಾಯಗಳಾಗಿದ್ದು ಹಾಗೂ ಅವರ ಮನೆಯವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹಾಗೂ ಮೋಟಾರ ಸೈಕಲ ಸವಾರ ಮಂಜುನಾಥ ರವರಿಗೆ ಬಾರಿ ಹಾಗೂ ಸಾದ ಸ್ವರೂಪದ ಗಾಯಗಳಾಗಿದ್ದು ಈಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 221/2017 ಕಲಂ. 78 (111) Karnataka Police ACT.
ದಿನಾಂಕ:-27-09-2017 ರಂದು ಸಂಜೆ 6-45 ಗಂಟೆಗೆ ಕಾರಟಗಿಯ ನಜೀರ ಕಾಲೋನಿಯ ಶರಣಪ್ಪನ ಹೊಟೇಲ್ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ಶ್ರೀ ಎಂ.ಶಿವಕುಮಾರ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ. 1] ರಸೂಲಸಾಬ ತಂದೆ ಅಬ್ದುಲ್ ಸಾಬ ಮುಲ್ಲಾ, ವಯಾ 50 ವರ್ಷ ಜಾತಿ ಮುಸ್ಲಿಂ ಉ: ಚಾಲಕ ಸಾ: ನಜೀರ ಕಾಲೋನಿ ಕಾರಟಗಿ 2] ಶರಣಪ್ಪ ತಂದೆ ಬಸಪ್ಪ ಬಂಡಿ, ವಯಾ 35 ವರ್ಷ ಜಾತಿ ಕುರುಬರು ಉ: ಒಕ್ಕಲುತನ ಸಾ: ನಜೀರ ಕಾಲೋನಿ ಕಾರಟಗಿ ಇವರನ್ನು ಹಿಡಿದಿದ್ದು ಸಿಕ್ಕಿಬಿದ್ದವನ ಕಡೆಯಿಂದ 2640=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಸದ್ರಿ ಸಿಕ್ಕ ಆರೋಪಿತರು ಮಟ್ಕಾ ಪಟ್ಟಿ ಮತ್ತು ಹಣ ಮಟ್ಕಾ ಆರೋಪಿ 3] ಶರಣಪ್ಪ @ ಓಂಪುರಿ ಶರಣಪ್ಪ ಸಾ: ಬುದಗುಂಪಾ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಕಾರಟಗಿ ಪೊಲೀಸ್  ಠಾಣೆ  ಯು.ಡಿ.ಆರ್. ನಂ. 26/2017 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ 27-09-2017 ರಂದು ಮುಂಜಾನೆ 10-30 ಗಂಟೆಗೆ ಫಿರ್ಯಾಧಿದಾರ ಶ್ರೀ ಸಂಗಪ್ಪ ತಂದೆ ಫಕೀರಪ್ಪ ಬಿಸರಳ್ಳಿ ವಯ 57 ವರ್ಷ ಜಾತಿ ಗಾಣಿಗ ಉ. ಒಕ್ಕಲುತನ ಸಾ. ಟಣಕನಕಲ್ ತಾ. ಕೊಪ್ಪಳ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ,  ತನಗೆ ಒಟ್ಟು 5 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳಿದ್ದು ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗಳಾದ ಶ್ರೀಮತಿ ಶಶಿಕಲಾ ಗಂಡ ಶರಣಪ್ಪ ಪೊಲೀಸ್ ಪಾಟೀಲ್ ವಯ 24 ವರ್ಷ ಈಕೆಯನ್ನು ಈಗ್ಗೆ 3 ವರ್ಷದ ಹಿಂದೆ ಸೋಮನಾಳ ಗ್ರಾಮದ ಶರಣಪ್ಪ ತಂದೆ ಬಸಪ್ಪ ಪೊಲೀಸ್ ಪಾಟೀಲ್ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಸದರಿಯವರಿಗೆ ಶ್ವೇ ಅಂತಾ 2 ವರ್ಷದ ಒಬ್ಬಳೇ ಮಗಳಿರುತ್ತಾಳೆ. ನನ್ನ ಮಗಳು ಶಶಿಕಲಾ ಈಕೆಗೆ ಈಗ್ಗೆ 1 ವರ್ಷದಿಂದ ಮುಟ್ಟಿನ ಸಮಯದಲ್ಲಿ ಆಗಾಗ ಹೊಟ್ಟೆನೋವು ಬರುತ್ತಿದ್ದು ಈ ಬಗ್ಗೆ ನಾವು ಮತ್ತು ನನ್ನ ಮಗಳ ಗಂಡನ ಮನೆಯವರು ಕೂಡಿಕೊಂಡು ಆಕೆಯನ್ನು ಖಾಸಗಿಯಾಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿದಾಗ್ಯೂ ಗುಣಮುಖಳಾಗದೇ ಇದ್ದು ಇದರಿಂದ ಮಾನಸಿಕ ಮಾಡಿಕೊಂಡಿದ್ದು ಇದೇ ಭಾದೇಯಿಂದ ದಿನಾಂಕ 25-09-2017 ರಂದು ಬೆಳಗಿನ 6-00 ಗಂಟೆಯಿಂದ ದಿನಾಂಕ 27-09-2017 ರ ಬೆಳಗಿನ 6-00 ಗಂಟೆ ಅವಧಿಯಲ್ಲಿ ಮುಟ್ಟಿನ ಹೊಟ್ಟೆ ನೋವಿನ ಸಂಬಂಧ ಮಾನಸಿಕ ಮಾಡಿಕೊಂಡು ತನ್ನ 2 ವರ್ಷದ ಮಗಳು ಶ್ವೇತಾಳೊಂದಿಗೆ ತುಂಗಭದ್ರ  ಎಡದಂಡೆ  ಕಾಲುವೆಗೆ ಹಾರಿ ಮೃತಪಟ್ಟದ್ದು ಸದರಿ ನನ್ನ ಮಗಳ ಮರಣದಲ್ಲಿ ನಮ್ಮದು ಯಾವುದೇ ತರಹದ ಅನುಮಾನ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, September 27, 2017

1]  ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ ನಂ. 147/2017 ಕಲಂ. 380 ಐ.ಪಿ.ಸಿ..
ದಿನಾಂಕ: 25-09-2017 ರಂದು ಮದ್ಯಾಹ್ನ 01-50 ಗಂಟೆಗೆ ಫಿರ್ಯಾದಿದಾರರಾದ ಉಮೇಶ ತಂದೆ ಗೋವಿಂದರಾವ್ ಕುರಡೇಕರ್ ಸಾ: ಬ್ಯಾಳಿ ಓಣಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ, ಫಿರ್ಯಾದಿದಾರರು ಹಾಗೂ ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯವರಿಂದ ಪ್ರತಿ ವರ್ಷದಂತೆ ಈ ವರ್ಷವು ನಗರದ ಗಡಿಯಾರ ಕಂಭದ ಹತ್ತಿರ ಶ್ರೀ ಪಂಡರಾಪುರ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಿದ ಗುಡಿಯಲ್ಲಿ ದುರ್ಗಾದೇವಿಯ ಮೂರ್ತಿಯ ಪ್ರತಿಷ್ಠಪನೆ ಮಾಡಿದ್ದು. ಸದರಿ ಮುರ್ತಿಯ ಮುಂದೆ ಒಂದು ಗಾಜಿನ ಕಾಣಿಕೆ ಪೆಟ್ಟಿಯನ್ನು ಇಟ್ಟಿದ್ದರು. ಸದರಿ ಕಾಣಿಕೆ ಪೆಟ್ಟಿಗೆಯನ್ನು ದಿನಾಂಕ: 25-09-2017 ರಂದು ಮದ್ಯರಾತ್ರಿ 1-27 ರಿಂದ 1-50 ಗಂಟೆಯ ಅವಧಿಯಲ್ಲಿ ಅಂದಾಜು 23-24 ವಯಸ್ಸಿನ ಯಾರೋ ಒಬ್ಬ ಗುಡಿಯೋಳಗೆ ಬಂದು ಗುಡಿಯಲ್ಲಿದ್ದ ರೂ 20,000=00 ಗಳು ಇರುವ ದೆವರ ಕಾಣಿಕೆ ಪೆಟ್ಟಿಗೆಯ್ನನು ಕಳ್ಳತನ ಮಾಡಿಕೊಂಡು ಹೋಗಿದ್ದ, ನಂತರ ಸದರಿ ಖಾಲಿ ಕಾಣಿಕೆ ಪೆಟ್ಟಿಗೆಯನ್ನು ಅಲ್ಲೆ ಇರುವ ದುರ್ಗಮ್ಮ ಗುಡಿಯ ಹತ್ತಿರದ ರಾಜ ಕಾಲುವೆಯ ಹತ್ತಿರ ಇಟ್ಟು ಹೋಗಿರುತ್ಥಾನೆ ಅದರಲ್ಲಿ ಯಾವುದೇ ರೀತಿಯ ಹಣ ಇರಲಿಲ್ಲಾ ಕಾರಣ ಮಾನ್ಯರವರು ಕಾಣಿಕೆ ಪೆಟ್ಟಿಗೆಯಲ್ಲಿನ ಹಣವನ್ನು ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 131/2017 ಕಲಂ. 379 ಐಪಿಸಿ  & 4(1) 4(1A) R/W  21, 22  MMDR Act -1957.
ದಿನಾಂಕ: 26-09-2017 ರಂದು ಬೆಳಿಗ್ಗೆ 08-45 ಗಂಟೆಗೆ ಚಿಕ್ಕಬೀಡನಾಳ ಸೀಮಾದಲ್ಲಿ ಬರುವ ಸಾರ್ವಜನಿಕ ಹಳ್ಳದಲ್ಲಿಯ ಬ್ರೀಡ್ಜ್ (ಸೇತುವೆ) ಮೇಲೆ ಆರೋಪಿ ಶಂಕರಗೌಡ ತಂದೆ ನಿಂಗನಗೌಡ ಪೊಲೀಸ್ ಪಾಟೀಲ ವ: 37 ವರ್ಷ ಜಾ: ವಾಲ್ಮೀಕಿ ಉ: ಟ್ರ್ಯಾಕ್ಟರ್ ಚಾಲಕ & ಮಾಲೀಕ ಸಾ: ಚಿಕ್ಕಬೀಡನಾಳ ತಾ: ಯಲಬುರ್ಗಾ ಇತನು ತನ್ನ ನೊಂದಣಿ ಸಂಖ್ಯೆ ಇರದ ಟ್ರ್ಯಾಕ್ಟರ್ ಇಂಜೀನ್ ನಂ. S325 1F35308 ನೇದ್ದಕ್ಕೆ ಜೋಡಿಸಿರುವ ನೊಂದಣಿ ಸಂಖ್ಯೆ ಇರದ ಟ್ರೇಲರ್ ಚೆಸ್ಸಿ ನಂ. 65 ನೇದ್ದರಲ್ಲಿ ಉಸುಕು(ಮರಳು)ನ್ನು ಸಾಗಾಣಿಕೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಕಳ್ಳತನದಿಂದ ಉಸುಕು(ಮರಳು)ನ್ನು ಲೋಡ ಮಾಡುತಿದ್ದಾಗ ಭಾತ್ಮಿ ಮೇರೆಗೆ ಗವಿಯಪ್ಪ ಎ.ಎಸ್.ಐ. ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಸುಮಾರು 1,000/-ರೂ. ಬೆಲೆಬಾಳುವ ಉಸುಕು(ಮರಳು) ತುಂಬಿದ ಟ್ರ್ಯಾಕ್ಟರ್ & ಅದರ ಚಾಲಕ ಹಾಗೂ ಮಾಲೀಕನಾದ ಶಂಕರಗೌಡನಿಗೆ ಶ್ರೀ ಗವಿಯಪ್ಪ ಎ.ಎಸ್.ಐ ಕುಕನೂರ ಠಾಣೆರವರು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಜಪ್ತಿ ಪಂಚನಾಮೆ ಯೊಂದಿಗೆ ತಮ್ಮ ದೂರು ನೀಡಿದ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 132/2017 ಕಲಂ. 109, 151 ಸಿ.ಆರ್.ಪಿ.ಸಿ.
ದಿನಾಂಕ: 26-09-2017  ರಂದು ಎಎಸ್‍ಐ (ಜಿ) ಹಾಗೂ ಪಿಸಿ-428 ರವರು ಹಳ್ಳಿ ಪೆಟ್ರೊಲಿಂಗ ಕುರಿತು  ತಳಕಲ್‍ ಗ್ರಾಮದ ಕಡೆಗೆ ಹೋದಾಗ ಮದ್ಯಾಹ್ನ 1:30 ಗಂಟೆ ಸುಮಾರಿಗೆ ತಳಕಲ್ – ತಳಬಾಳ ಕ್ರಾಸ್ ಹತ್ತಿರ  ತಳಕಲ್ ರಸ್ತೆಗೆ ಮೂರು ಜನ  ಆರೋಪಿತರು ಆ ಕಡೆ ಈ ಕಡೆ ಹೋಗಿ ಬರುವ ಜನರನ್ನು ಕಾಯುತ್ತಾ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು. ಪೊಲೀಸ್‍ರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸದರಿಯವರಿಗೆ ಬೆನ್ನತ್ತಿ ಹಿಡಿದು  ಹೆಸರು ವಿಳಾಸ ವಿಚಾರಿಸಲು ಮೊದಲಿಗೆ ತಮ್ಮ ಹೆಸರು ವಿಳಾಸವನ್ನು ಬೇರೆ ಬೇರೆಯಾಗಿ ಹೇಳಿದ್ದು ಪುನಃ ಪುನಃ ಕುಲಕುಂಷವಾಗಿ ವಿಚಾರಿಸಿದಾಗ ತಮ್ಮ ನಿಜವಾದ ಹೆಸರು ವಿಳಾಸ ಹೇಳಿದ್ದು ಇರುತ್ತದೆ,ಸದರಿಯವರಿಗೆ ಅಲ್ಲಿದ್ದ ಬಗ್ಗೆ ವಿಚಾರಿಸಲು ಸದರಿಯವರು ತಮ್ಮ ಇರುವಿಕೆಯ ಬಗ್ಗೆ ಸಂಮಂಜಸವಾದ ತ್ತರ ನೀಡದೆ ಇದ್ದುದರಿಂದ  ಸದರಿಯವರಿಗೆ ಹಾಗೇ ಬಿಟ್ಟಲ್ಲಿ ಅವರು ಯಾವುದಾದರು ಸ್ವತ್ತಿನ ಅಪರಾಧ ಮಾಡುವ ಬಲವಾದ ಸಂಶಯ ಬಂದಿದ್ದರಿಂದ ಸದರಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
4]  ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ. 124/2017 ಕಲಂ: 317 ಐಪಿಸಿ.
ದಿನಾಂಕ: 26-09-2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಗಿಡ್ಡಪ್ಪ ತಂದೆ ಗಂಗಪ್ಪ ಯಾದವ್. ವಯ: 32 ವರ್ಷ. ಜಾತಿ: ಗೊಲ್ಲರ್. ಸಾ: ರತ್ನಪುರಹಟ್ಟಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಅವರ ಅಣ್ಣನ ಮಗ ಮಲ್ಲೇಶ ತಂದೆ ಪಾಮಪ್ಪ ಹಾಗೂ ಇನ್ನಿತರೆ 20 ಕ್ಕೂ ಹೆಚ್ಚಿನ ಮಕ್ಕಳು ಅಲೆಮಾರಿ ವಸತಿ ಶಾಲೆ ತಾವರಗೇರಾದಲ್ಲಿ ಮದ್ಯಾಹ್ನ ಊಟದ ನಂತರ ತೀವ್ರ ಹೊಟ್ಟೆನೋವು ಮತ್ತು ಎದೆ ಚುಚ್ಚುದಿದ್ದು ನಂತರ ಅವರನ್ನು ಕನ್ನಡ ಸೇನೆ ಕಾರ್ಯಕರ್ತರು ಕರೆದುಕೊಂಡು ಒಂದು ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ. ಕಾರಣ ಆಹಾರ ಕಳಪೆಯಿಂದ ಮಕ್ಕಳ ಜೀವಕ್ಕೆ ತೊಂದರೆ ಬರಲು ಕಾರಣರಾದ ಅಲೆಮಾರಿ ವಸತಿ ನಿಲಯ ತಾವರಗೇರಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಅಡುಗೆದಾರರು ಮತ್ತು ಸಹಾಯಕ ಅಡುಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
5]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 140/2017 ಕಲಂ: 32, 34  ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ: 26-09-2017 ರಂದು ಸಾಯಾಂಕಾಲ 16-10 ಗಂಟೆಗೆ ಕುಂಬಳಾವತಿ ಗ್ರಾಮದ ಅಗಸಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಳಕಪ್ಪ ತಂದೆ ಈರಪ್ಪ ಗುಡಿ, ಹಾಗೂ ಲಕ್ಷ್ಮಣ ತಂದೆ ಹನಮಪ್ಪ ಹನಮಸಾಗರ ಇಬ್ಬರೂ ಸಾ: ಕುಂಬಳಾವತಿ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ರವರು ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-452, 28, 168  ರವರೊಂದಿಗೆ ಠಾಣೆಯಿಂದ ಹೊರಟು ಯರಗೇರಿ ಕ್ರಾಸದಿಂದ ಎಡಕ್ಕೆ ತಿರುಗಿ, ಮದ್ನಾಳ, ಯರಗೇರಿ ಕುಂಬಳಾವತಿ ಗ್ರಾಮವನ್ನು ಸಾಯಾಂಕಾಲ 16-40 ಗಂಟೆಗೆ ತಲುಪಿ ಸಾಯಾಂಕಾಲ 16-45 ಗಂಟೆಗೆ ದಾಳಿಮಾಡಿದಾಗ ಕಳಕಪ್ಪ ತಂದೆ ಈರಪ್ಪ ಗುಡಿ ಹಾಗೂ ಲಕ್ಷ್ಮಣ ತಂದೆ ಹನಮಪ್ಪ ಹನಮಸಾಗರ ಇಬ್ಬರೂ ಸಾ: ಕುಂಬಳಾವತಿ ರವರು ಸಿಕ್ಕಿಬಿದಿದ್ದು ಕಳಕಪ್ಪನ ಹತ್ತಿರ 1] 180 .ಎಂ.ಎಲ್.ಅಳತೆಯ 27 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1519-29 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 750-00 ರೂಪಾಯಿ ಸಿಕ್ಕಿದ್ದು, ಲಕ್ಷ್ಮಣನ ಹತ್ತಿರ 180 ಎಂ.ಎಲ್. ಅಳತೆಯ 29 ಟೆಟ್ರಾ ಪಾಕೇಟಗಳು OLD TAVAREN ಪ್ರತಿಯೊಂದಕ್ಕೆ ಎಂ.ಆರ್.ಪಿ. 56-27 ಅಂತಾ ಬೆಲೆ ಇದ್ದು, ಇವುಗಳ ಒಟ್ಟು ಕಿಮ್ಮತ್ 1631-83 ರೂಪಾಯಿಗಳು ಆಗುತ್ತಿದ್ದು, ಹಾಗೂ ನಗದು ಹಣ 890-00 ರೂಪಾಯಿ ಸಿಕ್ಕಿದ್ದು, ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6]  ಬೇವೂರು ಪೊಲೀಸ್  ಠಾಣೆ  ಗುನ್ನೆ ನಂ. 123/2017 ಕಲಂ: 32, 34  ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ: 26.09.2017 ರಂದು ಸಾಯಂಕಾಲ 4:45 ಗಂಟೆಯ ಸುಮಾರಿಗೆ ಆರೋಪಿ ಅಬ್ದುಲ್ ತಂದೆ ಚಂದುಸಾಬ ಡೇರೆದಾರ ವಯ: 20 ವರ್ಷ ಜಾತಿ: ಮುಸ್ಲಿಂ ಉ: ಚಿಕನ್ಶಾಪ್ ವ್ಯಾಪಾರಿ ಸಾ: ಕುದರಿಮೋತಿ ಇತನು ಕುದರಿಮೋತಿ ಗ್ರಾಮದ ಹನಮಂತಪ್ಪ ರ್ಯಾವಣಕಿ ಇವರ ಮನೆಯ ಹತ್ತಿರ ಮಂಗಳೂರು ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಯಾವದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಬೇವೂರ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ ಆರೋಪಿತನು ಸಿಕ್ಕಿಬಿದ್ದಿದ್ದು ಆರೋಪಿತನಿಂದ 90 ಎಂ.ಎಲ್ ಅಳತೆಯುಳ್ಳ ‘’HAYWARDS CHEERS WHISKYಎಂಬ ಲೇಬಲುಳ್ಳ ಒಟ್ಟು  ಮಧ್ಯದ ಟೇಟ್ರಾ ಪಾಕೇಟಗಳು ರೂಪಾಯಿ 843=9 ರೂಪಾಯಿ ಕಿಮ್ಮತ್ತಿನ ಮಧ್ಯವನ್ನು ಹಾಗೂ ಮಧ್ಯ ಮಾರಾಟದ ನಗದು ಹಣ 110=00 ರೂಪಾಯಿಗಳನ್ನು ಜಪ್ತ ಮಾಡಿಕೊಂಡಿದ್ದು, ಸದರಿಯವುಗಳನ್ನು ವೈಭವ ವೈನಶಾಪದಿಂದ ತೆಗೆದುಕೊಂಡು ಬಂದಿರುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ವರದಿ ಸಲ್ಲಿಸಿದ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

 
Will Smith Visitors
Since 01/02/2008