Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, September 27, 2017

1]  ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ ನಂ. 147/2017 ಕಲಂ. 380 ಐ.ಪಿ.ಸಿ..
ದಿನಾಂಕ: 25-09-2017 ರಂದು ಮದ್ಯಾಹ್ನ 01-50 ಗಂಟೆಗೆ ಫಿರ್ಯಾದಿದಾರರಾದ ಉಮೇಶ ತಂದೆ ಗೋವಿಂದರಾವ್ ಕುರಡೇಕರ್ ಸಾ: ಬ್ಯಾಳಿ ಓಣಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ, ಫಿರ್ಯಾದಿದಾರರು ಹಾಗೂ ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯವರಿಂದ ಪ್ರತಿ ವರ್ಷದಂತೆ ಈ ವರ್ಷವು ನಗರದ ಗಡಿಯಾರ ಕಂಭದ ಹತ್ತಿರ ಶ್ರೀ ಪಂಡರಾಪುರ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಿದ ಗುಡಿಯಲ್ಲಿ ದುರ್ಗಾದೇವಿಯ ಮೂರ್ತಿಯ ಪ್ರತಿಷ್ಠಪನೆ ಮಾಡಿದ್ದು. ಸದರಿ ಮುರ್ತಿಯ ಮುಂದೆ ಒಂದು ಗಾಜಿನ ಕಾಣಿಕೆ ಪೆಟ್ಟಿಯನ್ನು ಇಟ್ಟಿದ್ದರು. ಸದರಿ ಕಾಣಿಕೆ ಪೆಟ್ಟಿಗೆಯನ್ನು ದಿನಾಂಕ: 25-09-2017 ರಂದು ಮದ್ಯರಾತ್ರಿ 1-27 ರಿಂದ 1-50 ಗಂಟೆಯ ಅವಧಿಯಲ್ಲಿ ಅಂದಾಜು 23-24 ವಯಸ್ಸಿನ ಯಾರೋ ಒಬ್ಬ ಗುಡಿಯೋಳಗೆ ಬಂದು ಗುಡಿಯಲ್ಲಿದ್ದ ರೂ 20,000=00 ಗಳು ಇರುವ ದೆವರ ಕಾಣಿಕೆ ಪೆಟ್ಟಿಗೆಯ್ನನು ಕಳ್ಳತನ ಮಾಡಿಕೊಂಡು ಹೋಗಿದ್ದ, ನಂತರ ಸದರಿ ಖಾಲಿ ಕಾಣಿಕೆ ಪೆಟ್ಟಿಗೆಯನ್ನು ಅಲ್ಲೆ ಇರುವ ದುರ್ಗಮ್ಮ ಗುಡಿಯ ಹತ್ತಿರದ ರಾಜ ಕಾಲುವೆಯ ಹತ್ತಿರ ಇಟ್ಟು ಹೋಗಿರುತ್ಥಾನೆ ಅದರಲ್ಲಿ ಯಾವುದೇ ರೀತಿಯ ಹಣ ಇರಲಿಲ್ಲಾ ಕಾರಣ ಮಾನ್ಯರವರು ಕಾಣಿಕೆ ಪೆಟ್ಟಿಗೆಯಲ್ಲಿನ ಹಣವನ್ನು ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 131/2017 ಕಲಂ. 379 ಐಪಿಸಿ  & 4(1) 4(1A) R/W  21, 22  MMDR Act -1957.
ದಿನಾಂಕ: 26-09-2017 ರಂದು ಬೆಳಿಗ್ಗೆ 08-45 ಗಂಟೆಗೆ ಚಿಕ್ಕಬೀಡನಾಳ ಸೀಮಾದಲ್ಲಿ ಬರುವ ಸಾರ್ವಜನಿಕ ಹಳ್ಳದಲ್ಲಿಯ ಬ್ರೀಡ್ಜ್ (ಸೇತುವೆ) ಮೇಲೆ ಆರೋಪಿ ಶಂಕರಗೌಡ ತಂದೆ ನಿಂಗನಗೌಡ ಪೊಲೀಸ್ ಪಾಟೀಲ ವ: 37 ವರ್ಷ ಜಾ: ವಾಲ್ಮೀಕಿ ಉ: ಟ್ರ್ಯಾಕ್ಟರ್ ಚಾಲಕ & ಮಾಲೀಕ ಸಾ: ಚಿಕ್ಕಬೀಡನಾಳ ತಾ: ಯಲಬುರ್ಗಾ ಇತನು ತನ್ನ ನೊಂದಣಿ ಸಂಖ್ಯೆ ಇರದ ಟ್ರ್ಯಾಕ್ಟರ್ ಇಂಜೀನ್ ನಂ. S325 1F35308 ನೇದ್ದಕ್ಕೆ ಜೋಡಿಸಿರುವ ನೊಂದಣಿ ಸಂಖ್ಯೆ ಇರದ ಟ್ರೇಲರ್ ಚೆಸ್ಸಿ ನಂ. 65 ನೇದ್ದರಲ್ಲಿ ಉಸುಕು(ಮರಳು)ನ್ನು ಸಾಗಾಣಿಕೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಕಳ್ಳತನದಿಂದ ಉಸುಕು(ಮರಳು)ನ್ನು ಲೋಡ ಮಾಡುತಿದ್ದಾಗ ಭಾತ್ಮಿ ಮೇರೆಗೆ ಗವಿಯಪ್ಪ ಎ.ಎಸ್.ಐ. ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಸುಮಾರು 1,000/-ರೂ. ಬೆಲೆಬಾಳುವ ಉಸುಕು(ಮರಳು) ತುಂಬಿದ ಟ್ರ್ಯಾಕ್ಟರ್ & ಅದರ ಚಾಲಕ ಹಾಗೂ ಮಾಲೀಕನಾದ ಶಂಕರಗೌಡನಿಗೆ ಶ್ರೀ ಗವಿಯಪ್ಪ ಎ.ಎಸ್.ಐ ಕುಕನೂರ ಠಾಣೆರವರು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಜಪ್ತಿ ಪಂಚನಾಮೆ ಯೊಂದಿಗೆ ತಮ್ಮ ದೂರು ನೀಡಿದ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 132/2017 ಕಲಂ. 109, 151 ಸಿ.ಆರ್.ಪಿ.ಸಿ.
ದಿನಾಂಕ: 26-09-2017  ರಂದು ಎಎಸ್‍ಐ (ಜಿ) ಹಾಗೂ ಪಿಸಿ-428 ರವರು ಹಳ್ಳಿ ಪೆಟ್ರೊಲಿಂಗ ಕುರಿತು  ತಳಕಲ್‍ ಗ್ರಾಮದ ಕಡೆಗೆ ಹೋದಾಗ ಮದ್ಯಾಹ್ನ 1:30 ಗಂಟೆ ಸುಮಾರಿಗೆ ತಳಕಲ್ – ತಳಬಾಳ ಕ್ರಾಸ್ ಹತ್ತಿರ  ತಳಕಲ್ ರಸ್ತೆಗೆ ಮೂರು ಜನ  ಆರೋಪಿತರು ಆ ಕಡೆ ಈ ಕಡೆ ಹೋಗಿ ಬರುವ ಜನರನ್ನು ಕಾಯುತ್ತಾ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು. ಪೊಲೀಸ್‍ರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸದರಿಯವರಿಗೆ ಬೆನ್ನತ್ತಿ ಹಿಡಿದು  ಹೆಸರು ವಿಳಾಸ ವಿಚಾರಿಸಲು ಮೊದಲಿಗೆ ತಮ್ಮ ಹೆಸರು ವಿಳಾಸವನ್ನು ಬೇರೆ ಬೇರೆಯಾಗಿ ಹೇಳಿದ್ದು ಪುನಃ ಪುನಃ ಕುಲಕುಂಷವಾಗಿ ವಿಚಾರಿಸಿದಾಗ ತಮ್ಮ ನಿಜವಾದ ಹೆಸರು ವಿಳಾಸ ಹೇಳಿದ್ದು ಇರುತ್ತದೆ,ಸದರಿಯವರಿಗೆ ಅಲ್ಲಿದ್ದ ಬಗ್ಗೆ ವಿಚಾರಿಸಲು ಸದರಿಯವರು ತಮ್ಮ ಇರುವಿಕೆಯ ಬಗ್ಗೆ ಸಂಮಂಜಸವಾದ ತ್ತರ ನೀಡದೆ ಇದ್ದುದರಿಂದ  ಸದರಿಯವರಿಗೆ ಹಾಗೇ ಬಿಟ್ಟಲ್ಲಿ ಅವರು ಯಾವುದಾದರು ಸ್ವತ್ತಿನ ಅಪರಾಧ ಮಾಡುವ ಬಲವಾದ ಸಂಶಯ ಬಂದಿದ್ದರಿಂದ ಸದರಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
4]  ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ. 124/2017 ಕಲಂ: 317 ಐಪಿಸಿ.
ದಿನಾಂಕ: 26-09-2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಗಿಡ್ಡಪ್ಪ ತಂದೆ ಗಂಗಪ್ಪ ಯಾದವ್. ವಯ: 32 ವರ್ಷ. ಜಾತಿ: ಗೊಲ್ಲರ್. ಸಾ: ರತ್ನಪುರಹಟ್ಟಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಅವರ ಅಣ್ಣನ ಮಗ ಮಲ್ಲೇಶ ತಂದೆ ಪಾಮಪ್ಪ ಹಾಗೂ ಇನ್ನಿತರೆ 20 ಕ್ಕೂ ಹೆಚ್ಚಿನ ಮಕ್ಕಳು ಅಲೆಮಾರಿ ವಸತಿ ಶಾಲೆ ತಾವರಗೇರಾದಲ್ಲಿ ಮದ್ಯಾಹ್ನ ಊಟದ ನಂತರ ತೀವ್ರ ಹೊಟ್ಟೆನೋವು ಮತ್ತು ಎದೆ ಚುಚ್ಚುದಿದ್ದು ನಂತರ ಅವರನ್ನು ಕನ್ನಡ ಸೇನೆ ಕಾರ್ಯಕರ್ತರು ಕರೆದುಕೊಂಡು ಒಂದು ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ. ಕಾರಣ ಆಹಾರ ಕಳಪೆಯಿಂದ ಮಕ್ಕಳ ಜೀವಕ್ಕೆ ತೊಂದರೆ ಬರಲು ಕಾರಣರಾದ ಅಲೆಮಾರಿ ವಸತಿ ನಿಲಯ ತಾವರಗೇರಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಅಡುಗೆದಾರರು ಮತ್ತು ಸಹಾಯಕ ಅಡುಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
5]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 140/2017 ಕಲಂ: 32, 34  ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ: 26-09-2017 ರಂದು ಸಾಯಾಂಕಾಲ 16-10 ಗಂಟೆಗೆ ಕುಂಬಳಾವತಿ ಗ್ರಾಮದ ಅಗಸಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಳಕಪ್ಪ ತಂದೆ ಈರಪ್ಪ ಗುಡಿ, ಹಾಗೂ ಲಕ್ಷ್ಮಣ ತಂದೆ ಹನಮಪ್ಪ ಹನಮಸಾಗರ ಇಬ್ಬರೂ ಸಾ: ಕುಂಬಳಾವತಿ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ರವರು ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-452, 28, 168  ರವರೊಂದಿಗೆ ಠಾಣೆಯಿಂದ ಹೊರಟು ಯರಗೇರಿ ಕ್ರಾಸದಿಂದ ಎಡಕ್ಕೆ ತಿರುಗಿ, ಮದ್ನಾಳ, ಯರಗೇರಿ ಕುಂಬಳಾವತಿ ಗ್ರಾಮವನ್ನು ಸಾಯಾಂಕಾಲ 16-40 ಗಂಟೆಗೆ ತಲುಪಿ ಸಾಯಾಂಕಾಲ 16-45 ಗಂಟೆಗೆ ದಾಳಿಮಾಡಿದಾಗ ಕಳಕಪ್ಪ ತಂದೆ ಈರಪ್ಪ ಗುಡಿ ಹಾಗೂ ಲಕ್ಷ್ಮಣ ತಂದೆ ಹನಮಪ್ಪ ಹನಮಸಾಗರ ಇಬ್ಬರೂ ಸಾ: ಕುಂಬಳಾವತಿ ರವರು ಸಿಕ್ಕಿಬಿದಿದ್ದು ಕಳಕಪ್ಪನ ಹತ್ತಿರ 1] 180 .ಎಂ.ಎಲ್.ಅಳತೆಯ 27 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1519-29 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 750-00 ರೂಪಾಯಿ ಸಿಕ್ಕಿದ್ದು, ಲಕ್ಷ್ಮಣನ ಹತ್ತಿರ 180 ಎಂ.ಎಲ್. ಅಳತೆಯ 29 ಟೆಟ್ರಾ ಪಾಕೇಟಗಳು OLD TAVAREN ಪ್ರತಿಯೊಂದಕ್ಕೆ ಎಂ.ಆರ್.ಪಿ. 56-27 ಅಂತಾ ಬೆಲೆ ಇದ್ದು, ಇವುಗಳ ಒಟ್ಟು ಕಿಮ್ಮತ್ 1631-83 ರೂಪಾಯಿಗಳು ಆಗುತ್ತಿದ್ದು, ಹಾಗೂ ನಗದು ಹಣ 890-00 ರೂಪಾಯಿ ಸಿಕ್ಕಿದ್ದು, ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6]  ಬೇವೂರು ಪೊಲೀಸ್  ಠಾಣೆ  ಗುನ್ನೆ ನಂ. 123/2017 ಕಲಂ: 32, 34  ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ: 26.09.2017 ರಂದು ಸಾಯಂಕಾಲ 4:45 ಗಂಟೆಯ ಸುಮಾರಿಗೆ ಆರೋಪಿ ಅಬ್ದುಲ್ ತಂದೆ ಚಂದುಸಾಬ ಡೇರೆದಾರ ವಯ: 20 ವರ್ಷ ಜಾತಿ: ಮುಸ್ಲಿಂ ಉ: ಚಿಕನ್ಶಾಪ್ ವ್ಯಾಪಾರಿ ಸಾ: ಕುದರಿಮೋತಿ ಇತನು ಕುದರಿಮೋತಿ ಗ್ರಾಮದ ಹನಮಂತಪ್ಪ ರ್ಯಾವಣಕಿ ಇವರ ಮನೆಯ ಹತ್ತಿರ ಮಂಗಳೂರು ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಯಾವದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಬೇವೂರ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ ಆರೋಪಿತನು ಸಿಕ್ಕಿಬಿದ್ದಿದ್ದು ಆರೋಪಿತನಿಂದ 90 ಎಂ.ಎಲ್ ಅಳತೆಯುಳ್ಳ ‘’HAYWARDS CHEERS WHISKYಎಂಬ ಲೇಬಲುಳ್ಳ ಒಟ್ಟು  ಮಧ್ಯದ ಟೇಟ್ರಾ ಪಾಕೇಟಗಳು ರೂಪಾಯಿ 843=9 ರೂಪಾಯಿ ಕಿಮ್ಮತ್ತಿನ ಮಧ್ಯವನ್ನು ಹಾಗೂ ಮಧ್ಯ ಮಾರಾಟದ ನಗದು ಹಣ 110=00 ರೂಪಾಯಿಗಳನ್ನು ಜಪ್ತ ಮಾಡಿಕೊಂಡಿದ್ದು, ಸದರಿಯವುಗಳನ್ನು ವೈಭವ ವೈನಶಾಪದಿಂದ ತೆಗೆದುಕೊಂಡು ಬಂದಿರುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ವರದಿ ಸಲ್ಲಿಸಿದ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008