Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 28, 2017

1]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 141/2017 ಕಲಂ: 279, 337, 338 .ಪಿ.ಸಿ..
ದಿನಾಂಕ: 27-09-2017 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಫಿರ್ಯಾದಿ ಲಕ್ಷ್ಮಣ ತಂದೆ ಶಂಕರ ಕುಲಕರ್ಣಿ ವಯಾ: 70 ವರ್ಷ ಜಾ: ಬ್ರಾಹ್ಮಣ : ಒಕ್ಕಲುತನ ಸಾ: ಕಾಕನೂರ ತಾ: ಬದಾಮಿ ಜಿ: ಬಾಗಲಕೋಟ ಹಾಗೂ ಅವರ ಹೆಂಡತಿ ಲತಾ ಮತ್ತು ಅವರ ಸಂಬಂದಿಕರಾದ ಶ್ರೀದೇವಿ ರವರು ಹನಮಸಾಗರದ ಭಿನವ ತಿರುಪತಿ ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಟೋ ನಂ: ಕೆ.-37 -7390  ನೇದ್ದರಲ್ಲಿ ಹನಮಸಾಗರ ಕಡೆಗೆ ಬರುವಾಗ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಹಾಗೂ ಅಲಕ್ಷತನಿಂದ ನಡೆಸಿಕೊಂಡು ರಸ್ತೆಯ ಸ್ಥಿತಿಗತಿಯನ್ನು ಲೆಕ್ಕಸದೆ ವೆಂಕಟೇಶ್ವರ ದೇವಸ್ಥಾನದ ಕ್ರಾಸ್ ಹತ್ತಿರ ಆಟೋವನ್ನು ತಿರಿವಿದಾಗ ಹನಮಸಾಗರ ಕಡೆಯಿಂದ ಹುಲಗೇರಿ ಕಡೆಗೆ ಹೊರಟ ಮೋಟಾರ ಸೈಕಲ ನಂ: ಕೆ.-29 ಯುವ್-7880 ನೇದ್ದರ ಸವಾರನಿಗೆ ಹಾಯಿಸಿ ಅಪಘಾತ ಪಡಿಸಿ ಆಟೋವನ್ನು ರಸ್ಥೆಯ ಕೆಳಗೆ ಕೆಡವಿ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಸಾದಾ ಹಾಗೂ ಬಾರಿ ಸ್ವರೂಪದ ಗಾಯಗಳಾಗಿದ್ದು ಹಾಗೂ ಅವರ ಮನೆಯವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹಾಗೂ ಮೋಟಾರ ಸೈಕಲ ಸವಾರ ಮಂಜುನಾಥ ರವರಿಗೆ ಬಾರಿ ಹಾಗೂ ಸಾದ ಸ್ವರೂಪದ ಗಾಯಗಳಾಗಿದ್ದು ಈಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 221/2017 ಕಲಂ. 78 (111) Karnataka Police ACT.
ದಿನಾಂಕ:-27-09-2017 ರಂದು ಸಂಜೆ 6-45 ಗಂಟೆಗೆ ಕಾರಟಗಿಯ ನಜೀರ ಕಾಲೋನಿಯ ಶರಣಪ್ಪನ ಹೊಟೇಲ್ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ಶ್ರೀ ಎಂ.ಶಿವಕುಮಾರ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ. 1] ರಸೂಲಸಾಬ ತಂದೆ ಅಬ್ದುಲ್ ಸಾಬ ಮುಲ್ಲಾ, ವಯಾ 50 ವರ್ಷ ಜಾತಿ ಮುಸ್ಲಿಂ ಉ: ಚಾಲಕ ಸಾ: ನಜೀರ ಕಾಲೋನಿ ಕಾರಟಗಿ 2] ಶರಣಪ್ಪ ತಂದೆ ಬಸಪ್ಪ ಬಂಡಿ, ವಯಾ 35 ವರ್ಷ ಜಾತಿ ಕುರುಬರು ಉ: ಒಕ್ಕಲುತನ ಸಾ: ನಜೀರ ಕಾಲೋನಿ ಕಾರಟಗಿ ಇವರನ್ನು ಹಿಡಿದಿದ್ದು ಸಿಕ್ಕಿಬಿದ್ದವನ ಕಡೆಯಿಂದ 2640=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಸದ್ರಿ ಸಿಕ್ಕ ಆರೋಪಿತರು ಮಟ್ಕಾ ಪಟ್ಟಿ ಮತ್ತು ಹಣ ಮಟ್ಕಾ ಆರೋಪಿ 3] ಶರಣಪ್ಪ @ ಓಂಪುರಿ ಶರಣಪ್ಪ ಸಾ: ಬುದಗುಂಪಾ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಕಾರಟಗಿ ಪೊಲೀಸ್  ಠಾಣೆ  ಯು.ಡಿ.ಆರ್. ನಂ. 26/2017 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ 27-09-2017 ರಂದು ಮುಂಜಾನೆ 10-30 ಗಂಟೆಗೆ ಫಿರ್ಯಾಧಿದಾರ ಶ್ರೀ ಸಂಗಪ್ಪ ತಂದೆ ಫಕೀರಪ್ಪ ಬಿಸರಳ್ಳಿ ವಯ 57 ವರ್ಷ ಜಾತಿ ಗಾಣಿಗ ಉ. ಒಕ್ಕಲುತನ ಸಾ. ಟಣಕನಕಲ್ ತಾ. ಕೊಪ್ಪಳ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ,  ತನಗೆ ಒಟ್ಟು 5 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳಿದ್ದು ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗಳಾದ ಶ್ರೀಮತಿ ಶಶಿಕಲಾ ಗಂಡ ಶರಣಪ್ಪ ಪೊಲೀಸ್ ಪಾಟೀಲ್ ವಯ 24 ವರ್ಷ ಈಕೆಯನ್ನು ಈಗ್ಗೆ 3 ವರ್ಷದ ಹಿಂದೆ ಸೋಮನಾಳ ಗ್ರಾಮದ ಶರಣಪ್ಪ ತಂದೆ ಬಸಪ್ಪ ಪೊಲೀಸ್ ಪಾಟೀಲ್ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಸದರಿಯವರಿಗೆ ಶ್ವೇ ಅಂತಾ 2 ವರ್ಷದ ಒಬ್ಬಳೇ ಮಗಳಿರುತ್ತಾಳೆ. ನನ್ನ ಮಗಳು ಶಶಿಕಲಾ ಈಕೆಗೆ ಈಗ್ಗೆ 1 ವರ್ಷದಿಂದ ಮುಟ್ಟಿನ ಸಮಯದಲ್ಲಿ ಆಗಾಗ ಹೊಟ್ಟೆನೋವು ಬರುತ್ತಿದ್ದು ಈ ಬಗ್ಗೆ ನಾವು ಮತ್ತು ನನ್ನ ಮಗಳ ಗಂಡನ ಮನೆಯವರು ಕೂಡಿಕೊಂಡು ಆಕೆಯನ್ನು ಖಾಸಗಿಯಾಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿದಾಗ್ಯೂ ಗುಣಮುಖಳಾಗದೇ ಇದ್ದು ಇದರಿಂದ ಮಾನಸಿಕ ಮಾಡಿಕೊಂಡಿದ್ದು ಇದೇ ಭಾದೇಯಿಂದ ದಿನಾಂಕ 25-09-2017 ರಂದು ಬೆಳಗಿನ 6-00 ಗಂಟೆಯಿಂದ ದಿನಾಂಕ 27-09-2017 ರ ಬೆಳಗಿನ 6-00 ಗಂಟೆ ಅವಧಿಯಲ್ಲಿ ಮುಟ್ಟಿನ ಹೊಟ್ಟೆ ನೋವಿನ ಸಂಬಂಧ ಮಾನಸಿಕ ಮಾಡಿಕೊಂಡು ತನ್ನ 2 ವರ್ಷದ ಮಗಳು ಶ್ವೇತಾಳೊಂದಿಗೆ ತುಂಗಭದ್ರ  ಎಡದಂಡೆ  ಕಾಲುವೆಗೆ ಹಾರಿ ಮೃತಪಟ್ಟದ್ದು ಸದರಿ ನನ್ನ ಮಗಳ ಮರಣದಲ್ಲಿ ನಮ್ಮದು ಯಾವುದೇ ತರಹದ ಅನುಮಾನ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008