Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 27, 2017

1]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ: 276/2017 ಕಲಂ. 32, 34 ಕೆ.ಇ. ಯಾಕ್ಟ
ದಿನಾಂಕ : 26-11-2017 ರಂದು ರಾತ್ರಿ 8-45 ಗಂಟೆಗೆ ಶ್ರೀ ವೆಂಕಟೇಶ ಎ.ಎಸ್.ಐ. ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ, ದಿನಾಂಕ 26-11-2017 ರಂದು ರಾತ್ರಿ 6-45 ಗಂಟೆಗೆ ಕಾಮಗುಂಡಮ್ಮಕ್ಯಾಂಪ್ ಗ್ರಾಮದ ಆರೋಪಿ ಪ್ರಭುರಾಜ ಮುಸಾಲಿ ಈತನ ಗಿರಣಿ ಹತ್ತಿರ ಇರುವ ಡಬ್ಬಿ ಅಂಗಡಿಯಲ್ಲಿ ನಮೂದು ಮಾಡಿದ ಆರೋಪಿತನು ತನ್ನ ಮನೆಯ ಮುಂದೆ ಇರುವ ಡಬ್ಬಾ ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಮಾನ್ಯ ಸಿ.ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ಎ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಆರೋಪಿತನ ಡಬ್ಬಾ ಅಂಗಡಿಯಿಂದ  ಒಟ್ಟು 45 ಮದ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು ರೂ. 1998=39 ಬೆಲೆ ಬಾಳುವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ: 353/2017  ಕಲಂ. 279, 338 ಐ.ಪಿ.ಸಿ.

ದಿನಾಂಕ: 26-11-2017 ರಂದು ಸಂಜೆ 7:00 ಗಂಟೆಗೆ ನಾನು ಮರಳಿ ಗ್ರಾಮ ಸೀಮಾದ ಬ್ರಿಡ್ಜ್ ಹತ್ತಿರ ಇರುವ ತಾಯಮ್ಮ ಗುಡಿಗೆ ನಡೆದುಕೊಂಡು ಹೋಗುತ್ತಿರುವಾಗ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಮಲ್ಲಿಕಾರ್ಜುನ ತಂದೆ ಬಸಪ್ಪ, ವಯಸ್ಸು 30 ವರ್ಷ, ಜಾತಿ: ಕುರುಬರು ಉ: ವೆಲ್ಡಿಂಗ್ ಕೆಲಸ ಸಾ: ಪ್ರಗತಿನಗರ ತಾ: ಗಂಗಾವತಿ ಈತನು ಹಿರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂಬರ್: ಕೆ.ಎ-36/ ಕೆ-1000 ನೇದ್ದನ್ನು ಅತೀ ಜೋರಾಗಿ ಮತ್ತು ತೀರ್ವ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವೇಗ ನಿಯಂತ್ರಿಸಲು ಅಗದೇ ರಸ್ತೆಯ ಎಡಗಡೆ ಇದ್ದ ನನಗೆ ಹಿಂಭಾಗದಿಂದ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನನ್ನ ಎಡಗಾಲು ಪಾದದ ಮೇಲೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು,  ಮತ್ತು ಎಡ ಮೊಣಕಾಲ ಕೆಳಗಡೆ ರಕ್ತಗಾಯವಾಯಿತು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008