Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, January 14, 2018

1] ಯಲಬುರ್ಗಾ ಪೊಲೀಸ್ ಠಾಣೆ 03/2018  ಕಲಂ. 279, 304(ಎ) ಐ.ಪಿ.ಸಿ
ದಿನಾಂಕ: 13-01-2018 ರಂದು ಬೆಳಗ್ಗೆ 09-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಒಂದು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 04-01-2018 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಗನಾದ ಈರಪ್ಪ ತಂದೆ ಫಕೀರಪ್ಪ ಕಳಸಪ್ಪನವರು, ಸಾ: ಬಂಡಿಹಾಳ ಈತನು ದಿನಾಂಕ: 04-01-2018 ರಂದು ಸಂಜೆ 6-00 ಗಂಟೆಯ ಸುಮಾರಿಗೆ ದ್ಯಾಮೂಣಚಿಗೆ ಗ್ರಾಮಕ್ಕೆ ತನ್ನ ಅಕ್ಕಳಿಗೆ ಮಾತನಾಡಿಸಿಕೊಂಡು ಬರುವ ಸಲುವಾಗಿ ತನ್ನ ಮೋಟಾರ್ ಸೈಕಲ್ ಚಸ್ಸಿ ನಂ : ME4JC36JB7340589 ನೇದ್ದರ ಮೇಲೆ ಹೋಗಿ, ಮಾತನಾಡಿಸಿಕೊಂಡು ವಾಪಸ್ ಊರಿಗೆ ಬರುವ ಸಲುವಾಗಿ ಊರಿಗೆ ಬೇಗನೇ ಹೋಗಬೇಕು ಅಂತಾ ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನ್ನು ಸೂಡಿ-ಸಂಕನೂರು ರಸ್ತೆಯ ಮೇಲೆ ಸಂಕನೂರು ಸೀಮಾದಲ್ಲಿ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ಮೋಟಾರ್ ಸೈಕಲ್ ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆಗೆ ಭಾರಿ ಸ್ವರೂಪದ ಗಾಯವಾಗಿದ್ದು, ಬಾಯಿಂದ, ಮೂಗಿನಿಂದ ರಕ್ತ ಬಂದಿದ್ದು, ಅಲ್ಲದೇ ಅಲ್ಲಲ್ಲಿ ತೆರೆಚಿದ ಗಾಯವಾಗಿದ್ದು, ಆತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 12-01-2018 ರಂದು ರಾತ್ರಿ 8-30 ಸುಮಾರಿಗೆ ಚಿಕತ್ಸೆ ಫಲಕಾರಿಯಾದೇ ಮೃತ ಪಟ್ಟಿರುತ್ತಾನೆ . ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ  ಗುನ್ನೆ ನಂ: 05/2018 ಕಲಂ: 279, 338, 304(ಎ) ಐ.ಪಿ.ಸಿ.
ದಿನಾಂಕ: 13-01-2018 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ಕುಷ್ಟಗಿ-ಹೊಸಪೇಟೆ ಎನ್.ಎಚ್-50 ರಸ್ತೆಯಲ್ಲಿ ಕುಸ್ಟಗಿ ಕಡೆಯಿಂದ ಆರೋಪಿತನು ತನ್ನ ಲಾರಿ ನಂ. ಟಿಎನ್-52/ಜೆ-8577 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಣಬಳ್ಳಾರಿ ಕ್ರಾಸನಲ್ಲಿ ಇರಕಲಗಡದಿಂದ ವಣಬಳ್ಳಾರಿಗೆ ರಸ್ತೆ ಕ್ರಾಸ್ ಮಾಡಿಕೊಂಡು ಬರುತ್ತಿದ್ದ ಟಿ.ವಿ.ಎಸ್. ಎಕ್ಸೆಲ್ ವಾಹನ ನಂ. ಕೆಎ-35/ಕ್ಯೂ-9943 ನೇದ್ದನ್ನು ಲೆಕ್ಕಿಸದೇ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಟಿ.ವಿ.ಎಸ್. ವಾಹನ ಸವಾರ ಭೀಮಪ್ಪ ತಂದೆ ಗುರುಸಿದ್ದಪ್ಪ ಹಿಡಕಲ್ ಸಾ: ಬೂದಿಹಾಳ ರಾಯಭಾಗ ತಾಲೂಕ ಇತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಿರುಪಣ್ಣ ತಂದೆ ಈರಪ್ಪ ಚನ್ನಾಳವರ ಸಾ: ಮಂಗಳೂರು ಯಲಬುರ್ಗಾ ತಾಲೂಕ ಇತನಿಗೆ ರಕ್ತಗಾಯಗಳಾಗಿರುತ್ತದೆ ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 05/2018 ಕಲಂ 279, 338, 304(ಎ) ಐ.ಪಿ.ಸಿ. ರಿತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ  ಗುನ್ನೆ ನಂ: 02/2018 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ: 13-01-2018 ರಂದು ಮುಂಜಾನೆ 7-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ. ಸ್ವೀಕೃತವಾಗಿದ್ದರಿಂದ ದಿನಾಂಕ: 12-01-2018 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಫಿರ್ಯಾದಿ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ: ಕೆ.ಎ-37/ಇಎ-5126 ನೇದ್ದರ ಹಿಂಭಾಗದಲ್ಲಿ ಮೃತ ಯಲ್ಲಪ್ಪ ತಾಯಿ ಗಂಗವ್ವ 40 ವರ್ಷ ಎಂಬುವನನ್ನು ಕೂಡಿಸಿಕೊಂಡು ಹಲಗೇರಿ-ಹಿರೇಸಿಂಧೋಗಿ ಮುಖ್ಯ ರಸ್ತೆಯಲ್ಲಿ ನಿಧಾನವಾಗಿ ಬರುತ್ತಿರುವಾಗ ಕಾಟ್ರಳ್ಳಿ ಸೀಮಾದಲ್ಲಿ ಹಿರೇಸಿಂದೋಗಿ ಕಡೆಯಿಂದ ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ನಡಸುತ್ತಿದ್ದ ಫಿರ್ಯಾದಿ ಗೆ ತೀವ್ರ ಸ್ವರೂಪದ ಗಾಯಗಳಾಗಿ ಮತ್ತು ಹಿಂಭಾಗ ಕುಳಿತುಕೊಂಡಿದ್ದ ಯಲ್ಲಪ್ಪನ ತಲೆಗೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ  ಗುನ್ನೆ ನಂ: 08/2018 ಕಲಂ: 78(3) Karnataka Police Act & 420 IPC.
ಕುಷ್ಟಗಿ ಪಟ್ಟಣದ ತಿಕೋಟಿಕರ್ ಪೆಟ್ರೋಲ್ ಬಂಕ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮೀ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಆರೋಪಿತರನ್ನು ಹಾಗೂ ಅವರಿಂದ ಜೂಜಾಟದ ಒಟ್ಟು ಹಣ 20500=00 ರೂ, ಒಂದು ಬಾಲ್ ಪೆನ್ನು, ಒಂದು ಮಟಕಾ ಚೀಟಿ  ಹಾಗೂ ಒಂದು ಮಟಕಾ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಸದರಿ ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಚೀಟಿ ಬರೆದುಕೊಟ್ಟು ಅವರಿಂದ ಹಣ ಪಡೆದು ಮೋಸ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಹನುಮಸಾಗರ ಪೊಲೀಸ್ ಠಾಣೆ  ಗುನ್ನೆ ನಂ: 05/2018 ಕಲಂ: 87 Karnataka Police Act:.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಸಾಯಾಂಕಾಲ 16-05 ಗಂಟೆಗೆ ಠಾಣೆಯಲ್ಲಿದ್ದಾಗ ಕೊಡ್ತಗೇರಿ ಸೀಮಾದ ತೆಗ್ಗಿನ ಹಳ್ಳದ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಹೋಗಿ ಅಲ್ಲಿಯೇ ಗಿಡಗಳ ಮರೆಯಾಗಿ ನಿಂತು ನೋಡಲಾಗಿ ತೆಗ್ಗಿನ ಹಳ್ಳದ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 3 ಜನರು ಆರೋಪಿತರು ಸಿಕ್ಕಿಬಿದಿದ್ದು ಅವರಿಂದ ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 2270/- ನಗದು ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ: 07/2018 ಕಲಂ: 87 Karnataka Police Act:.

ದಿನಾಂಕ: 13-01-2018 ರಂದು ಸಾಯಂಕಾಲ 4:10 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ತೊಂಡಿಹಾಳ ಗ್ರಾಮದ ಬನ್ನಿಕಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿದಾಗ 7 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ  ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 4,150=00 ರೂ. 52 ಇಸ್ಪೀಟ್ ಎಲೆಗಳು, ಒಂದು ಸಿಮೇಂಟ್ ಪ್ಲಾಸ್ಟಿಕ್ ಚೀಲ ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008