Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 16, 2018

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 12/2018 ಕಲಂ 143, 147,447, 323, 504, 506  ಸಹಿತ 149 ಐ.ಪಿ.ಸಿ. ಮತ್ತು 3(1)(x) SC/ST. P.A. Act. 1989.
ಇಂದು ದಿನಾಂಕ:- 15-1-2018 ರಂದು ಮದ್ಯಾಹ್ನ 1-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ ರಾಜಗೋಪಾಲ ತಂದಿ ಅಳಗಿರಿ  ವಯಾ- 54 ವರ್ಷ ಜಾ- ಮಾಲದಾಸರಿ ( ಪರಿಶಿಷ್ಟ ಜಾತಿ )  ಸಾ- ವಡ್ಡರಹಟ್ಟಿ ಕ್ಯಾಂಪ್ ತಾ- ಗಂಗಾವತಿ ಜಿ- ಕೊಪ್ಪಳ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ಗಂಗಾವತಿ ತಾಲೂಕಿನ ವೆಂಕಟಗಿರಿ ಹೊಬಳಿ ಬಾಗಲಾಪೂರ ಗ್ರಾಮದ ಸರ್ವೆ ನಂ-10/12 ವಿಸ್ತೀರ್ಣ ನಂ : 01-14 ಗುಂಟೆ ಜಮೀನು ನಮ್ಮ ಸ್ವಂತದ್ದಾಗಿದ್ದು ನಾವು ಸದರಿ ಜಮೀನಿನ ಖಾತಾದಾರರು, ಹಿಸ್ಸಾದಾರರು, ಅಲಾಟ್ದಾರರು  ಇದ್ದು ಸದರಿ ಜಮೀನಿನಲ್ಲಿ ನಾನು ಸುಮಾರು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದಿರುತ್ತೇನೆ  ಕೆಲವು ವರ್ಷಗಳಿಂದ ನಮ್ಮ ಗ್ರಾಮದ  ಕುರುಬ ಜನಾಂಗದ  ಮತಾಂಧ, ಕಾಮಾಂಧ, ಸವರ್ಣಿಯ ವ್ಯಕ್ತಿಗಳಾದ 1)ಕೆಂಚಪ್ಪ ತಂದಿ ಹನಮಂತಪ್ಪ 2) ಮುದಿಯಪ್ಪ ತಂದಿ ಹನಮಂತಪ್ಪ 3)ಬಸವರಾಜ ತಂದಿ ಹನಮಂತಪ್ಪ 4) ಪ್ರಭು ತಂದಿ ತಾಯಪ್ಪ 5)  ಗಾಧಿಲಿಂಗಪ್ಪ ತಂದಿ ಹನಮಂತಪ್ಪ ಸಾ- ಎಲ್ಲರೂ ವಡ್ಡರಹಟ್ಟಿ ಇವರಿಗೆ  ಈ ಮೊದಲು ನನ್ನ ಜಮೀನನ್ನುಗುತ್ತಿಗೆ ಮಾಡುತ್ತಿದ್ದರು. ನಂತರ ಅವರು ನಮ್ಮ ಜಮೀನನ್ನು  ಬಿಟ್ಟುಕೊಡಲು ಕೇಳಿದಾಗ ಈ ಬೆಳಗೆ ಮುಂದಿನ ಬೆಳೆ ಎಂದು ಸಬೂಬು ಹೇಳುತ್ತಾ ಬಂದಿರುತ್ತಾರೆ. ಮುಂದುವರೆದು ಈಗಲೂ ಕೂಡಾ  ಅವರು ಅನಧೀಕೃತವಾಗಿ ನಮ್ಮ ಜಮೀನನನ್ನು ಸಾಗು / ಕಟಾವು ಮಾಡುತ್ತಿದ್ದಾರೆ. ಇದನ್ನು ಪ್ರಶಿಸಿದಾಗ ಸದರಿ ಮೇಲ್ಕಂಡ ಸಬಲ, ಪ್ರಭಲ, ಸಮರ್ಥ, ಸದೃಢ, ಬಲಿಷ್ಟ, ಬಲಾಡ್ಯ ವ್ಯಕ್ತಿಗಳಗು  ಏಕಾಏಕಿ ನನ್ನ ಮೇಲೆ ಹಾಗೂ ನನ್ನ ಸಹೋದರನಾದ ದರ್ಮರಾಜ ತಂದಿ ಅಳಗಿರಿಯವರ ಮೇಲೆ ದಿನಾಂಕ : 28-12-2017 ರಂದು ಸಾಯಂಕಾಲ 06-00 ಗಂಟೆಗೆ ದೌರ್ಜನ್ಯ  ಮಾಡಿ ಹೊಡದಿರುತ್ತಾರೆ ಮತ್ತು ಜಮೀನಿನಲ್ಲಿಯ ಭತ್ತವನ್ನು ಹೊತ್ತೊಯದದಿರುತ್ತಾರೆಲ ಅಲ್ಲದೆ ಕಮ್ಮಿ ಜಾತಿ ಸೂಳೇ ಮಕ್ಕಳೆ  ಎಂದು ಎಂದು ಅವಾಚ್ಯ ಶಬ್ದಗಳಿಂದ  ನಿಂದಿಸಿ ಕೊಲೆಬೆದರಿಕೆ ಜೀವಭೆದರಿಕೆ, ಪ್ರಾಣಬೆದರಿಕೆ ಹಾಕಿರುತ್ತಾರೆ  ಇವರು ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ 1989  ಹಾಗೂ ಪಿಟಿಸಿಯಲ್ ಕಾಯ್ದೆ ಕಲಂ : 5 ರ ಪ್ರಕಾರ ಕಾನೂನು ಉಲ್ಲಂಗನೆ ಮಾಡಿರುತ್ತಾರೆ  ಈ ಬಗ್ಗೆ ವಿಚಾರ ಮಾಡಿ  ಕಾರಣಾಂತರಗಳಿಂದ ಫಿರ್ಯಾದಿ ಕೊಡಲು ವಿಳಂಬವಾಗಿರುತ್ತದೆ ಅಂತಾ  ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 11/2018 ಕಲಂ 379 ಐ.ಪಿ.ಸಿ.
ದಿನಾಂಕ 15-01-2018 ರಂದು 19-00 ಗಂಟೆಗೆ ಶ್ರೀಮತಿ ಸುನಿತಾ ನೆಕ್ಕಂಟಿ ಗಂಡ ಶ್ರೀನಿವಾಸ ನೆಕ್ಕಂಟಿ ವಯಾ: 44 ವರ್ಷ ಜಾ: ಕಮ್ಮಾ ಉ: ಹೌಸ್ ವೈಪ್ ಸಾ: ವಡ್ಡರಹಟ್ಟಿ, ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ: 07-01-2018 ರಂದು  ಫಿರ್ಯಾದಿದಾರರು ತಮ್ಮ ಮಗಳ ಜೊತೆಗೆ ಕಾರಿನಲ್ಲಿ ಗಂಗಾವತಿ ನಗರದ ಕೋಟೆ ಆಂಜನೇಯ ದೇವಸ್ತಾನಕ್ಕೆ ಬಂದು ದೇವಸ್ತಾನದ ಒಳಗೆ ಹೋದ ಕಾಲಕ್ಕೆ ಸಂಜೆ 6-00 ಗಂಟೆಯಿಂದ 6-20 ಗಂಟೆಯ ಮಧ್ಯದ ಅವಧಿಯಲ್ಲಿ    ಯಾರೋ ಕಳ್ಳರು ಕಾರಿನಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು , ಸದರಿ ವ್ಯಾನಿಟಿ ಬ್ಯಾಗನಲ್ಲಿ   ಪಿರ್ಯಾಧಿದಾರರ ಮಗಳಾದ ಲಲಿತಾ ಶ್ರೀಯಾ ರವರ ಪಾಸಪೋರ್ಟ ನಂ P 7837268 ನೇದ್ದು ಹಾಗೂ 5000-00 ನಗದು ಹಣ ಮತ್ತು ಇತರೆ ದಿನ ಬಳಕೆಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ವಗೈರೆಯಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008